ನವದೆಹಲಿ : ಬಿಜೆಪಿ ಆರ್ಎಸ್ಎಸ್ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದದ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಚಿಲ್ಲರೆತನದಿಂದ ಕೂಡಿದೆ ಎಂದು ದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
ಕಾಲೇಜು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಮನಿಸಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಅಸಂಬದ್ಧವಾಗಿ ಮಾತನಾಡುತ್ತಿರಲಿಲ್ಲ. ಖರ್ಗೆ ತಮ್ಮ ಸ್ಥಾನದ ಮಹತ್ವವನ್ನು ಅರಿತುಕೊಳ್ಳಬೇಕು, ರಾಹುಲ್ ಗಾಂಧಿ ಸಾಂಗತ್ಯ ಹೆಚ್ಚಾಗಿರುವ ಪರಿಣಾಮ ಹೀಗೆ ಮಾತನಾಡಿದ್ದಾರೆ ಎಂದು ಕಿಡಿ ಕಾರಿದರು.
ರಾಹುಲ್ ಸಹವಾಸವನ್ನು ಕರೆಗೆ ಬಿಟ್ಟರೆ ಎಲ್ಲವೂ ಸರಿಯಾಗುತ್ತದೆ ಗುಜರಾತ್ ರಾಜ್ಯದ ಜನರು ಅವಿದ್ಯಾವಂತರು ಎಂದು ಹೇಳಿದ್ದಾರೆ ಹಾಗಾದರೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಜನರು ದಡ್ಡರೆ? ಉತ್ತರ ಪ್ರದೇಶ ಬಿಹಾರ ಅಸ್ಸಾಂ ರಾಜ್ಯಗಳ ಜನರು ದಡ್ಡರೆ? ಕಾಂಗ್ರೆಸ್ ಗೆ ಮತ ಹಾಕಿಲ್ಲ ಅಂದ ತಕ್ಷಣ ಅವಮಾನ ಮಾಡಬಾರದು ಎಂದು ಪ್ರಹಲಾದ ಜೋಶಿ ತಿಳಿಸಿದರು








