Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಾಸಕ ಗೋಪಾಲಕೃಷ್ಣ ಬೇಳೂರು ‘ಮಾಸ್ಟರ್ ಪ್ಲಾನ್’: ಇನ್ಮುಂದೆ ಸಾಗರ ಆಗಲಿದೆ ‘ಹೈಟೆಕ್ ಸಿಟಿ’!

25/04/2026 12:12 PM

‘ಕ್ಯಾ ಪಾಲಿಟಿಷಿಯನ್ ಬನೇಗಾ ರೇ ತೂ?’: `ರಾಘವ್ ಚಡ್ಡಾ’ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ `ಮೀಮ್‌’ಗಳ ಸುರಿಮಳೆ.!

25/04/2026 12:09 PM

ನಿಮ್ಮ ಮೆದುಳು `ಶಾರ್ಟ್ ವಿಡಿಯೋಗಳನ್ನು ಇಷ್ಟಪಡಲು ಮತ್ತು ಗಂಟೆಗಟ್ಟಲೆ ಸ್ಕ್ರಾಲ್ ಮಾಡಲು ಕಾರಣವೇನು ಗೊತ್ತಾ?

25/04/2026 12:01 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕ್ಯಾ ಪಾಲಿಟಿಷಿಯನ್ ಬನೇಗಾ ರೇ ತೂ?’: `ರಾಘವ್ ಚಡ್ಡಾ’ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ `ಮೀಮ್‌’ಗಳ ಸುರಿಮಳೆ.!
INDIA

‘ಕ್ಯಾ ಪಾಲಿಟಿಷಿಯನ್ ಬನೇಗಾ ರೇ ತೂ?’: `ರಾಘವ್ ಚಡ್ಡಾ’ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ `ಮೀಮ್‌’ಗಳ ಸುರಿಮಳೆ.!

By kannadanewsnow5725/04/2026 12:09 PM

ನವದೆಹಲಿ: ಆಮ್ ಆದ್ಮಿ ಪಕ್ಷದ (AAP) ಪ್ರಭಾವಿ ನಾಯಕ ರಾಘವ್ ಚಡ್ಡಾ ಅವರು ತಮ್ಮ ಆರು ಮಂದಿ ಸಂಸದರೊಂದಿಗೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ಹಠಾತ್ ಬೆಳವಣಿಗೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಮೀಮ್‌ಗಳ ಮೂಲಕ ವ್ಯಂಗ್ಯವಾಡುತ್ತಿದ್ದಾರೆ.

ರಾಜಕೀಯ ವಿಲೀನ
ರಾಜ್ಯಸಭೆಯ ಎಎಪಿ ಸದಸ್ಯರಲ್ಲಿ ಮೂರನೇ ಎರಡರಷ್ಟು ಸದಸ್ಯರು ನಾವು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ ಎಂದು ರಾಘವ್ ಚಡ್ಡಾ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಇವರೊಂದಿಗೆ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರಂತಹ ಪ್ರಮುಖ ನಾಯಕರು ಕಾಣಿಸಿಕೊಂಡಿದ್ದಾರೆ.

ವೈರಲ್ ಆಗುತ್ತಿರುವ ಪ್ರಮುಖ ಮೀಮ್‌ಗಳು
ರಾಘವ್ ಚಡ್ಡಾ ಅವರ ಈ ನಿರ್ಧಾರ ಹೊರಬೀಳುತ್ತಿದ್ದಂತೆ ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಮೀಮ್‌ಗಳ ಮಹಾಪೂರವೇ ಹರಿದುಬಂದಿದೆ:

ಹೇರಾ ಫೇರಿ ಸ್ಟೈಲ್: ‘ಹೇರಾ ಫೇರಿ’ ಚಿತ್ರದ ಪರೇಶ್ ರಾವಲ್ ಅವರ ಫೋಟೋ ಬಳಸಿ “ಕ್ಯಾ ಪಾಲಿಟಿಷಿಯನ್ ಬನೇಗಾ ರೇ ತೂ?” (ನೀನ್ಯಾವ ರೀತಿಯ ರಾಜಕಾರಣಿಯಾಗುತ್ತೀಯಪ್ಪ?) ಎಂಬ ಕ್ಯಾಪ್ಶನ್ ನೀಡಲಾಗಿದೆ.

ಪರಿಣಿತಿ ಚೋಪ್ರಾ ವ್ಯಂಗ್ಯ: ರಾಘವ್ ಚಡ್ಡಾ ಅವರ ಪತ್ನಿ, ನಟಿ ಪರಿಣಿತಿ ಚೋಪ್ರಾ ಅವರಿಗಿಂತ ರಾಘವ್ ಅವರೇ “ಅತ್ಯುತ್ತಮ ನಟ” ಎಂದು ಕೆಲವರು ಕಾಲೆಳೆದಿದ್ದಾರೆ.

ಹಳೆಯ ಟ್ವೀಟ್ ಡಿಲೀಟ್: ಪ್ರಧಾನಿ ಮೋದಿ ಅವರನ್ನು ಈ ಹಿಂದೆ ಟೀಕಿಸಿದ್ದ ಹಳೆಯ ಟ್ವೀಟ್‌ಗಳನ್ನು ರಾಘವ್ ಚಡ್ಡಾ ಡಿಲೀಟ್ ಮಾಡುತ್ತಿರುವ ಕಾರ್ಟೂನ್ ಮೀಮ್‌ಗಳು ವೈರಲ್ ಆಗಿವೆ.

ಹಮ್ ಸಾಥ್ ಸಾಥ್ ಹೈ: ಏಳು ಮಂದಿ ಸಂಸದರು ಒಟ್ಟಾಗಿ ಪಕ್ಷ ಬಿಟ್ಟಿರುವುದಕ್ಕೆ “ಹಮ್ 7 ಸಾಥ್ ಹೈ” ಎಂಬ ಪೋಸ್ಟರ್‌ಗಳು ಸದ್ದು ಮಾಡುತ್ತಿವೆ.

‘ಆಪರೇಷನ್ ಲೋಟಸ್’ ಎಂದ ಎಎಪಿ; ಸಂಜಯ್ ಸಿಂಗ್ ವಾಗ್ದಾಳಿ
ಈ ಬೆಳವಣಿಗೆಯ ಬೆನ್ನಲ್ಲೇ ಎಎಪಿ ನಾಯಕ ಸಂಜಯ್ ಸಿಂಗ್ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಬಿಜೆಪಿಯ “ಆಪರೇಷನ್ ಲೋಟಸ್” ನ ಒಂದು ಭಾಗವಾಗಿದ್ದು, ಪಂಜಾಬ್‌ನ ಭಗವಂತ್ ಮಾನ್ ಸರ್ಕಾರಕ್ಕೆ ಅಡ್ಡಿಪಡಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

“ಪಂಜಾಬ್ ಜನರು ಇವರಿಗೆ ತುಂಬಾ ಪ್ರೀತಿ ನೀಡಿದ್ದರು, ಆದರೆ ಇವರು ಬಿಜೆಪಿಯ ಮಡಿಲು ಸೇರಿದ್ದಾರೆ. ಪಂಜಾಬ್ ಜನತೆ ಈ ‘ದ್ರೋಹಿಗಳನ್ನು’ ಎಂದಿಗೂ ಕ್ಷಮಿಸುವುದಿಲ್ಲ” ಎಂದು ಸಂಜಯ್ ಸಿಂಗ್ ಕಿಡಿಕಾರಿದ್ದಾರೆ.

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿ, “ಬಿಜೆಪಿ ಮತ್ತೊಮ್ಮೆ ಪಂಜಾಬ್ ಜನತೆಗೆ ದ್ರೋಹ ಮಾಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷಾಂತರ ಮಾಡಿದ ಆ 7 ಮಂದಿ ಸಂಸದರು ಯಾರು?
ರಾಘವ್ ಚಡ್ಡಾ ಅವರೊಂದಿಗೆ ಬಿಜೆಪಿಗೆ ಜಿಗಿದ ಉಳಿದ ಆರು ಸಂಸದರ ಪಟ್ಟಿ ಇಲ್ಲಿದೆ:

ಅಶೋಕ್ ಮಿತ್ತಲ್

ಸಂದೀಪ್ ಪಾಠಕ್

ಹರ್ಭಜನ್ ಸಿಂಗ್ (ಮಾಜಿ ಕ್ರಿಕೆಟಿಗ)

ವಿಕ್ರಮ್ ಸಾಹ್ನಿ

ಸ್ವಾತಿ ಮಾಲಿವಾಲ್

ರಾಜೇಂದ್ರ ಗುಪ್ತಾ

ರಾಘವ್ ಚಡ್ಡಾ ಹಾದಿ: ಅಣ್ಣಾ ಆಂದೋಲನದಿಂದ ಕೇಸರಿ ಪಾಳೆಯದವರೆಗೆ
2012ರ ಲೋಕಪಾಲ ಚಳವಳಿಯಿಂದ ಕೇಜ್ರಿವಾಲ್ ಅವರೊಂದಿಗೆ ಗುರುತಿಸಿಕೊಂಡಿದ್ದ ರಾಘವ್ ಚಡ್ಡಾ, ಎಎಪಿಯ ಅತ್ಯಂತ ಕಿರಿಯ ಮತ್ತು ಪ್ರಭಾವಿ ನಾಯಕರಾಗಿದ್ದರು. ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರಾಗಿ, ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದ ಅವರು, ಈಗ ಬಿಜೆಪಿ ಸೇರುವ ಮೂಲಕ ತಮ್ಮ ಹತ್ತು ವರ್ಷಗಳ ಎಎಪಿ ಸಂಬಂಧವನ್ನು ಕಡಿದುಕೊಂಡಿದ್ದಾರೆ.

Raghav Chadha Right nowpic.twitter.com/G2dfvOnZOt

— Desi Bhayo (@desi_bhayo88) April 24, 2026

somewhere in Delhi pic.twitter.com/OmZD9QyyKW

— Moana (@ladynationalist) April 24, 2026

The Meme Just Got Real 😭😭😭 pic.twitter.com/Oj2vnvmefX

— Rohit (@Iam_Rohit_G) April 24, 2026

Raghav Chadha turned out to be a better actor than Parineeti Chopra pic.twitter.com/ebgjniBuMa

— Sagar (@sagarcasm) April 24, 2026

Raghav chadha to other Rajya Sabha MP's before joining BJP pic.twitter.com/PalraNkte9

— SwatKat💃 (@swatic12) April 24, 2026

Raghav Chadha deletes old tweets critical of PM Modi. #RaghavChadha pic.twitter.com/M4FmkXBvpS

— Satish Acharya (@satishacharya) April 6, 2026

Instagram audience: we see Raghav Chadha as the future PM and hate the BJP

Now Raghav Chadha joins BJP

Instagram audience: pic.twitter.com/9bDZ2sXhoK

— isHaHaHa (@hajarkagalwa) April 24, 2026

Raghav Chaddha as main lead in

"Hum 7 Saath Hai" 😸 pic.twitter.com/14fqboNUfI

— Sachya (@sachya2002) April 24, 2026

 

 

 

 

 

 

 

Raghav Chadha joins BJP social media is flooded with memes!
Share. Facebook Twitter LinkedIn WhatsApp Email

Related Posts

ನಿಮ್ಮ ಮೆದುಳು `ಶಾರ್ಟ್ ವಿಡಿಯೋಗಳನ್ನು ಇಷ್ಟಪಡಲು ಮತ್ತು ಗಂಟೆಗಟ್ಟಲೆ ಸ್ಕ್ರಾಲ್ ಮಾಡಲು ಕಾರಣವೇನು ಗೊತ್ತಾ?

25/04/2026 12:01 PM2 Mins Read

ಮೊಬೈಲ್ ಗ್ರಾಹಕರಿಗೆ ಭಾರೀ ಶಾಕ್: ಗಗನಕ್ಕೇರಲಿವೆ `ರೀಚಾರ್ಜ್’ ದರಗಳು!

25/04/2026 10:55 AM1 Min Read

BREAKING : ತಂದೆಗೆ ಸೆಡ್ಡು ಹೊಡೆದ ಪುತ್ರಿ : ‘ತೆಲಂಗಾಣ ರಾಷ್ಟ್ರ ಸೇನಾ’ ಪಕ್ಷ ಘೋಷಿಸಿದ ಕೆ. ಕವಿತಾ

25/04/2026 10:41 AM1 Min Read
Recent News

ಶಾಸಕ ಗೋಪಾಲಕೃಷ್ಣ ಬೇಳೂರು ‘ಮಾಸ್ಟರ್ ಪ್ಲಾನ್’: ಇನ್ಮುಂದೆ ಸಾಗರ ಆಗಲಿದೆ ‘ಹೈಟೆಕ್ ಸಿಟಿ’!

25/04/2026 12:12 PM

‘ಕ್ಯಾ ಪಾಲಿಟಿಷಿಯನ್ ಬನೇಗಾ ರೇ ತೂ?’: `ರಾಘವ್ ಚಡ್ಡಾ’ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ `ಮೀಮ್‌’ಗಳ ಸುರಿಮಳೆ.!

25/04/2026 12:09 PM

ನಿಮ್ಮ ಮೆದುಳು `ಶಾರ್ಟ್ ವಿಡಿಯೋಗಳನ್ನು ಇಷ್ಟಪಡಲು ಮತ್ತು ಗಂಟೆಗಟ್ಟಲೆ ಸ್ಕ್ರಾಲ್ ಮಾಡಲು ಕಾರಣವೇನು ಗೊತ್ತಾ?

25/04/2026 12:01 PM

Business Idea : ಕೇವಲ 10 ರೂ. ಹೂಡಿಕೆ ಮಾಡಿ 90 ರೂ. ಲಾಭ ಗಳಿಸಿ : ಇಲ್ಲಿದೆ 5 ಕ್ರಿಯೇಟಿವ್ ಬ್ಯುಸಿನೆಸ್ ಐಡಿಯಾಗಳು

25/04/2026 11:46 AM
State News
KARNATAKA

ಶಾಸಕ ಗೋಪಾಲಕೃಷ್ಣ ಬೇಳೂರು ‘ಮಾಸ್ಟರ್ ಪ್ಲಾನ್’: ಇನ್ಮುಂದೆ ಸಾಗರ ಆಗಲಿದೆ ‘ಹೈಟೆಕ್ ಸಿಟಿ’!

By kannadanewsnow0925/04/2026 12:12 PM KARNATAKA 2 Mins Read

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಇದಕ್ಕಾಗಿ ವಿವಿಧ ಇಲಾಖೆಗಳಿಂದ…

Business Idea : ಕೇವಲ 10 ರೂ. ಹೂಡಿಕೆ ಮಾಡಿ 90 ರೂ. ಲಾಭ ಗಳಿಸಿ : ಇಲ್ಲಿದೆ 5 ಕ್ರಿಯೇಟಿವ್ ಬ್ಯುಸಿನೆಸ್ ಐಡಿಯಾಗಳು

25/04/2026 11:46 AM

ಸಾಲ ಕೊಟ್ಟವರು ಮೃತಪಟ್ಟರೆ ಹಣ ವಾಪಸ್ ಪಡೆಯುವುದು ಹೇಗೆ? ಇಲ್ಲಿದೆ ಕಾನೂನು ಮಾಹಿತಿ

25/04/2026 11:35 AM

BREAKING : ಯೋಗೀಶ್ ಗೌಡ ಕೊಲೆ ಕೇಸ್ : ಜೀವಾವಧಿ ಶಿಕ್ಷೆ ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ

25/04/2026 11:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.