ಬೆಂಗಳೂರು : ಕಳೆದ ಶನಿವಾರದಿಂದ ರಾಜ್ಯದಲ್ಲಿ ಬ್ರೇಕ್ ಫಾಸ್ಟ್ ರಾಜಕಾರಣ ಜೋರಾಗಿತ್ತು. ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಕರೆದು ಬ್ರೇಕ್ ಫಾಸ್ಟ್ ಮೀಟಿಂಗ್ ಆರೇಂಜ್ ಮಾಡಿದ್ದರು. ಬಳಿಕ ನಿನ್ನೆ ಡಿಕೆ ಶಿವಕುಮಾರ್ ಖುದ್ದು ಸಿಎಂ ಸಿದ್ದರಾಮಯ್ಯಗೆ ಅಹ್ವಾನ ನೀಡಿದ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದರು.
ಇದೀಗ ಇಂದು ರಾಜ್ಯಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆಗಮಿಸಿದ್ದು, ಮಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಲಂಚ್ ಮೀಟಿಂಗ್ ಅರೇಂಜ್ ಮಾಡಿದ್ದಾರೆ. ಮಂಗಳೂರಲ್ಲಿ ಕಾವೇರಿ ಗೆಸ್ಟ್ ಹೌಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಕೆ.ಸಿ ವೇಣುಗೋಪಾಲ್ ಸೇರಿದಂತೆ ಹಲವು ಸಚಿವರು ಭಾಗಿಯಾಗಲಿದ್ದಾರೆ.
ಸಿಎಂಗೆ ಖಾದ್ಯ ರೆಡಿ
ಡಿಕೆ ಶಿವಕುಮಾರ್ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಗೆ ಸಿಎಂ ಫೆವರೇಟ್ ನಾಟಿಕೋಳಿ ಸಾರು ಮಾಡಿದ್ದರು. ಇದೀಗ ಮಂಗಳೂರಲ್ಲಿ ಸಹ ನಾಟಿ ಕೋಳಿ ಸಾರು ಸೇರಿದಂತೆ ಮಂಗಳೂರಿನ ಹಲವು ಖಡಯಗಳನ್ನು ತಯ್ಯಾರಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಲಂಚ್ ಮೀಟಿಂಗ್ ಆರಂಭವಾಗಲಿದೆ. ರಾಜ್ಯದ ಬೆಳವಣಿಗೆ ಬಗ್ಗೆ ವೇಣುಗೋಪಾಲ್ ಮಾಹಿತಿ ಸಂಗ್ರಹಿಸಲಿದ್ದಾರೆ.
ಇಂದು ಮಂಗಳೂರಿನ ಅತಿಥಿ ಗೃಹದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
Met and held discussions with AICC General Secretary (Organisation) Shri K C Venugopal at the Guest House in Mangaluru. @kcvenugopalmp pic.twitter.com/V7EOuxg7MS— Siddaramaiah (@siddaramaiah) December 3, 2025








