ಬೆಂಗಳೂರು : ಕೇಂದ್ರ ಸರ್ಕಾರ ತೊಂದರೆ ಆಗದಂತೆ ನೋಡುತ್ತೇವೆ ಅಂದಿದ್ದಾರೆ ಕೇಂದ್ರ ಸರ್ಕಾರ ಈ ಕುರಿತು ಕೂಡಲೇ ಕ್ರಮ ವಹಿಸಲಿ ಹೋಟೆಲ್ಗಳ ಮೇಲೆ ತುಂಬಾ ಜನ ಅವಲಂಬಿತರಾಗಿದ್ದಾರೆ ಹೋಟೆಲ್ ನಿಲ್ಲಿಸಿದರೆ ಕಷ್ಟ ಆಗುತ್ತೆ ಜನರ ಜೀವನ ಕೂಡ ಅಸ್ತವ್ಯಸ್ತವಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ನಗರಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿ (Commercial LPG) ಸಿಲಿಂಡರ್ಗಳ ಪೂರೈಕೆಯಲ್ಲಿ ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಹೋಟೆಲ್ಗಳು, ಸಣ್ಣ ಪ್ರಮಾಣದ ತಿಂಡಿ ಅಂಗಡಿಗಳು ಮತ್ತು ಕ್ಯಾಟರಿಂಗ್ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ.
ಸುದ್ದಿಯ ಪ್ರಮುಖ ಅಂಶಗಳು
- ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ (Commercial LPG) ತೀವ್ರ ಕೊರತೆ ಕಾಣಿಸಿಕೊಂಡಿದೆ.
- ಗೃಹಬಳಕೆಯ ಸಿಲಿಂಡರ್ಗಳಿಗೆ ಆದ್ಯತೆ ನೀಡುವ ಕೇಂದ್ರದ ಇತ್ತೀಚಿನ ಆದೇಶದಿಂದಾಗಿ ಹೋಟೆಲ್ ಮತ್ತು ಕ್ಯಾಟರಿಂಗ್ ಉದ್ಯಮಕ್ಕೆ ತೊಂದರೆಯಾಗಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.
- ಈ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಪೂರೈಕೆಯನ್ನು ಸರಿಪಡಿಸಲು ಕೋರಿದ್ದಾರೆ.








