ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು. ಲೋಕಾಯುಕ್ತ ಪೊಲೀಸರ ಪರವಾಗಿ ಎಸ್ಪಿಪಿ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದರು. ಇವೇಳೆ ವಾದ ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು.
ಮೂರು ಜಿಲ್ಲೆಗಳ ಸಿಬ್ಬಂದಿಯೊಂದಿಗೆ ಲೋಕಾಯುಕ್ತ ಪೊಲೀಸರು ಕೆಲಸ ಮಾಡಿದ್ದಾರೆ. ಕೇಸ್ ಡೈರಿ ತಾವು ಪರಿಶೀಲಿಸಿದರೆ ತನಿಖೆ ನಡೆಸುವುದು ತಿಳಿಯುತ್ತದೆ. ಅವರು ಅದನ್ನು ಬಹಿರಂಗಪಡಿಸದಂತೆ ನಿರ್ಬಂಧಿಸಲು ಎಸ್ಪಿಪಿ ಮನವಿ ಮಾಡಿದರು. ಕೋರ್ಟಿಗೆ ಲೋಕಾಯುಕ್ತ ಎಸ್ಪಿಪಿ ವೆಂಕಟೇಶ್ ಅರಬ್ಬಟ್ಟಿ ಮರವಿ ಮಾಡಿದರು.
ಲೋಕಾಯುಕ್ತ ಪೊಲೀಸ್ರಿಂದ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಕೆಯಾಗಿದ್ದು ತನಿಖೆ ಅಂತಿಮ ಹಂತದಲ್ಲಿ ಇದೆ ತನಿಕೆಯನ್ನು ಅನಗತ್ಯವಾಗಿ ವಿಳಂಬಿಸುತ್ತಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಕೇಸ್ ಡೈರಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವುದಾಗಿ ಎಸ್ಪಿಪಿ ವೆಂಕಟೇಶ್ ಅರಬಟ್ಟಿ ಹೇಳಿಕೆ ನೀಡಿದರು. ಬಿ ರಿಪೋರ್ಟ್ ಮೇಲೆ ಕೋರ್ಟ್ ಆದೇಶ ನೀಡುವುದನ್ನು ಮುಂದೂಡಿತ್ತು.
ತನಿಖೆ ಪೂರ್ಣಗೊಳ್ಳಲಿ ಎಂಬ ಕಾರಣಕ್ಕೆ ಬಿ ರಿಪೋರ್ಟ್ ಮೇಲೆ ಆದೇಶ ನೀಡಿಲ್ಲ. ಕೇಸ್ ಡೈರಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿತು. ಬೀ ರಿಪೋರ್ಟ ಸಂಬಂಧಿಸಿದಂತೆ ಹೆಚ್ಚುವರಿ ವಾದ ಮಂಡನೆ ಇದ್ದರೆ ಸಲ್ಲಿಸಿ ಎಂದು ಇಡಿ ಹಾಗೂ ದೂರುದಾರ ಸ್ನೇಹ ಮೈ ಕೃಷ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಸೂಚನೆ ನೀಡಿತು. ಬಳಿಕ ವಿಚಾರಣೆಯನ್ನು ಡಿಸೆಂಬರ್ 23 ಆದೇಶ ಹೊರಡಿಸಿತು.








