Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING :ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ರಾಜಧಾನಿ ಜೆರುಸಲೇಮ್ ಮೇಲೆ ಇರಾನ್ ಕ್ಷಿಪಣಿ ದಾಳಿ !

02/03/2026 6:12 AM

ಖಗೋಳ ವಿಸ್ಮಯ : ನಾಳೆ ಸಂಭವಿಸಲಿದೆ ವರ್ಷದ ಮೊದಲ ʻಚಂದ್ರಗ್ರಹಣʼ, ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

02/03/2026 6:05 AM

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

02/03/2026 5:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಖಗೋಳ ವಿಸ್ಮಯ : ನಾಳೆ ಸಂಭವಿಸಲಿದೆ ವರ್ಷದ ಮೊದಲ ʻಚಂದ್ರಗ್ರಹಣʼ, ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?
KARNATAKA

ಖಗೋಳ ವಿಸ್ಮಯ : ನಾಳೆ ಸಂಭವಿಸಲಿದೆ ವರ್ಷದ ಮೊದಲ ʻಚಂದ್ರಗ್ರಹಣʼ, ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

By kannadanewsnow5702/03/2026 6:05 AM

ಬೆಂಗಳೂರು: ಬಾನಂಗಳದಲ್ಲಿ ಈ ಬಾರಿ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಅಪರೂಪದ ಖಗೋಳ ವಿದ್ಯಮಾನವೊಂದು ಜರುಗಲಿದೆ. ಮಾರ್ಚ್ 3ರಂದು ‘ರಕ್ತ ಚಂದ್ರಗ್ರಹಣ’ (Blood Moon) ಸಂಭವಿಸಲಿದ್ದು, ಚಂದಿರ ಕೆಂಬಣ್ಣದಲ್ಲಿ ಕಂಗೊಳಿಸಲಿದ್ದಾನೆ.

ಪಾಲ್ಗುಣ ಮಾಸದ ಹುಣ್ಣಿಮೆಯ ದಿನದಂದೇ ಈ ಗ್ರಹಣ ಸಂಭವಿಸುತ್ತಿರುವುದು ವಿಶೇಷ. ಭಾರತದಾದ್ಯಂತ ಈ ದೃಶ್ಯ ಗೋಚರಿಸಲಿದ್ದು, ಕರ್ನಾಟಕದ ಜನರಿಗೂ ಸುಮಾರು 25 ನಿಮಿಷಗಳ ಕಾಲ ಈ ಕೆಂಪು ಚಂದಿರನನ್ನು ನೋಡುವ ಅವಕಾಶ ಸಿಗಲಿದೆ.

ಗ್ರಹಣದ ಸಮಯ ಎಷ್ಟು?

ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 3ರಂದು ಗ್ರಹಣದ ಪ್ರಕ್ರಿಯೆ ಹೀಗಿರಲಿದೆ:

ಗ್ರಹಣ ಆರಂಭ: ಮಧ್ಯಾಹ್ನ 3:20ಕ್ಕೆ

ಗ್ರಹಣ ಅಂತ್ಯ: ಸಂಜೆ 6:47ಕ್ಕೆ

ಕರ್ನಾಟಕದಲ್ಲಿ ಗೋಚರತೆ: ಸರಿಸುಮಾರು 25 ನಿಮಿಷಗಳ ಕಾಲ ಗ್ರಹಣದ ಪ್ರಭಾವ ದೃಶ್ಯಮಾನವಾಗಲಿದೆ.

ಗ್ರಹಣದ ಅವಧಿಯಲ್ಲಿ ಪಾಲಿಸಬೇಕಾದ ನಿಯಮಗಳು

ಗ್ರಹಣದ ಸಮಯವನ್ನು ‘ಸೂತಕ ಕಾಲ’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಧಾರ್ಮಿಕ ನಂಬಿಕೆಗಳ ಪ್ರಕಾರ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಉತ್ತಮ ಎನ್ನಲಾಗುತ್ತದೆ.

ಏನು ಮಾಡಬೇಕು?

ಶುದ್ಧೀಕರಣ: ಗ್ರಹಣ ಆರಂಭಕ್ಕೆ ಮೊದಲು ಮತ್ತು ಮೋಕ್ಷದ (ಅಂತ್ಯ) ನಂತರ ಸ್ನಾನ ಮಾಡಬೇಕು. ಮನೆ ಹಾಗೂ ದೇವರ ಕೋಣೆಯನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು.

ಮಂತ್ರ ಪಠಣೆ: ಗ್ರಹಣದ ಅವಧಿಯಲ್ಲಿ ಧ್ಯಾನ, ಭಜನೆ ಹಾಗೂ ಕೀರ್ತನೆಗಳಲ್ಲಿ ತೊಡಗುವುದು ಒಳ್ಳೆಯದು. ವಿಶೇಷವಾಗಿ ಮಹಾಮೃತ್ಯುಂಜಯ ಮಂತ್ರ ಹಾಗೂ ಚಂದ್ರ ದೇವನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಬೇಕು.

ದರ್ಬೆಯ ಬಳಕೆ: ದೇವರ ವಿಗ್ರಹಗಳ ಮೇಲೆ ಗಂಗಾಜಲ ಸಿಂಪಡಿಸಿ ದರ್ಬೆಯನ್ನು ಇಡಬೇಕು. ಮನೆಯಲ್ಲಿರುವ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಮೇಲೆ ದರ್ಬೆ ಅಥವಾ ತುಳಸಿ ದಳವನ್ನು ಹಾಕಿಡುವುದರಿಂದ ಗ್ರಹಣದ ಕಿರಣಗಳ ಪ್ರಭಾವ ಇರುವುದಿಲ್ಲ ಎಂಬ ನಂಬಿಕೆಯಿದೆ.

ಏನು ಮಾಡಬಾರದು?

ಶುಭ ಕಾರ್ಯಗಳು: ಇದು ಸೂತಕದ ಸಮಯವಾದ್ದರಿಂದ ಮದುವೆ, ಗೃಹಪ್ರವೇಶ, ಹೊಸ ವಾಹನ ಖರೀದಿ ಅಥವಾ ಹೊಸ ಉದ್ಯೋಗ ಆರಂಭದಂತಹ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.

ಆಹಾರ ನಿಯಮ: ಗ್ರಹಣದ ಅವಧಿಯಲ್ಲಿ ಆಹಾರ ತಯಾರಿಸುವುದು ಹಾಗೂ ಸೇವಿಸುವುದು ನಿಷಿದ್ಧ.

ಗರ್ಭಿಣಿಯರ ಜಾಗ್ರತೆ: ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಬರಬಾರದು ಎಂದು ಹಿರಿಯರು ಸಲಹೆ ನೀಡುತ್ತಾರೆ.

ಗಮನಿಸಿ: ಈ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲಿದೆ.

Astronomical wonder: The first lunar eclipse of the year will occur tomorrow do you know where it will be visible?
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

02/03/2026 5:59 AM2 Mins Read

ಕರ್ನಾಟಕದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ‘ಗ್ರಾಮ ಪಂಚಾಯ್ತಿ’ಗಳಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

02/03/2026 5:54 AM6 Mins Read

BIG NEWS : ದತ್ತು ನೀಡಿದ ತಾಯಿಗೂ ಜೀವನಾಂಶ ಕಡ್ಡಾಯ: ಹೈಕೋರ್ಟ್ ಮಹತ್ವದ ತೀರ್ಪು

02/03/2026 5:40 AM1 Min Read
Recent News

BREAKING :ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ರಾಜಧಾನಿ ಜೆರುಸಲೇಮ್ ಮೇಲೆ ಇರಾನ್ ಕ್ಷಿಪಣಿ ದಾಳಿ !

02/03/2026 6:12 AM

ಖಗೋಳ ವಿಸ್ಮಯ : ನಾಳೆ ಸಂಭವಿಸಲಿದೆ ವರ್ಷದ ಮೊದಲ ʻಚಂದ್ರಗ್ರಹಣʼ, ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

02/03/2026 6:05 AM

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

02/03/2026 5:59 AM

ಕರ್ನಾಟಕದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ‘ಗ್ರಾಮ ಪಂಚಾಯ್ತಿ’ಗಳಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

02/03/2026 5:54 AM
State News
KARNATAKA

ಖಗೋಳ ವಿಸ್ಮಯ : ನಾಳೆ ಸಂಭವಿಸಲಿದೆ ವರ್ಷದ ಮೊದಲ ʻಚಂದ್ರಗ್ರಹಣʼ, ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

By kannadanewsnow5702/03/2026 6:05 AM KARNATAKA 2 Mins Read

ಬೆಂಗಳೂರು: ಬಾನಂಗಳದಲ್ಲಿ ಈ ಬಾರಿ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಅಪರೂಪದ ಖಗೋಳ ವಿದ್ಯಮಾನವೊಂದು ಜರುಗಲಿದೆ. ಮಾರ್ಚ್ 3ರಂದು ‘ರಕ್ತ…

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

02/03/2026 5:59 AM

ಕರ್ನಾಟಕದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ‘ಗ್ರಾಮ ಪಂಚಾಯ್ತಿ’ಗಳಲ್ಲಿ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು !

02/03/2026 5:54 AM

BIG NEWS : ದತ್ತು ನೀಡಿದ ತಾಯಿಗೂ ಜೀವನಾಂಶ ಕಡ್ಡಾಯ: ಹೈಕೋರ್ಟ್ ಮಹತ್ವದ ತೀರ್ಪು

02/03/2026 5:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.