ಮೈಸೂರು : ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜುವೆಲ್ಲರಿ ಶಾಪ್ ನಲ್ಲಿ ಕೇಜಿ ಕಟ್ಟಲೆ ಬಂಗಾರ ಹಾಗು ವಜ್ರ ಕಳ್ಳತನ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಹುಣಸೂರಿನ ಸ್ಕೈಗೋಲ್ಡ್ ಅಂಡ್ ಡೈಮಂಡ್ ಶಾಪ್ ನಲ್ಲಿ ದರೋಡೆ ನಡೆದಿದ್ದು, ದರೋಡೆಕೋರರು ಪರಾರಿಯಾಗಿರುವ ದೃಶ್ಯ ಇದೀಗ ಸೆರೆಯಾಗಿದೆ.
ದರೋಡೆಕೋರರು ಎಸ್ಕೇಪ್ ಆಗುತ್ತಿರುವ ದೃಶ್ಯ ಇದೀಗ ಲಭ್ಯವಾಗಿದೆ. ಲೂಟಿ ನಂತರ ಪಲ್ಸರ್ ಬೈಕ್ ನಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಮೂವರು ಹಾಗೂ ಮತ್ತೊಂದು ಬೈಕ್ನಲ್ಲಿ ಇಬ್ಬರು ಒಟ್ಟು ಐವರು ಒಳಗೊಂಡ ಈ ಗ್ಯಾಂಗ್ ಕೆ ಆರ್ ನಗರ ಮಾರ್ಗವಾಗಿ ಪರಾರಿಯಾಗಿದ್ದಾರೆ. ದರೋಡೆಕೋರರು ಪಲ್ಸರ್ ಬೈಕ್ ನಲ್ಲಿ ಅತ್ಯಂತ ವೇಗವಾಗಿ ತೆರಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ.
ಘಟನೆ ಹಿನ್ನೆಲೆ?
ಭಾನುವಾರ ಮಧ್ಯಾಹ್ನ 12.30ಕ್ಕೆ 2 ಬೈಕ್ನಲ್ಲಿ ಆಗಮಿಸಿದ 5 ದರೋಡೆ ಕೋರರು ಕೃತ್ಯ ಎಸಗಿದ್ದಾರೆ. ಎಲ್ಲರ ಕೈಯಲ್ಲೂ ಗನ್ ಇತ್ತು. ಒಬ್ಬ ಹೆಲೈಟ್ ಧರಿಸಿದ್ದರೆ, ಮಿಕ್ಕವರು ಮಳಿಗೆಯೊಳಗೆ ಬಂದ ನಂತರ ಮಾಸ್ಕ್ ಧರಿಸಿದ್ದರು. ಮಳಿಗೆಯ ವ್ಯವಸ್ಥಾಪಕ ಅಜ್ಜರ್ ಊಟಕ್ಕೆ ತೆರಳಿದ್ದ ವೇಳೆ ಆಗಮಿಸಿದ ದರೋಡೆ ಕೋರರು, ಮಳಿಗೆ ಯಲ್ಲಿ ಚಿನ್ನ ಖರೀದಿಸುತ್ತಿದ್ದ ಗ್ರಾಹಕರನ್ನು ಸುಮ್ಮನೆ ಕೂರಲು ತಿಳಿಸಿದರು.
ನಂತರ, ಎಲ್ಲಾ 18 ಸಿಬ್ಬಂದಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ದರೋಡೆಕೋರರ ಪೈಕಿ ಇಬ್ಬರು ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ ನಾಡುತ್ತಿದ್ದರು. ಕ್ಷಣಮಾತ್ರದಲ್ಲಿ ಚಿನ್ನಾಭರ ಣಗಳನ್ನು ತುಂಬಿಕೊಂಡ ದರೋಡೆಕೋರರು ಮಳಿಗೆಯಿಂದ ತೆರಳಿದ್ದಾರೆ. ತೆರಳುವಾಗ ಒಬ್ಬ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾನೆ. 2 ಬೈಕುಗಳು ಮೈಸೂರು ರಸ್ತೆ ಕಡೆ ತೆರಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದರೋಡೆಕೋರರು ನಮ್ಮತ್ತ ಗನ್ ತೋರಿಸಿದ ಹೆದರಿಸಿದರು. ಕೈಗಳನ್ನು ಮೇಲೆತ್ತಿ ಅಸಹಾಯಕರಾಗಿ ಅವರು ಹೇಳಿದಂತೆ ಕೇಳಿದೆವು. ಮೂವರು ಚಿನ್ನಾಭರಣ, ವಜ್ರದ ಉಂಗುರಗಳನ್ನು ಬ್ಯಾಗ್ಗಳಿಗೆ ತುಂಬಿದರು. ಕೆಲ ದರೋಡೆಕೋರರು ಒಳಗೆ ಬಂದ ಮೇಲೆ ಮುಖಗವಸು ಹಾಕಿಕೊಂಡರು. ಒಬ್ಬ ಹೆಲ್ಮೆಟ್ ಅಲ್ಲೇ ಬಿಟ್ಟು ಹೋದ. ಅವರು ಹೋಗುವಾಗ ಹೊರಗೆ ಗನ್ ಫೈರ್ ಮಾಡಿದ ಸದ್ದು ಕೇಳಿಸಿತು. ಎಲ್ಲವೂ ಸಿನಿಮೀಯವಾಗಿ ಏಳೆಂಟು ನಿಮಿಷಗಳಲ್ಲಿನಡೆದು ಹೋಯಿತು ಎಂದು ಸ್ಕೈ ಗೋಲ್ಡ್ ಆಯಂಡ್ ಡೈಮಂಡ್ ಮಳಿಗೆ ಸಿಬ್ಬಂದಿ ನಡೆದ ಘಟನೆಯನ್ನು ಗಾಬರಿಯಿಂದ ವಿವರಿಸಿದರು.








