ಮುಂಬೈ : ಬೀದಿ ನಾಯಿ ಕಡಿತಕ್ಕೊಳಗಾದ ಬಾಲಕ ರೇಬೀಸ್ನಿಂದ ಸಾವನ್ನಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ವರದಿಯಾಗಿದೆ.ಮೂರು ವರ್ಷದ ಬಾಲಕ ಅರ್ಮಾನ್ ಆಟವಾಡುತ್ತಿದ್ದಾಗ ಬೀದಿ ನಾಯಿ ಆತನ ಮೇಲೆ ದಾಳಿ ಮಾಡಿತ್ತು.
ಘಟನೆ ನಡೆದ ಎಂಟು ದಿನಗಳ ನಂತರ ಮಗು ಅರ್ಮಾನ್ ತಲೆ ಕೆರೆದುಕೊಳ್ಳಲು ಪ್ರಾರಂಭಿಸಿದಾಗ, ಕುಟುಂಬದವರು ತಲೆಯ ಮೇಲೆ ಕೂದಲಿನ ಕೆಳಗೆ ನಾಯಿ ಕಚ್ಚಿದ ಗಾಯ ಅದರ ಹಲ್ಲಿನ ಗುರುತುಗಳು ಇರುವುದನ್ನು ಗಮನಿಸಿದರು. ಆದರೆ ನಾಯಿ ದಾಳಿಯ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ, ನಾಯಿ ದಾಳಿಯ ಬಗ್ಗೆ ಯಾರೂ ನಮಗೆ ಮಾಹಿತಿ ನೀಡಲಿಲ್ಲ. ಆಟವಾಡುವಾಗ ಬಿದ್ದೆ ಎಂದು ಮಗು ಅರ್ಮಾನ್ ಹೇಳಿದ್ದಾನೆ ಎಂದು ಅರ್ಮಾನ್ನ ಚಿಕ್ಕಪ್ಪ ಶೇಖ್ ರಹೀಸ್ ಹೇಳಿದ್ದಾರೆ.
ಕುಟುಂಬದವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ, ಕುಟುಂಬದವರಿಗೆ ಆತ ಬಿದ್ದಿದ್ದಾನೆ ಎಂದು ಯಾರೋ ಮಾಹಿತಿ ನೀಡಿದ್ದರು. ಹೀಗಾಗಿ ಮಗುವಿನ ದೇಹವನ್ನೆಲ್ಲಾ ಪರೀಕ್ಷೆ ಮಾಡಿದ ಪೋಷಕರಿಗೆ ಎಲ್ಲೂ ಗಾಯಗಳು ಕಾಣಿಸಿಕೊಂಡಿರಲಿಲ್ಲ, ಹೀಗಾಗಿ ಅವರೂ ಸುಮ್ಮನಾಗಿದ್ದರು. ಆದರೆ ನಾಯಿ ದಾಳಿ ನಡೆಸಿದ ಸುಮಾರು 10 ದಿನಗಳ ನಂತರ, ಮಗುವಿನಲ್ಲಿ ರೇಬೀಸ್ ಲಕ್ಷಣಗಳು ಗೋಚರಿಸಿದ್ದು, ನಂತರ ಮಗು ಸಾವನ್ನಪ್ಪಿತು ಎಂದು ಕುಟುಂಬದವರು ಹೇಳಿದ್ದಾರೆ.