ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರದ ಹಣಗವಾಡಿ ಪಂಚಮಸಾಲಿ ಪೀಠದಲ್ಲಿ ಇಂದು ಲೆಕ್ಕ ಕೊಡುವ ಪ್ರಕ್ರಿಯೆ ಆರಂಭವಾಗಿದ್ದು ಈ ವೇಳೆ ಭಕ್ತರು ಹಾಗೂ ಟ್ರಸ್ಟ್ ನಡುವೆ ದೊಡ್ಡ ಹೈಡ್ರಮಾವೇ ನಡೆಯಿತು.
ಈ ವೇಳೆ ಪರ ವಿರೋಧ ಘೋಷಣೆಗಳು ಕೂಡ ಕೇಳಿ ಬಂದವು. ಲೆಕ್ಕ ಕೊಡುವ ಸಮಾವೇಶಕ್ಕೆ ಶ್ರೀಗಳ ಪರ ಭಕ್ತರು ನುಗ್ಗಿದ್ದಾರೆ. ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಟ್ರಸ್ಟ್ ಬೆಂಬಲಿಗರು ಹಾಗೂ ಸ್ವಾಮೀಜಿ ಬೆಂಬಲಿಗರ ಮಧ್ಯೆ ವಾಕ್ಸ ಮರ ನಡೆದಿದೆ.
ಗಲಾಟೆ ಗದ್ದಲದ ಬಳಿಕ ಲೆಕ್ಕ ಕೊಡುವ ಪ್ರಕ್ರಿಯೆ ಆರಂಭವಾಗಿದೆ, ಹರಿಹರದ ಮಠದ ಬಳಿ ಲೆಕ್ಕ ಕೊಡು ಪ್ರಕ್ರಿಯ ಆರಂಭವಾಗಿದ್ದು ಸಮಾವೇಶದ ಮೂಲಕ ವಚನಾನಂದ ಶ್ರೀಗಳಿಗೆ ತಿರುಗೇಟು ಕೊಡುತ್ತಿದ್ದಾರೆ. 2008 ರಿಂದ 2026 ವರೆಗಿನ ಲೆಕ್ಕ ಕೊಡುತ್ತಿದ್ದಾರೆ ಟ್ರಸ್ಟಿಗಳು. ಬಸವರಾಜ ದಿಂಡೂರು, ಜ್ಯೋತಿಪ್ರಕಾಶ್ ಹಾಗೂ ಎಚ್ಎಸ್ ನಾಗರಾಜ್ ಇದೀಗ ಲೆಕ್ಕ ಕೊಡುತ್ತಿದ್ದಾರೆ.








