Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೊದಲು ಪುಷ್ಪ 2, ನಂತ್ರ RCB ಈವೆಂಟ್, ಈಗ ವಿಜಯ್ ರ್ಯಾಲಿ… ಹಿಂದಿನ ಕಾಲ್ತುಳಿತ ಘಟನೆಗಳಿಂದ ಪಾಠ ಕಲಿತಿಲ್ಲವೇ?

27/09/2025 10:03 PM

KMF ಹಾಲು ಉತ್ಪಾದಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ: ಸಾಗರ ತಾಲ್ಲೂಕು ಅಧ್ಯಕ್ಷ ನಾಗರಾಜ್

27/09/2025 9:49 PM

BIGG UPDATE : ತಮಿಳುನಾಡಿನಲ್ಲಿ ನಟ ‘ವಿಜಯ್’ ರ್ಯಾಲಿ ವೇಳೆ ಕಾಲ್ತುಳಿತ ; ಮೃತರ ಸಂಖ್ಯೆ 31ಕ್ಕೆ ಏರಿಕೆ, 50 ಮಂದಿಗೆ ಗಾಯ |Stampede

27/09/2025 9:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » KMF ಹಾಲು ಉತ್ಪಾದಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ: ಸಾಗರ ತಾಲ್ಲೂಕು ಅಧ್ಯಕ್ಷ ನಾಗರಾಜ್
KARNATAKA

KMF ಹಾಲು ಉತ್ಪಾದಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ: ಸಾಗರ ತಾಲ್ಲೂಕು ಅಧ್ಯಕ್ಷ ನಾಗರಾಜ್

By kannadanewsnow0927/09/2025 9:49 PM

ಶಿವಮೊಗ್ಗ : ಕೆಎಂಎಫ್ ನಂದಿನಿ ಹಾಲು ಮಾರಾಟಗಾರರಿಗೆ ಸ್ಪಂದಿಸುತ್ತಿಲ್ಲ. ಹಲವು ವರ್ಷಗಳಿಂದ ಕೆ.ಎಂ.ಎಫ್. ಮೂಲಕ ಶಿಮೂಲ್ ಅಭಿವೃದ್ದಿಗೆ ಶ್ರಮಿಸುತ್ತಿರುವ ಹಾಲು ಮಾರಾಟಗಾರರನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ತಾಲ್ಲೂಕು ಹಾಲು ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್ ದೂರಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ಮೂರು ದಶಕಗಳಿಂದ ನಂದಿನಿ ಉತ್ಪನ್ನಗಳನ್ನು ಕಮೀಷನ್ ಆಧಾರದಲ್ಲಿ ಮಾರಾಟ ಮಾಡುವ ಏಜೆಂಟರ ಬಗ್ಗೆ ತೀವೃ ನಿರ್ಲಕ್ಷ್ಯ ವಹಿಸಲಾಗಿದೆ ಎಂದರು.

ಹಿಂದೆ ಏಜೆಂಟರಿಂದ ಹಾಲಿನ ಹಣವನ್ನು ತೆಗೆದುಕೊಂಡು ಹೋಗಲಾಗುತಿತ್ತು. ಕೆಲವು ವರ್ಷಗಳ ಹಿಂದೆ ಅದನ್ನು ಎಚ್.ಡಿ.ಎಫ್.ಸಿ. ಬ್ಯಾಂಕ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿ ಮಾಡಲು ತಿಳಿಸಲಾಗಿತ್ತು. ಆದರೆ ಆನ್‌ಲೈನ್‌ನಲ್ಲಿ ಪಾವತಿ ಮಾಡುವ ಏಜೆಂಟರ ಲಕ್ಷಾಂತರ ರೂಪಾಯಿ ಹಣ ಕಡಿತವಾಗುತ್ತಿದೆ. ಒಂದೆರಡು ರೂಪಾಯಿ ಕಮೀಷನ್‌ಗಾಗಿ ಕೆಲಸ ಮಾಡುವ ನಮಗೆ ಬ್ಯಾಂಕ್‌ನಿಂದ ಆನ್‌ಲೈನ್ ವಂಚನೆಯಾಗುತ್ತಿದೆ. ಈ ಬಗ್ಗೆ ಶಿಮುಲ್ ಅಧ್ಯಕ್ಷರು, ನಿರ್ದೇಶಕರಿಗೆ ತಿಳಿಸಿದರೆ ಸ್ಪಂದಿಸದೇ ಅವರಿವರ ಮೇಲೆ ಆರೋಪ ಹೊರಿಸಿ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಶಿಮುಲ್ ಆಡಳಿತ ಮಂಡಳಿ, ಅಧಿಕಾರಿ ವರ್ಗ ನಮ್ಮನ್ನು ಶೋಷಣೆ ಮಾಡುತ್ತಿದೆ ಎಂದರು.

ಸಾಕಷ್ಟು ಬಾರಿ ಹಾಲು ಮಾರಾಟಗಾರರ ಕಷ್ಟ ಹೇಳಿದರೂ ಸ್ಪಂದಿಸುತ್ತಿಲ್ಲ. ಶಿಮುಲ್‌ಗೆ ಹಾಲು ಉತ್ಪಾದಕರು ಬಿಟ್ಟರೆ ಬೇರೆ ಯಾರೂ ಮುಖ್ಯ ಎನಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೆ. 30ರಂದು ಎಚ್.ಡಿ.ಎಫ್.ಸಿ. ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ನಮ್ಮ ಸಮಸ್ಯೆ ಬಗೆಹರಿಯದೆ ಹೋದಲ್ಲಿ ಅ. 1ರಂದು ತಾಲ್ಲೂಕಿನಾದ್ಯಂತ ನಂದಿನಿ ಹಾಲು ಮತ್ತಿತರೆ ಉತ್ಪನ್ನಗಳ ಮಾರಾಟ ಸಂಪೂರ್ಣ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಹಾಲು ಮಾರಾಟಗಾರರ ಹೋರಾಟಕ್ಕೆ ಗ್ರಾಹಕರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ಸುದ್ದಿಗೋಷ್ಟಿಯಲ್ಲಿ ಲಕ್ಷ್ಮಣ್, ಕೆಂಪರಾಜ್, ಪ್ರಶಾಂತ್, ಮಾಲತೇಶ್, ಅಜಯ್, ಸುವರ್ಣ ಉಪಾಧ್ಯಾಯ, ಭಾರ್ಗವ, ಗುತ್ಯಪ್ಪ, ರಮೇಶ್, ಲೋಕೇಶಕುಮಾರ್ ಹಾಜರಿದ್ದರು.

Share. Facebook Twitter LinkedIn WhatsApp Email

Related Posts

ರಾಜ್ಯಾಧ್ಯಂತ ಸರ್ವಸ್ ಸಮಸ್ಯೆ ನಡುವೆಯೂ 13 ಲಕ್ಷ ಜಾತಿಗಣತಿ ಸಮೀಕ್ಷೆ: ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ಡೀಟೆಲ್ಸ್

27/09/2025 9:20 PM1 Min Read

ಸಾರಿಗೆ ಬಸ್ ಆಯುಧ ಪೂಜೆ ದರ 2024ರಿಂದಲೇ ರೂ.100ರಿಂದ 250ಕ್ಕೆ ಹೆಚ್ಚಳ: KSRTC ಸ್ಪಷ್ಟನೆ

27/09/2025 8:49 PM1 Min Read

ಕಾಂಗ್ರೆಸ್ಸಿನದು ನುಡಿದಂತೆ ನಡೆದ ಸರ್ಕಾರವೇ?: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್

27/09/2025 8:44 PM3 Mins Read
Recent News

ಮೊದಲು ಪುಷ್ಪ 2, ನಂತ್ರ RCB ಈವೆಂಟ್, ಈಗ ವಿಜಯ್ ರ್ಯಾಲಿ… ಹಿಂದಿನ ಕಾಲ್ತುಳಿತ ಘಟನೆಗಳಿಂದ ಪಾಠ ಕಲಿತಿಲ್ಲವೇ?

27/09/2025 10:03 PM

KMF ಹಾಲು ಉತ್ಪಾದಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ: ಸಾಗರ ತಾಲ್ಲೂಕು ಅಧ್ಯಕ್ಷ ನಾಗರಾಜ್

27/09/2025 9:49 PM

BIGG UPDATE : ತಮಿಳುನಾಡಿನಲ್ಲಿ ನಟ ‘ವಿಜಯ್’ ರ್ಯಾಲಿ ವೇಳೆ ಕಾಲ್ತುಳಿತ ; ಮೃತರ ಸಂಖ್ಯೆ 31ಕ್ಕೆ ಏರಿಕೆ, 50 ಮಂದಿಗೆ ಗಾಯ |Stampede

27/09/2025 9:41 PM

ತಮಿಳುನಾಡಿನಲ್ಲಿ ಕಾಲ್ತುಳಿತ ದುರಂತ: ಪ್ರಧಾನಿ ನರೇಂದ್ರ ಮೋದಿ ಸಂತಾಪ

27/09/2025 9:36 PM
State News
KARNATAKA

KMF ಹಾಲು ಉತ್ಪಾದಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ: ಸಾಗರ ತಾಲ್ಲೂಕು ಅಧ್ಯಕ್ಷ ನಾಗರಾಜ್

By kannadanewsnow0927/09/2025 9:49 PM KARNATAKA 1 Min Read

ಶಿವಮೊಗ್ಗ : ಕೆಎಂಎಫ್ ನಂದಿನಿ ಹಾಲು ಮಾರಾಟಗಾರರಿಗೆ ಸ್ಪಂದಿಸುತ್ತಿಲ್ಲ. ಹಲವು ವರ್ಷಗಳಿಂದ ಕೆ.ಎಂ.ಎಫ್. ಮೂಲಕ ಶಿಮೂಲ್ ಅಭಿವೃದ್ದಿಗೆ ಶ್ರಮಿಸುತ್ತಿರುವ ಹಾಲು…

ರಾಜ್ಯಾಧ್ಯಂತ ಸರ್ವಸ್ ಸಮಸ್ಯೆ ನಡುವೆಯೂ 13 ಲಕ್ಷ ಜಾತಿಗಣತಿ ಸಮೀಕ್ಷೆ: ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ಡೀಟೆಲ್ಸ್

27/09/2025 9:20 PM

ಸಾರಿಗೆ ಬಸ್ ಆಯುಧ ಪೂಜೆ ದರ 2024ರಿಂದಲೇ ರೂ.100ರಿಂದ 250ಕ್ಕೆ ಹೆಚ್ಚಳ: KSRTC ಸ್ಪಷ್ಟನೆ

27/09/2025 8:49 PM

ಕಾಂಗ್ರೆಸ್ಸಿನದು ನುಡಿದಂತೆ ನಡೆದ ಸರ್ಕಾರವೇ?: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್

27/09/2025 8:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.