Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪೋಲೀಸರ ಭರ್ಜರಿ ಕಾರ್ಯಾಚರಣೆ : ಯುವಕನನ್ನು ಕೊಂದ ಅರ್ಧಗಂಟೆಯಲ್ಲೇ ಆರೋಪಿಗಳು ಅರೆಸ್ಟ್!

24/12/2025 8:05 PM

BREAKING : ಅರಾವಳ್ಳಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳು ಬ್ಯಾನ್ ; ಸಂಪೂರ್ಣ ರಕ್ಷಣೆಗೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

24/12/2025 8:03 PM

ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣ: ಬಿಜೆಪಿ ಮುಖಂಡ ಡಾ.ಜ್ಞಾನೇಶ್

24/12/2025 7:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತಲೆ ಎತ್ತುವ ಪರಿಸ್ಥಿತಿಯಲ್ಲಿ ಇಲ್ಲ: ಛಲವಾದಿ ನಾರಾಯಣಸ್ವಾಮಿ
KARNATAKA

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತಲೆ ಎತ್ತುವ ಪರಿಸ್ಥಿತಿಯಲ್ಲಿ ಇಲ್ಲ: ಛಲವಾದಿ ನಾರಾಯಣಸ್ವಾಮಿ

By kannadanewsnow0524/12/2025 6:43 PM

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಹವಾ ಹೊರಟುಹೋಗಿದೆ. ಇನ್ನು ಮುಂದೆ ಕಾಂಗ್ರೆಸ್ ರಾಜ್ಯದಲ್ಲಿ ತಲೆ ಎತ್ತುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್ ಹವಾ ಹೊರಟುಹೋಗಿರುವುದು ಸ್ಪಷ್ಟವಾಗಿದೆ ಎಂದರು. ದಕ್ಷಿಣ ಕನ್ನಡದ ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ, ಉತ್ತರ ಕನ್ನಡದ ಮಂಕಿ ಪಟ್ಟಣ ಪಂಚಾಯಿತಿ, ಬೆಂಗಳೂರು ಗ್ರಾಮಾಂತರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದೆ. ಈ ನಾಲ್ಕರಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ ಹಾಗೂ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿದೆ ಎಂದು ಸಂತಸ ಸೂಚಿಸಿದರು.

ದೊಡ್ಡಬಳ್ಳಾಪುರ ನಗರಸಭೆಯ ಒಂದು ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ. ರಾಯಚೂರಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ ಒಂದು ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದೆ. ಎರಡೂ ಕಡೆ ಬಿಜೆಪಿ ಗೆಲುವು ಸಾಧಿಸಿದೆ ಎಂದು ತಿಳಿಸಿದರು.

ಶಿಥಿಲಾವಸ್ಥೆಯಲ್ಲಿದೆ ಕಾಂಗ್ರೆಸ್ ಪಕ್ಷ

ಕಾಂಗ್ರೆಸ್ ಪಕ್ಷ ಅವಸಾನದ ಅಂಚಿಗೆ ತಲುಪಿದೆ. ಇದೊಂದು ಹಳೆಯ ಪಾರ್ಟಿ ಎಂದು ಅವರೇ ಹೇಳಿಕೊಳ್ಳುತ್ತಾರೆ. ಆ ಕಾರಣದಿಂದ ಕಾಂಗ್ರೆಸ್ ಈಗ ಶಿಥಿಲಾವಸ್ಥೆಯಲ್ಲಿದೆ ಎಂದು ಟೀಕಿಸಿದರು. ಈಗಾಗಲೇ ರಾಹುಲ್ ಗಾಂಧಿ ಮೂಲಕ ಪಕ್ಷ ಕಟ್ಟುವುದಾಗಿ ಹೇಳಿಕೊಳ್ಳುತ್ತಿದ್ದವರು ಈಗ ಅವರು ನಿಷ್ಪ್ರಯೋಜಕ, ಅವರು ನಮಗೆ ಬೇಕಾಗಿಲ್ಲ; ನಮಗೆ ಮಲ್ಲಿಕಾರ್ಜುನ ಖರ್ಗೆಯವರೂ ಬೇಕಾಗಿಲ್ಲ ಎನ್ನುತ್ತಿದ್ದಾರೆ. ಈಗ ನಿನ್ನೆಯಿಂದ ರಾಹುಲ್ ಗಾಂಧಿ ಹಠಾವೋ ಆರಂಭವಾಗಿದೆ. ಪ್ರಿಯಾಂಕ ಗಾಂಧಿ ಲಾವೋ ಎನ್ನಲಾರಂಭಿಸಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ಸಿನವರು ಇನ್ಯಾವ ಜನ್ಮದಲ್ಲೂ ಪ್ರಧಾನಿಯಾಗುವುದಿಲ್ಲ. ರಾಹುಲ್ ಹೆಸರು ಹೇಳಿದರೆ ಇನ್ನು ಮುಂದೆ 50 ಬಿಡಿ; 20 ಸೀಟು ಗೆಲ್ಲಲೂ ಕಷ್ಟ ಎಂಬ ಕಾರಣಕ್ಕಾಗಿ ಪ್ರಿಯಾಂಕ ಗಾಂಧಿ ಹೆಸರನ್ನು ಹೇಳಲು ಆರಂಭಿಸಿದ್ದಾರೆ. ಖುದ್ದು ಅವರ ಮನೆ ಅಳಿಯ ವಾಧ್ರಾ ಕೂಡ ಇದನ್ನೇ ಹೇಳುತ್ತಿದ್ದಾರೆ ಎಂದರು.

ದೇಶದ್ರೋಹದ ಕಾನೂನಿನ ಅಡಿಯಲ್ಲಿ ಬಂಧಿಸಿ..

ರಾಹುಲ್ ಗಾಂಧಿಯವರ ಮಾನಸಿಕ ಸ್ಥಿತಿ ಕುರಿತು ಪರೀಕ್ಷೆ ಮಾಡುವ ಅಗತ್ಯವಿದೆ. ಹೊರದೇಶದಲ್ಲೂ ದೇಶವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಈ ಮೂಲಕ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಮಾನ್ಯ ಪ್ರಧಾನಿಯವರು ರಾಹುಲ್ ಅವರನ್ನು ದೇಶದ್ರೋಹದ ಕಾನೂನಿನ ಅಡಿಯಲ್ಲಿ ಬಂಧಿಸಬೇಕು. ಇಲ್ಲವೇ ಅವರನ್ನು ದೇಶದಿಂದ ಗಡೀಪಾರು ಮಾಡಬೇಕೆಂದು ಮನವಿ ಮಾಡುವುದಾಗಿ ಹೇಳಿದರು.

ಲೂಟಿ ಮಾಡಿದ ಹಣದಿಂದ ಕಾಂಗ್ರೆಸ್ ಪಕ್ಷವನ್ನು ನಡೆಸಲಾಗುತ್ತಿದೆ

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕಾಗಿ ದೊಡ್ಡ ಹೋರಾಟ ನಡೆಯುತ್ತಿದೆ. ಏನೂ ಇಲ್ಲ ಅಂದುಕೊಂಡೇ ಬ್ರೇಕ್‍ಫಾಸ್ಟ್, ಡಿನ್ನರ್ ಪಾರ್ಟಿ ನಡೆದಿದೆ. ಮುಖ್ಯಮಂತ್ರಿ 5 ವರ್ಷ ನಾನೇ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಇವರೇ 2028ರವರೆಗೆ ಮುಖ್ಯಮಂತ್ರಿ ಎಂದು ಜಮೀರ್ ಸೇರಿ ಹಲವರು ಹೇಳುತ್ತಿದ್ದಾರೆ. 2028ಕ್ಕೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಎನ್ನುತ್ತಾರೆ. 2028ರಲ್ಲಿ ಅವರು ಸಿಎಂ ಆಗಲು ಹೇಗೆ ಸಾಧ್ಯ? ಇವತ್ತೇ ಚುನಾವಣೆಗೆ ಹೋದರೂ ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ ಎಂದು ತಿಳಿಸಿದರು.

ನರಿ, ಕರಡಿ ವ್ಯವಸಾಯದ ಕಥೆಯನ್ನು ಉದಾಹರಣೆಯಾಗಿ ತಿಳಿಸಿದರು. ಕರಡಿ- ನರಿಯ ವ್ಯವಸಾಯದ ಆಟವನ್ನು ಕಾಂಗ್ರೆಸ್ಸಿನವರು ಚೆನ್ನಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಆಡಳಿತ ಮಾಡುವ ರಾಜ್ಯದಲ್ಲಿ ಲೂಟಿ ಮಾಡಿದ ಹಣದಿಂದ ಕಾಂಗ್ರೆಸ್ ಪಕ್ಷವನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

Share. Facebook Twitter LinkedIn WhatsApp Email

Related Posts

BIG NEWS : ಪೋಲೀಸರ ಭರ್ಜರಿ ಕಾರ್ಯಾಚರಣೆ : ಯುವಕನನ್ನು ಕೊಂದ ಅರ್ಧಗಂಟೆಯಲ್ಲೇ ಆರೋಪಿಗಳು ಅರೆಸ್ಟ್!

24/12/2025 8:05 PM1 Min Read

ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣ: ಬಿಜೆಪಿ ಮುಖಂಡ ಡಾ.ಜ್ಞಾನೇಶ್

24/12/2025 7:54 PM1 Min Read

ಶಿವಮೊಗ್ಗ: ಡಿ.29ರಂದು ಸೊರಬದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ- ಅಧ್ಯಕ್ಷ ಶಂಕರ್ ಶೆಟ್

24/12/2025 7:46 PM2 Mins Read
Recent News

BIG NEWS : ಪೋಲೀಸರ ಭರ್ಜರಿ ಕಾರ್ಯಾಚರಣೆ : ಯುವಕನನ್ನು ಕೊಂದ ಅರ್ಧಗಂಟೆಯಲ್ಲೇ ಆರೋಪಿಗಳು ಅರೆಸ್ಟ್!

24/12/2025 8:05 PM

BREAKING : ಅರಾವಳ್ಳಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳು ಬ್ಯಾನ್ ; ಸಂಪೂರ್ಣ ರಕ್ಷಣೆಗೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

24/12/2025 8:03 PM

ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣ: ಬಿಜೆಪಿ ಮುಖಂಡ ಡಾ.ಜ್ಞಾನೇಶ್

24/12/2025 7:54 PM

ಶಿವಮೊಗ್ಗ: ಡಿ.29ರಂದು ಸೊರಬದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ- ಅಧ್ಯಕ್ಷ ಶಂಕರ್ ಶೆಟ್

24/12/2025 7:46 PM
State News
KARNATAKA

BIG NEWS : ಪೋಲೀಸರ ಭರ್ಜರಿ ಕಾರ್ಯಾಚರಣೆ : ಯುವಕನನ್ನು ಕೊಂದ ಅರ್ಧಗಂಟೆಯಲ್ಲೇ ಆರೋಪಿಗಳು ಅರೆಸ್ಟ್!

By kannadanewsnow0524/12/2025 8:05 PM KARNATAKA 1 Min Read

ಹುಬ್ಬಳ್ಳಿ : ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ‌. ವಿಠ್ಠಲ ಕರಾಡೆ(29)…

ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣ: ಬಿಜೆಪಿ ಮುಖಂಡ ಡಾ.ಜ್ಞಾನೇಶ್

24/12/2025 7:54 PM

ಶಿವಮೊಗ್ಗ: ಡಿ.29ರಂದು ಸೊರಬದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ- ಅಧ್ಯಕ್ಷ ಶಂಕರ್ ಶೆಟ್

24/12/2025 7:46 PM

BREAKING : ಚಿಕ್ಕಮಗಳೂರಲ್ಲಿ ಭೀಕರ ಅಪಘಾತ : ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದ ಕಾರು, ಓರ್ವ ವಿದ್ಯಾರ್ಥಿ ಸಾವು!

24/12/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.