Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

EPFO ನಿಯಮ ಬದಲಾವಣೆ ; ಈಗ ಕನಿಷ್ಠ ವೇತನ 25 ಸಾವಿರ ರೂ. ಇದ್ದರೆ ಮಾತ್ರ ‘PF’ ಕಡಿತ.?

29/10/2025 7:12 PM

BIG NEWS: ರಾಜ್ಯದ ರುದ್ರಭೂಮಿಯ 147 ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ವ?

29/10/2025 6:55 PM

‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ‘ಇಂಟರ್ನ್ ಶಿಪ್’ಗೆ ಅರ್ಜಿ ಆಹ್ವಾನ

29/10/2025 6:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದ ರುದ್ರಭೂಮಿಯ 147 ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ವ?
KARNATAKA

BIG NEWS: ರಾಜ್ಯದ ರುದ್ರಭೂಮಿಯ 147 ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ವ?

By kannadanewsnow0929/10/2025 6:55 PM

ಬೆಂಗಳೂರು: ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗ ಮಾಡೋ ಮಾತುಗಳು ಬಹಳ ಚರ್ಚೆಗೆ ಬಂದಿದೆ. ಸುರಂಗ ಮಾರ್ಗ ಆಮೇಲೆ ಮಾಡೋಣ. ಆದರೆ, ರುದ್ರಭೂಮಿಯಲ್ಲಿ ಕೆಲಸ ಮಾಡುವ 147 ಜನ ಕಾರ್ಮಿಕರಿಗೆ ಹಣ ಕೊಡೋ ಯೋಗ್ಯತೆ ಇದೆಯೇ ಇಲ್ಲವೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವಿರಾರು ಕೋಟಿ ಖರ್ಚಿನಲ್ಲಿ ಸುರಂಗ ಕೊರೆಯೋ ಮಾತನಾಡುವ ಕಾಂಗ್ರೆಸ್ ನವರು, 147 ಜನರಿಗೆ ಸಂಬಳ ಕೊಟ್ಟಿಲ್ಲ. ಅನೇಕರಿಗೆ ಸಂಬಳ ಕೊಡದೆ ವಂಚನೆ ಮಾಡಿದ್ದಾರೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಹೋಗ್ತಿದ್ದಾರಾ.? ರಸ್ತೆ ಗುಂಡಿ ಮುಚ್ಚಲು ಆಗ್ತಿಲ್ಲ ನಿಮಗೆ ಎಂದು ಕೇಳಿದರು.

ಸುರಂಗ ಎಂಬುದು ದೋಚುವ ತಂತ್ರ ಅಷ್ಟೇ ಎಂದು ಆರೋಪಿಸಿದ ಅವರು, ಬಿಹಾರ ಚುನಾವಣೆಗೆ ಹಣ ಕಳಿಸಲು ಎಲ್ಲೆಲ್ಲಿ ಸಭೆ ಆಗ್ತಿದೆ. ಡಿನ್ನರ್ ಪಾರ್ಟಿ, ಬ್ರೇಕ್ ಫಾಸ್ಟ್ ಮೀಟಿಂಗ್ ಆಗ್ತಿದೆ. ಅದಕ್ಕೆ ಕಾಂಗ್ರೆಸ್ ಕಚೇರಿಗೇ ದೊಡ್ಡ ಬೀಗ ಹಾಕಬೇಕು ಅಂತ ರಾಜಣ್ಣ ಹೇಳಿದ್ದಾರೆ ಎಂದು ವಿಶ್ಲೇಷಿಸಿದರು.

ಹೇಗಿದ್ದರೂ ಹಾಕೋದು ಹಾಕ್ತೀರಾ, 7 ಲಿವರ್ ನವತಾಳ್ ಬೀಗ ಹಾಕಿ ಯಾರೂ ತೆಗೆಯಲು ಆಗಲ್ಲ ಎಂದು ವ್ಯಂಗ್ಯವಾಗಿ ನುಡಿದರು. ಕಾಂಗ್ರೆಸ್ ನಾಯಕರಿಗೆ ಆಪತ್ತು ಬಂದಾಗ ಕಾಂಗ್ರೆಸ್ ನವರೇ ಮಾತಾಡಲ್ಲ. ಅದೇ ಆರೆಸ್ಸೆಸ್‍ಗೆ ಆಪತ್ತು ಬಂದಾಗ ಎಲ್ಲಾ ಅಂಗ ಸಂಘಟನೆಗಳು ಮಾತಾಡ್ತಾವೆ. ನಿಮಗೆ ದಲಿತ ಸಂಘಟನೆಗಳು ಮಾತ್ರ ಬೇಕು. ಕಾಂಗ್ರೆಸ್ ಪಕ್ಷಕ್ಕೆ ಸಂಕಟ ಬಂದಾಗ ದಲಿತರು ಬೇಕಾಗುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸುಡುವ ಮನೆ ಅಂತ ಅಂಬೇಡ್ಕರ್ ಹೇಳಿದ್ದರು. ಅನೇಕ ದಲಿತ ಸಂಘಟನೆಗಳು ಪ್ಯಾಕೇಜ್‍ಗೆ ಬಿದ್ದಿವೆ. ಎಲ್ಲಾ ಪಕ್ಷದಲ್ಲೂ ಇರಿ, ಅಧಿಕಾರ ಪಡೆಯಿರಿ ಅಂತ ಅಂಬೇಡ್ಕರ್ ಹೇಳಿದ್ದರು. ಆದರೆ, ಕಾಂಗ್ರೆಸ್ ಹಾಕೋ ಮೂಳೆಗೆ ಜೋತು ಬಿದ್ದು, ಅಲ್ಲೇ ಇದ್ದೀರಿ. ಯಾರದ್ದೋ ಮಾತಿಗೆ ದಲಿತ ಸಮಾವೇಶ ಮಾಡುತ್ತೀರಿ ಎಂದು ಟೀಕಿಸಿದರು.

ಪ್ರಿಯಾಂಕ್ ಖರ್ಗೆ ಬಗ್ಗೆ ಮಾತಾಡಬಾರದು ಅಂದ್ರೂ ಮಾತಾಡಬೇಕಿದೆ. ಅಸ್ಸಾಂ ಸಿಎಂ ಫಸ್ಟ್ ಕ್ಲಾಸ್ ಈಡಿಯಟ್ ಅಂತ ಹೇಳಿದ್ದಾರೆ. ಅವರು ಫಸ್ಟ್ ಕ್ಲಾಸ್ ಅಂತ ಹೇಳಿದ್ದಾರೆ, ಆದ್ರೆ ಅವರು ಫೇಲ್ ಕ್ಲಾಸ್ ಸಾರ್ ಎಂದು ಗಮನಕ್ಕೆ ತಂದರು. ಅದರ ಬಗ್ಗೆ ನೀವು ಮಾತಾಡಿ ಅಂತ ಕೆಲ ದಲಿತ ಸಂಘಟನೆಗಳು ಮನವಿ ಮಾಡಿವೆ. ಪ್ರಿಯಾಂಕ್ ಖರ್ಗೆ ಅವರು ಎಸ್‍ಎಸ್‍ಎಲ್‍ಸಿ, ಪಿಯುಸಿ ಅಂತ ಚುನಾವಣೆ ನಿಲ್ಲುವಾಗ ಹಾಕಿದ್ದಾರೆ. ನೀವು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಾವಾಗ ಬರೆದಿರಿ? ಪಿಯುಸಿ ಪರೀಕ್ಷೆ ಯಾವಾಗ ಬರೆದಿರಿ? ಎಂಬುದನ್ನು ನೀವೇ ಹೇಳಿ ಎಂದು ಸವಾಲು ಹಾಕಿದರು.

ನಿಮ್ಮ ಸುಳ್ಳುಗಳೇ ನಿಮ್ಮ ಇತಿಹಾಸ ಹೇಳುತ್ತವೆ. ನೀವು ದಡ್ಡ ಶಿಖಾಮಣಿ ಇದ್ದೀರಿ. ಇಲ್ಲದ ವಿಚಾರ ತೆಗೆದು ವಾದ ಮಾಡುತ್ತೀರಿ. ನಿಮ್ಮ ಇಲಾಖೆ ಮೊದಲು ಸರಿಯಾಗಿ ನಿರ್ವಹಿಸಿ. ಎಲ್ಲಾದರೂ ಟ್ರೈನಿಂಗ್‍ಗೆ ಹೋಗಲಿ; ಮಧು ಬಂಗಾರಪ್ಪ, ಸುಧಾಕರ್‍ಅವರು ಸೇರಿ ಡಿಗ್ರಿ ಸರ್ಟಿಫಿಕೇಟ್ ಕೊಡಿಸಲಿ ಎಂದು ಸಲಹೆ ನೀಡಿದರು.

ಸ್ಪೀಕರ್ ಯು.ಟಿ ಖಾದರ್ ನೂರಾರು ಕೋಟಿ ಲೂಟಿ ಮಾಡಿರೋ ಆರೋಪ ಇದೆ. ಮುಖ್ಯಮಂತ್ರಿಗಳು ಇದರ ಕುರಿತು ಹಾಲಿ ಜಡ್ಜ್ ಮೂಲಕ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ವಯನಾಡಿಗೆ ಬನ್ನಿ ಅಂತ ಹೇಳಿರೋದು ಮೊದಲು ರಾಹುಲ್ ಗಾಂಧಿ. ಅಲ್ಲಿ ಸ್ಪರ್ಧೆ ಮಾಡಿದರು. ಈಗ ಅವರ ತಂಗಿ ಸ್ಪರ್ಧೆ ಮಾಡಿದ್ದಾರೆ. ವಯನಾಡಿಗೆ ಬನ್ನಿ ಅಂತ ಕರ್ನಾಟಕ ಸರ್ಕಾರ ಪ್ರಚಾರ ಮಾಡಬಾರದು. ಚಿಕ್ಕಮಗಳೂರು, ಉತ್ತರ ಕನ್ನಡ, ಮೈಸೂರಿಗೆ ಬನ್ನಿ ಅಂತ ಟೂರಿಸಂ ಮಾಡಬೇಕು. ವಯನಾಡಿಗೆ ಬನ್ನಿ ಅಂತ ಹೇಳೋದಕ್ಕೆ ಇವರು ಯಾರು? ಇವರದು ಗುಲಾಮಿ ಸರ್ಕಾರ ಅಂತ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.

‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ‘ಇಂಟರ್ನ್ ಶಿಪ್’ಗೆ ಅರ್ಜಿ ಆಹ್ವಾನ

BIG ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ `ENO’ : ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡುಹಿಡಿಯಿರಿ.!

Share. Facebook Twitter LinkedIn WhatsApp Email

Related Posts

‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ‘ಇಂಟರ್ನ್ ಶಿಪ್’ಗೆ ಅರ್ಜಿ ಆಹ್ವಾನ

29/10/2025 6:51 PM1 Min Read

ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ ಅಧ್ಯಕ್ಷ ಸ್ಥಾನದಿಂದ ಡಾ.ಗೋವಿಂದ ಸ್ವಾಮಿ ಕಿಕ್ ಔಟ್

29/10/2025 6:37 PM1 Min Read

ನಿಮ್ಮ ಮನೆಗೆ ಮಾಟ-ಮಂತ್ರ ತಾಗ ಬಾರದು ಅಂದ್ರೆ ಏನು ಮಾಡಬೇಕು ಗೊತ್ತೇ?

29/10/2025 6:28 PM2 Mins Read
Recent News

EPFO ನಿಯಮ ಬದಲಾವಣೆ ; ಈಗ ಕನಿಷ್ಠ ವೇತನ 25 ಸಾವಿರ ರೂ. ಇದ್ದರೆ ಮಾತ್ರ ‘PF’ ಕಡಿತ.?

29/10/2025 7:12 PM

BIG NEWS: ರಾಜ್ಯದ ರುದ್ರಭೂಮಿಯ 147 ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ವ?

29/10/2025 6:55 PM

‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ‘ಇಂಟರ್ನ್ ಶಿಪ್’ಗೆ ಅರ್ಜಿ ಆಹ್ವಾನ

29/10/2025 6:51 PM

ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ ಅಧ್ಯಕ್ಷ ಸ್ಥಾನದಿಂದ ಡಾ.ಗೋವಿಂದ ಸ್ವಾಮಿ ಕಿಕ್ ಔಟ್

29/10/2025 6:37 PM
State News
KARNATAKA

BIG NEWS: ರಾಜ್ಯದ ರುದ್ರಭೂಮಿಯ 147 ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ವ?

By kannadanewsnow0929/10/2025 6:55 PM KARNATAKA 2 Mins Read

ಬೆಂಗಳೂರು: ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗ ಮಾಡೋ ಮಾತುಗಳು ಬಹಳ ಚರ್ಚೆಗೆ ಬಂದಿದೆ. ಸುರಂಗ ಮಾರ್ಗ ಆಮೇಲೆ ಮಾಡೋಣ. ಆದರೆ,…

‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ‘ಇಂಟರ್ನ್ ಶಿಪ್’ಗೆ ಅರ್ಜಿ ಆಹ್ವಾನ

29/10/2025 6:51 PM

ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ ಅಧ್ಯಕ್ಷ ಸ್ಥಾನದಿಂದ ಡಾ.ಗೋವಿಂದ ಸ್ವಾಮಿ ಕಿಕ್ ಔಟ್

29/10/2025 6:37 PM

ನಿಮ್ಮ ಮನೆಗೆ ಮಾಟ-ಮಂತ್ರ ತಾಗ ಬಾರದು ಅಂದ್ರೆ ಏನು ಮಾಡಬೇಕು ಗೊತ್ತೇ?

29/10/2025 6:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.