ಬೆಂಗಳೂರು : ಅಪರಿಚಿತ ವ್ಯಕ್ತಿಗಳು ಒಡಿಶಾ ಶಾಸಕರನ್ನು ಭೇಟಿಯಾಗಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅಪರಿಚಿತ ನಾಲ್ವರು ವ್ಯಕ್ತಿಗಳು ಒಡಿಶಾ ಶಾಸಕರನ್ನು ಭೇಟಿಯಾಗಿ 5 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ತಿಳಿಸಿದರು.
ಈ ವಿಚಾರವಾಗಿ ಬೆಂಗಳೂರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಡಿಶಾ ಕಾಂಗ್ರೆಸ್ ಶಾಸಕರು ರೆಸಾರ್ಟ್ ನಲ್ಲಿ ಇದ್ದರು ಬಿಜೆಪಿಯವರು ಕೂಡ ಮಾಡಿಕೊಂಡು ಉಳಿದುಕೊಂಡಿದ್ದಾರೆ. ಬ್ಯಾಟರಾಯನಪುರ ಸುರೇಶ್ ಎಂಬುವನ ಮೂಲಕ ಮಾಡಿದ್ದಾರೆ. ಐದು ಕೋಟಿ ಆಫರ್ ಕೊಟ್ಟು ನಮ್ಮ ಶಾಸಕರನ್ನು ಭೇಟಿಯಾಗಿದ್ದಾರೆ.
ಆದರೆ ಅವರ ಕುದುರೆ ವ್ಯಾಪಾರಕ್ಕೆ ನಮ್ಮ ಶಾಸಕರು ಒಪ್ಪಿಲ್ಲ ಒಟ್ಟು ನಾಲ್ವರು ಇದ್ದರು. ಇಬ್ಬರನ್ನು ನಮ್ಮವರು ಹಿಡಿದಿದ್ದಾರೆ.ಖಾಲಿ ಚೆಕ್ ಸಮೇತ ಹಿಡಿದಿದ್ದಾರೆ ಪೊಲೀಸರು ಕೂಡ ದೂರು ಕೊಟ್ಟಿದ್ದಾರೆ. ಅವರ ವಿರುದ್ಧ ಕಾನೂನಿನ ಅಡಿ ಕ್ರಮ ಆಗುತ್ತದೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.








