ಬೆಂಗಳೂರು : ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ನಿರಾಕರಣೆ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ಮಕ್ಕಳು ಆರ್ ಎಸ್ ಎಸ್ ಕಚೇರಿಗೆ ಹೋಗುತ್ತಾರೆ ಸಿಟಿ ರವಿ ಮಕ್ಕಳು ಹೋಗಿದ್ದರು ನನ್ನ ಮಕ್ಕಳು ಹೋಗಿದ್ದರು ಮುಂದಿನ 2020 ರಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಆಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ಮಕ್ಕಳು ಆರ್ ಎಸ್ ಎಸ್ ಕಚೇರಿಗೆ ಹೋಗುತ್ತಾರೆ. ಸಿಟಿ ರವಿ ಮಕ್ಕಳು ಹೋಗಿದ್ದರು ನನ್ನ ಮಕ್ಕಳು ಹೋಗಿದ್ದರು. ನೀವು ರಸ್ತೆ ಚಳುವಳಿ ಮಾಡಿದ್ರಾ? ನಿಮ್ಮವರು ಮಾಡಿದ್ರಾ? ಹನುಮಧ್ವಜ ಹೋರಾಟದಲ್ಲಿ ನನ್ನ ಮಗ ಭಾಗಿಯಾಗಿದ್ದ. ನಿಮ್ಮ ಮಕ್ಕಳು ದಲಿತ ಸಂಘಟನೆ ಪರವಾಗಿ ಭಾಗವಹಿಸಿದ್ದಾರ? 2028ಕ್ಕೆ ನಮ್ಮ ಸರ್ಕಾರವೇ ಬರುತ್ತದೆ ಶಾಸಕ ಕೆ.ಎನ್ ರಾಜಣ್ಣ ನಮಾಜ್ ಬಗ್ಗೆಯೂ ಮಾತನಾಡಿದ್ದಾರೆ. ಸಂತೋಷ ಹೆಗಡೆ ಆರ್ಎಸ್ಎಸ್ ಬ್ಯಾನ್ ತಪ್ಪು ಅಂತ ಹೇಳಿದ್ದಾರೆ ಮುಂದೆ ನಾವು ಕಾಂಗ್ರೆಸ್ ಬ್ಯಾನ್ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಮೇಲೆ ಕೋಪ ಇದ್ದರೆ ನಮ್ಮ ಮೇಲೆ ತೀರಿಸಿಕೊಳ್ಳಲಿ ಕಾಂಗ್ರೆಸ್ ಸಪೋರ್ಟರ್ಸ್ ಪಾಕಿಸ್ತಾನ ಜಿಂದಾಬಾದ್ ಅಂತಾರೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದರು ಆಗಬಾಯಲ್ಲಿ ಏನು ಇಟ್ಟುಕೊಂಡಿದ್ದರು ಅನುಮತಿ ತೆಗೆದುಕೊಳ್ಳದೆ ರಸ್ತೆ ಬಂದ್ ಮಾಡುತ್ತಾರೆ ನಾವು ಯಾವತ್ತಾದರೂ ಬ್ಯಾನ್ ಮಾಡಿದ್ವಾ? ಪುರಸಭೆಯಿಂದ ಆರ್ ಎಸ್ ಎಸ್ ಅನುಮತಿ ಪಡೆದುಕೊಂಡಿತ್ತು ನಮ್ಮ ಸರ್ಕಾರ ಇದ್ದಾಗ ಅವರನ್ನು ಒಂದು ದಿನವೂ ತೆಗೆದು ಹಾಕಿಲ್ಲ ಎಂದು ಆರ್ ಅಶೋಕ್ ತಿಳಿಸಿದರು.