ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 17 ಆರೋಪಿಗಳು ಎಂದು ತೀರ್ಪು ಪ್ರಕಟಿಸಿದೆ. ಇಂದು ಕೋರ್ಟ್ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದು, ವಿಚಾರಣೆಯ ವೇಳೆ ಸಿಬಿಐ ಪರ ವಕೀಲರು ಆರೋಪಿಗಳಿಗೆ ಕಠಿಣವಾದ ಗಲ್ಲು ಶಿಕ್ಷೆ ವಿಧಿಸಿ ಎಂದು ಮನವಿ ಮಾಡಿದರು.
ವಿಚಾರಣೆ ಆರಂಭವಾದ ವೇಳೆ ಶಿಕ್ಷ ಪ್ರಮಾಣದ ಬಗ್ಗೆ ಸಿಬಿಐ ಪರವಾಗಿ ಎಎಸ್ಜಿ ವಾದ ಮಂಡಿಸಿದರು. ಹೆಚ್ಚುವರಿ ಜನರಲ್ ಸಾಲಿಟರ್ ಎಸ್ ವಿ ರಾಜು ಅವರು ವಾದ ಮಂಡಿಸಿದರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿ ಎಸ್ ವಿ ರಾಜು ವಾದ ಮಂಡಿಸಿದರು. ಈ ವೇಳೆ ಕೋರ್ಟ್ ಹಾಲ್ಗೆ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಅಪರಾಧಿಗಳು ಹಾಜರಾದರು ಸಿಬಿಐ ಪರ ಎ ಎಸ್ ಜಿ ಎಸ್ ವಿ ರಾಜೀವ್ ವಾದ ಮಂಡನೆ ಆರಂಭಿಸಿದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗಳಿಗೆ ತೀವ್ರವಾದ ಶಿಕ್ಷ ವಿಧಿಸುವಂತೆ ಸಿಬಿಐ ಮನವಿ ಮಾಡಿತು.
ಯೋಗೀಶ್ ನನ್ನ ಪೂರ್ವ ಸಿದ್ಧತೆ ನಡೆಸಿ ಕೋಲ್ಡ್ ಬ್ಲಡೆಡ್ ಮರ್ಡರ್ ಮಾಡಿದ್ದಾರೆ. ಕೊಲೆಯಾದ ಯೋಗೀಶ್ ಗೌಡ ಪಬ್ಲಿಕ್ ಫಿಗರ್ ಆಗಿದ್ದಾನೆ. ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲಾಗಿದೆ. ಮೊದಲಿಗೆ ಬೇರೆಯವರನ್ನು ಸೆರೆಂಡರ್ ಮಾಡಿಸಲಾಗಿತ್ತು. ಸಿಬಿಐ ತನಿಖೆ ನಡೆಸಿದ ಬಳಿಕ ಕೊಲೆಯ ಸತ್ಯ ಬಹಿರಂಗವಾಗಿದೆ. ಶಾಸಕನಾಗಿ ಕಾನೂನು ಎತ್ತಿ ಹಿಡಿಯಬೇಕಾದವನು ಕೊಲೆ ಮಾಡಿಸಿದ್ದಾನೆ. ಪೊಲೀಸರನ್ನು ದುರ್ಬಳಕೆ ಮಾಡಿ ಸಂವಿಧಾನ ಉಲ್ಲಂಘಿಸಿದ್ದಾನೆ. ಕಾರದಪುಡಿ ಎರಚಿ ಭೀಕರವಾಗಿ ಯೋಗೀಶ್ ಕೊಲೆ ಮಾಡಲಾಗಿದೆ. ದಾಖಲೆಗಳನ್ನು ತಿರುಚಿದ್ದಾರೆ. ಸಾಕ್ಷಿ ಆಧಾರ ನಾಶಕ್ಕೆ ಯತ್ನಿಸಿದ್ದಾರೆ. ಶಾಸಕ, ಸಚಿವ ಸ್ಥಾನ ದುರ್ಬಳಕೆ ಮಾಡಿ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದಾರೆ ಎಂದು ವಾದಿಸಿದರು.
ತಕ್ಷಣದ ಪ್ರಚೋದನೆಗಾದ ಕೊಲೆಯಲ್ಲ ಇದು ಪೂರ್ವಯೋಜಿತ ಕೋಲ್ಡ್ ಬ್ಲಡೆಡ್ ಮರ್ಡರ್ ಇಂತಹ ಕೊಲೆಯನ್ನು ಸಾಮಾನ್ಯ ಕೊಲೆಯನ್ನು ಪರಿಗಣಿಸಬಾರದು. ಆದರೂ ನಾನು ಗಲ್ಲು ಶಿಕ್ಷೆ ನೀಡುವಂತೆ ಕೋರುವುದಿಲ್ಲ ಎಂದು ವಾದಿಸಿದರು. ಇದೇ ವೇಳೆ ಆರೋಪಿಗಳ ಪರ ವಕೀಲ ಪರಮೇಶ್ವರಪ್ಪ ಅವರು ವಾದ ಆರಂಭಿಸಿದರು. ಆರೋಪಿಗಳಿಗೆ ಚಿಕ್ಕ ಮಕ್ಕಳಿದ್ದಾರೆ. ಅವರಿಗೂ ಸಂಸಾರವಿದೆ ಹಾಗಾಗಿ ಆರೋಪಿಗಳಿಗೆ ಕಡಿಮೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ವಯಸ್ಸಾದ ಪೋಷಕರನ್ನು ನೋಡಿಕೊಳ್ಳಬೇಕಿದೆ ಕಡಿಮೆ ಶಿಕ್ಷೆ ವಿಧಿಸಲು ವಿನಯ್ ಕುಲಕರ್ಣಿ
ಪರ ವಕೀಲ ಸುನಿಲ್ ಅವರು ವಾದ ಮಂಡಿಸಿದರು.








