ಬೆಂಗಳೂರು : ಬೆಂಗಳೂರಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧನ ಮೇಲೆ ಕಾರು ಚಾಲಕನೊಬ್ಬ ಹಲ್ಲೆ ನಡೆಸಿದ್ದಾನೆ. ಕೆಂಗೇರಿಯ ನಾಗದೇವನಹಳ್ಳಿಯ ವಿನಾಯಕ ಲೇಔಟ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ.
ಕಾರು ಚಾಲಕ ನವೀನ್ ಎಂಬಾತನಿಂದ ನಂಜುಂಡಪ್ಪ (65) ಎನ್ನುವ ವೃದ್ಧನ ಮೇಲೆ ಹಲ್ಲೆ ನಡೆದಿದೆ. ಹಿಂದಿನಿಂದ ಕಾರಿನಲ್ಲಿ ಬಂದು ಚಾಲಕ ನವೀನ್ ಹಾರ್ನ್ ಮಾಡಿದ್ದಾನೆ. ಪಕ್ಕದಲ್ಲಿ ಅಷ್ಟು ದೊಡ್ಡ ರಸ್ತೆ ಇದೆ ಹೋಗಿ ಅಂತ ನಂಜುಂಡಪ್ಪ ಹೇಳಿದ್ದಾರೆ. ರೊಚ್ಚಿಗೆದ್ದು ಅವಾಚ್ಯ ಶಬ್ದದಿಂದ ಬೈದು ನಂಜುಂಡಪ್ಪ ಮೇಲೆ ನವೀನ್ ಹಲ್ಲೆ ಮಾಡಿದ್ದಾನೆ. ಕಾರಿನಲ್ಲಿದ್ದ ನವೀನ್ ಪೋಷಕರು ಬಂದು ಸಮಾಧಾನ ಮಾಡಿದ್ದಾರೆ.
ಆದರೂ ಬೈಯುತ್ತ ಅಟ್ಟಿಸಿಕೊಂಡು ಹೋಗಿ ಚಾಲಕ ನವೀನ್ ಹಲ್ಲೆಗೈದಿದ್ದಾನೆ. ಬಳಿಕ ಎರಡು ನೂರು ಮೀಟರ್ ದೂರ ನಡೆದುಕೊಂಡು ಹೋಗಿದ್ದ ನಂಜುಂಡಪ್ಪ. ಆಗ ಕಾರು ತೆಗೆದುಕೊಂಡು ಹೋಗಿ ಅಲ್ಲಿ ಅಡ್ಡ ಹಾಕಿ ಮತ್ತೆ ಹಲ್ಲೆ ಮಾಡಿದ್ದಾನೆ. ರಸ್ತೆ ಮೇಲೆ ಬೀಳಿಸಿ ಚಾಲಕ ನವೀನ್ ಹಲ್ಲೆ ಮಾಡಿದ್ದಾನೆ. ಘಟನೆ ಸಂಭಂದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.








