Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮೊಟ್ಟೆ ಪ್ರೀಯರಿಗೆ ಬಿಗ್ ಶಾಕ್ : ಮೊಟ್ಟೆಯಲ್ಲಿ ‘AOZ’ ಕ್ಯಾನ್ಸರ್ ಕಾರಕ ಅಂಶ ಪತ್ತೆ!

14/12/2025 12:26 PM

ಭಾರತದ ಮೇಲೆ ಟ್ರಂಪ್ ಶೇ.50ರಷ್ಟು ಸುಂಕದ ವಿರುದ್ಧ US ಸದನದಲ್ಲಿ ನಿರ್ಣಯ ಮಂಡಿಸಿದ ಸಂಸದರು

14/12/2025 12:26 PM

ಮಂಗಳಕ್ಕೆ ಹಾರ್ಡ್‌ವೇರ್ ಹೈವೇ: ಜಯನಗರದಲ್ಲಿ 2 ಲಕ್ಷ ಬಹುಮಾನದ ಹ್ಯಾಕಥಾನ್!

14/12/2025 12:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಗಳಕ್ಕೆ ಹಾರ್ಡ್‌ವೇರ್ ಹೈವೇ: ಜಯನಗರದಲ್ಲಿ 2 ಲಕ್ಷ ಬಹುಮಾನದ ಹ್ಯಾಕಥಾನ್!
KARNATAKA

ಮಂಗಳಕ್ಕೆ ಹಾರ್ಡ್‌ವೇರ್ ಹೈವೇ: ಜಯನಗರದಲ್ಲಿ 2 ಲಕ್ಷ ಬಹುಮಾನದ ಹ್ಯಾಕಥಾನ್!

By kannadanewsnow0914/12/2025 12:23 PM

ಬೆಂಗಳೂರು: ​ನಮ್ಮ ಬೆಂಗಳೂರು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನಕ್ಕೆ ಹೆಸರಾಗಿದೆ. ಈಗ ನಮ್ಮ ಯುವ ಪ್ರತಿಭೆಗಳು ನೇರವಾಗಿ ಮಂಗಳ ಗ್ರಹದ ಮಿಷನ್‌ಗಳಿಗೆ ಕೈಜೋಡಿಸುವ ಅವಕಾಶ ಬಂದಿದೆ.

ನಗರದ ಹೃದಯ ಭಾಗವಾದ ಜಯನಗರದಲ್ಲಿರುವ ಪಾರ್ಸೆಕ್‌ (ParSEC) ಸೆಂಟರ್‌ ಹಾಗೂ ಮೇಕರ್ಸ್‌ ಅಡ್ಡದಲ್ಲಿ 2025ರ ಡಿಸೆಂಬರ್ 19 ರಿಂದ 21ರವರೆಗೆ ‘ಹಾರ್ಡ್‌ವೇರ್ ಹ್ಯಾಕಥಾನ್ 2.0 – ಜರ್ನಿ ಟು ಮಾರ್ಸ್’ ಹಮ್ಮಿಕೊಳ್ಳಲಾಗಿದೆ. ​ಇದು 72 ಗಂಟೆಗಳ ಕಾಲ ನಡೆಯುವ ಒಂದು ಸ್ಪೆಷಲ್ ಹಾರ್ಡ್‌ವೇರ್ ಹ್ಯಾಕಥಾನ್ ಆಗಿದೆ. ಮಂಗಳ ಗ್ರಹದಲ್ಲಿ ಮನುಷ್ಯರು ಬದುಕಲು ಮತ್ತು ಪ್ರಯಾಣಿಸಲು ನೆರವಾಗುವ ಅತ್ಯಾಧುನಿಕ ಟೆಕ್ ಪರಿಹಾರಗಳನ್ನು ಇಲ್ಲಿ ವಿನ್ಯಾಸಗೊಳಿಸಬೇಕು ಮತ್ತು ಪ್ರೋಟೋಟೈಪ್ ಮಾಡಬೇಕು.

​ ಇದರಲ್ಲಿ ಏನು ವಿಶೇಷ?

ಮೇಕರ್‌ಗಳು ಮತ್ತು ಎಂಜಿನಿಯರ್‌ಗಳ ಕೆಲಸ ಸುಲಭವಾಗಿಸಲು, ನಿಮ್ಮದೇ ವಿನ್ಯಾಸದ ಪಿಸಿಬಿ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್) ಕೇವಲ 24 ಗಂಟೆಗಳ ಒಳಗೆ ಸ್ಥಳದಲ್ಲಿಯೇ ತಯಾರಿಸಿ ಕೊಡಲಾಗುತ್ತದೆ. ಜತೆಗೆ, ಸರ್ಕ್ಯೂಟ್ ವಿನ್ಯಾಸ, ಬಿಸಿನೆಸ್ ಪ್ಲ್ಯಾನಿಂಗ್ ಮತ್ತು ಹಣ ಹೂಡಿಕೆದಾರರ ಮುಂದೆ ಪ್ರದರ್ಶಿಸುವ ತರಬೇತಿ ಕಾರ್ಯಾಗಾರಗಳು ನಡೆಯಲಿವೆ. ಕಾರ್ಯಕ್ರಮದ ಕೊನೆಯಲ್ಲಿ ಈ ಆವಿಷ್ಕಾರಗಳನ್ನು ಸಾರ್ವಜನಿಕರಿಗೆ ‘ಸೈನ್ಸ್ ಗ್ಯಾಲರಿ’ ಶೈಲಿಯಲ್ಲಿ ಪ್ರದರ್ಶಿಸಲಾಗುತ್ತದೆ.

​ಬಹುಮಾನ ಎಷ್ಟು?:

ಈ ಹ್ಯಾಕಥಾನ್‌ನ ಒಟ್ಟು ಬಹುಮಾನದ ಮೊತ್ತ ₹2,00,000 ರೂಪಾಯಿಯಾಗಿದ್ದು,ಪ್ರಥಮ ಬಹುಮಾನ ₹1,00,000, ದ್ವಿತೀಯ ₹60,000 ಮತ್ತು ತೃತೀಯ ₹40,000 ವನ್ನು ಒಳಗೊಂಡಿದೆ. ಇದರ ವಿಶೇಷತೆ ಏನೆಂದರೆ, ತೀರ್ಪುಗಾರರಾಗಿ ಪ್ರಸಿದ್ಧ ವೆಂಚರ್ ಕ್ಯಾಪಿಟಲಿಸ್ಟ್‌ಗಳು (VCs) ಮತ್ತು ಏಂಜೆಲ್ ಹೂಡಿಕೆದಾರರು ಇರುತ್ತಾರೆ. ವಿಜೇತ ತಂಡಗಳಿಗೆ ಕೇವಲ ಬಹುಮಾನ ಮಾತ್ರವಲ್ಲ, ತಮ್ಮ ಐಡಿಯಾಗಳಿಗೆ ನೈಜ ಬಂಡವಾಳ ಮತ್ತು ಮಾರ್ಕೆಟ್ ಮೌಲ್ಯೀಕರಣ ಪಡೆಯುವ ದೊಡ್ಡ ಅವಕಾಶ ಸಿಗಲಿದೆ.

​ನೀವು ಪಿಸಿಬಿ ವಿನ್ಯಾಸಕರಾಗಿರಲಿ, ಎಂಬೆಡೆಡ್ ಎಂಜಿನಿಯರ್ ಆಗಿರಲಿ ಅಥವಾ ಹೊಸದನ್ನು ಕಲಿಯಲು ಉತ್ಸುಕರಾಗಿರುವ ಡಿಐವೈ (DIY) ಮೇಕರ್ ಆಗಿರಲಿ, ಈ ಕಾರ್ಯಕ್ರಮ ನಿಮಗೆ ಹೇಳಿ ಮಾಡಿಸಿದಂತಿದೆ. ನಿಮ್ಮ ‘ಮಂಗಳ ಮಿಷನ್’ ಐಡಿಯಾಗಳನ್ನು ನೈಜ ಹಾರ್ಡ್‌ವೇರ್‌ ಆಗಿ ಪರಿವರ್ತಿಸಲು, hack.pcbcupid.com ಈ ಲಿಂಕ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಮಂಗಳ ಗ್ರಹದತ್ತ ಮಾನವನ ಪ್ರಯಾಣವು ಸವಾಲಿನಿಂದ ಕೂಡಿದ್ದರೂ ಅದು ಅತ್ಯಮೂಲ್ಯವಾದುದು. ಈ ಸಾಧನೆ ನೆಮ್ಮೆಲ್ಲರ ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಮಂಗಳನಲ್ಲಿ ವಿಜ್ಞಾನ ಕೇಂದ್ರವನ್ನು ನಿರ್ಮಿಸುವ ಪರಮ್‌ ಸಂಸ್ಥೆಯ ದೃಷ್ಟಿಕೋನಕ್ಕೆ ಈ ಹ್ಯಾಕಥಾನ್‌ ಮೊದಲ ಹೆಜ್ಜೆಯಾಗಿದೆ ಎಂದು ಪರಮ್‌ ಸೈನ್ಸ್‌ನ ನಿರ್ದೇಶಕ ಇನವಂಶಿ ಇನಗಂಟಿ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

SHOCKING : ಮೊಟ್ಟೆ ಪ್ರೀಯರಿಗೆ ಬಿಗ್ ಶಾಕ್ : ಮೊಟ್ಟೆಯಲ್ಲಿ ‘AOZ’ ಕ್ಯಾನ್ಸರ್ ಕಾರಕ ಅಂಶ ಪತ್ತೆ!

14/12/2025 12:26 PM1 Min Read

BIG NEWS : ಸಿಎಂ ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ : ಆರ್.ಅಶೋಕ್ ವಾಗ್ದಾಳಿ

14/12/2025 12:21 PM1 Min Read

BIG NEWS : ಪ್ರೀತಿಸಿ ಮೋಸ : `ತಾಳಿ ಕಟ್ಟುವ ಶುಭವೇಳೆ’ ಯುವಕನ ಮದುವೆ ಮನೆಗೆ ನುಗ್ಗಿದ ಮಾಜಿ ಲವರ್.!

14/12/2025 12:21 PM2 Mins Read
Recent News

SHOCKING : ಮೊಟ್ಟೆ ಪ್ರೀಯರಿಗೆ ಬಿಗ್ ಶಾಕ್ : ಮೊಟ್ಟೆಯಲ್ಲಿ ‘AOZ’ ಕ್ಯಾನ್ಸರ್ ಕಾರಕ ಅಂಶ ಪತ್ತೆ!

14/12/2025 12:26 PM

ಭಾರತದ ಮೇಲೆ ಟ್ರಂಪ್ ಶೇ.50ರಷ್ಟು ಸುಂಕದ ವಿರುದ್ಧ US ಸದನದಲ್ಲಿ ನಿರ್ಣಯ ಮಂಡಿಸಿದ ಸಂಸದರು

14/12/2025 12:26 PM

ಮಂಗಳಕ್ಕೆ ಹಾರ್ಡ್‌ವೇರ್ ಹೈವೇ: ಜಯನಗರದಲ್ಲಿ 2 ಲಕ್ಷ ಬಹುಮಾನದ ಹ್ಯಾಕಥಾನ್!

14/12/2025 12:23 PM

BIG NEWS : ಸಿಎಂ ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ : ಆರ್.ಅಶೋಕ್ ವಾಗ್ದಾಳಿ

14/12/2025 12:21 PM
State News
KARNATAKA

SHOCKING : ಮೊಟ್ಟೆ ಪ್ರೀಯರಿಗೆ ಬಿಗ್ ಶಾಕ್ : ಮೊಟ್ಟೆಯಲ್ಲಿ ‘AOZ’ ಕ್ಯಾನ್ಸರ್ ಕಾರಕ ಅಂಶ ಪತ್ತೆ!

By kannadanewsnow0514/12/2025 12:26 PM KARNATAKA 1 Min Read

ಬೆಂಗಳೂರು : ಜನಪ್ರಿಯ ಬ್ರಾಂಡ್ ಗಳ ಮೊಟ್ಟೆಯಲ್ಲಿ ಇದೀಗ ಕ್ಯಾನ್ಸರ್ ಅಂಶ ಪತ್ತೆಯಾಗಿದೆ. ಹೊಟ್ಟೆಯಲ್ಲಿ ಕ್ಯಾನ್ಸರ್ ಇದೆ ಎಂಬ ಚರ್ಚೆ…

ಮಂಗಳಕ್ಕೆ ಹಾರ್ಡ್‌ವೇರ್ ಹೈವೇ: ಜಯನಗರದಲ್ಲಿ 2 ಲಕ್ಷ ಬಹುಮಾನದ ಹ್ಯಾಕಥಾನ್!

14/12/2025 12:23 PM

BIG NEWS : ಸಿಎಂ ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ : ಆರ್.ಅಶೋಕ್ ವಾಗ್ದಾಳಿ

14/12/2025 12:21 PM

BIG NEWS : ಪ್ರೀತಿಸಿ ಮೋಸ : `ತಾಳಿ ಕಟ್ಟುವ ಶುಭವೇಳೆ’ ಯುವಕನ ಮದುವೆ ಮನೆಗೆ ನುಗ್ಗಿದ ಮಾಜಿ ಲವರ್.!

14/12/2025 12:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.