Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

15/03/2026 7:37 AM

ಅಡುಗೆ ಮನೆಗೆ ಬಂತು ಸ್ಮಾರ್ಟ್ ಗ್ಯಾಸ್: ಏನಿದು ಪಿಎನ್‌ಜಿ (PNG) ಸಂಪರ್ಕ? ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್!

15/03/2026 7:32 AM

ದಕ್ಷಿಣ ಲೆಬನಾನ್‌ನಲ್ಲಿ ರಣಾಂಗಣ: ಇಸ್ರೇಲಿ ಸೈನಿಕರ ಮೇಲೆ ಹೆಬೊಲ್ಲಾ ಕ್ಷಿಪಣಿ ದಾಳಿ; ಗ್ರಾಮಗಳ ಮೇಲೆ ಮುಂದುವರಿದ ವೈಮಾನಿಕ ಪ್ರಹಾರ!

15/03/2026 7:17 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ‘ದೀವರು’ ಎಂದು ಬರೆಸಿ- ಅಭಿಯಾನ ಸಂಚಾಲಕ ವೆಂಕಟೇಶ್ ಮೇಳವರಿಗೆ ಮನವಿ
KARNATAKA

ಶಿವಮೊಗ್ಗ: ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ‘ದೀವರು’ ಎಂದು ಬರೆಸಿ- ಅಭಿಯಾನ ಸಂಚಾಲಕ ವೆಂಕಟೇಶ್ ಮೇಳವರಿಗೆ ಮನವಿ

By kannadanewsnow0923/09/2025 6:38 PM

ಶಿವಮೊಗ್ಗ: ಜಾತಿ ಜನಗಣತಿಗೆ ಬರುವವರ ಬಳಿ ಸಮುದಾಯ ಬಾಂಧವರು ಜಾತಿ ಕಾಲಂನಲ್ಲಿ ದೀವರು, ಉಪ ಜಾತಿ ಕಾಲಂನಲ್ಲೂ ಸಹ ದೀವರು ಎಂದು ನಮೂದಿಸುವಂತೆ ನಾವು ದೀವರು ಅಭಿಯಾನದ ಸಂಚಾಲಕ ವೆಂಕಟೇಶ್ ಮೆಳವರಿಗೆ ಮನವಿ ಮಾಡಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ದೀವರ ಜನಸಂಖ್ಯೆ 6ಲಕ್ಷಕ್ಕೂ ಅಧಿಕವಿದ್ದು ಗಣತಿದಾರರು ಬಂದಾಗ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ದೀವರು ಎಂದು ನಮೂದಿಸಿ ಎಂದು ತಿಳಿಸಿದರು.

ಈಡಿಗ ಎನ್ನುವುದು ಒಂದು ಒಕ್ಕೂಟವಾಗಿದ್ದು, ಇದರಲ್ಲಿ 26 ಪಂಗಡಗಳು ಸೇರಿವೆ. ಕೆಲವು ಕಡೆ ಜಾತಿ ವಿಭಾಗದಲ್ಲಿ ಈಡಿಗ ಎಂದು ಬರೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದರಿಂದ ಸರ್ಕಾರದ ಅನೇಕ ಸೌಲಭ್ಯಗಳಿಂದ ನಾವು ವಂಚಿತರಾಗುವ ಸಾಧ್ಯತೆ ಇದೆ. ಹಿಂದಿನ ಕಾಂತರಾಜ ವರದಿ ಸಂದರ್ಭದಲ್ಲಿ ಸಹ ದೀವರ ಜನಸಂಖ್ಯೆಯನ್ನು ಕೇವಲ 65ಸಾವಿರ ಎಂದು ತೋರಿಸಲಾಗಿದೆ. ಅತ್ಯಂತ ಪ್ರಾಚೀನ ಸಂಸ್ಕೃತಿ, ಆಚಾರ, ವಿಚಾರ, ಆಹಾರ ಪದ್ದತಿಯೊಂದಿಗೆ ಬುಡಕಟ್ಟು ವಿಶೇಷತೆ ಹೊಂದಿರುವ ದೀವರ ಜಾತಿಯೇ ನೇಪಥ್ಯಕ್ಕೆ ಸರಿಯುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಪ್ರಮುಖರು ಒಟ್ಟಾಗಿ ಚರ್ಚೆ ಮಾಡಿ ದೀವರ ಜಾತಿ ಎಂದು ನಮೂದಿಸುವ ನಿರ್ಣಯ ಕೈಗೊಳ್ಳಲಾಗಿದೆ. ಸಮಾಜದ ಗುರುಗಳು ಸಹ ಇದಕ್ಕೆ ಸಹಮತ ಸೂಚಿಸಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಈ ಅಭಿಯಾನವನ್ನು ಬೆಂಬಲಿಸಬೇಕು. ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ದೀವರು ಎಂದು ನಮೂದಿಸುವಂತೆ ಸಮುದಾಯ ಬಾಂಧವರಿಗೆ ಕರೆ ನೀಡಬೇಕು ಎಂದು ತಿಳಿಸಿದರು.

ಸಮಾಜದ ಪ್ರಮುಖರಾದ ಶಿವಾನಂದ ಕುಗ್ವೆ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಐತಿಹಾಸಿಕವಾದ ಹಿನ್ನೆಲೆ ದೀವರ ಸಮಾಜಕ್ಕೆ ಇದೆ. ನಮ್ಮದೇ ಆದ ವಿಶೇಷ ಭಾಷೆಯನ್ನು ನಾವು ಹೊಂದಿದ್ದೇವೆ. ದೀವರ ಜಾತಿ ಕುರಿತು ಅನೇಕ ಶಾಸನಗಳು ಇದ್ದು, ಸಾಕಷ್ಟು ಕೃತಿಗಳು ಬೇರೆಬೇರೆ ಲೇಖಕರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಹಳೇಪೈಕ, ದೀವರು ಎಂಬಿತ್ಯಾದಿ ದಾಖಲೆಗಳು ಹಳೇಯ ಶೈಕ್ಷಣಿಕ ದಾಖಲೆಗಳಲ್ಲಿ ಲಭ್ಯವಿದೆ. ಕಾಗೋಡು ಚಳುವಳಿ ಸೇರಿದಂತೆ ಕೆಳದಿ ಸಾಮ್ರಾಜ್ಯದ ಕಾಲದಲ್ಲಿ ದೀವರು ಪ್ರಮುಖ ಪಾತ್ರ ವಹಿಸಿದ್ದು ಕಂಡು ಬರುತ್ತದೆ. ಬದಲಾದ ದಿನಮಾನಗಳಲ್ಲಿ ದೀವರ ಜಾತಿ ಬೇರೆಬೇರೆ ಸ್ಥಿತ್ಯಂತರಗಳ ನಡುವೆ ಕೊಚ್ಚಿಹೋಗುವ ಸಾಧ್ಯತೆ ಇದ್ದು, ಇದನ್ನು ಉಳಿಸಿಕೊಳ್ಳಲು ನಾವು ಗಣತಿ ಸಂದರ್ಭದಲ್ಲಿ ದೀವರು ಎಂದು ನಮೂದಿಸುವ ಮೂಲಕ ಪ್ರಯತ್ನಿಸಬೇಕು ಎಂದರು.

ಪ್ರಭಾವತಿ ಚಂದ್ರಕಾಂತ್, ಈಶ್ವರನಾಯಕ ಕುಗ್ವೆ ಮಾತನಾಡಿದರು. ಗೋಷ್ಟಿಯಲ್ಲಿ ಡಿ.ಗಣಪತಪ್ಪ, ರವಿಕುಮಾರ್ ವೈ.ಕೆ., ದೇವರಾಜ್, ಸುಮಿತ್ರ ಮಹಾಬಲೇಶ್ವರ, ಲಕ್ಷ್ಮಿ ಗಣಪತಿ, ಉಷಾ, ಸಂದೀಪ್ ಕೆಳದಿ ಇನ್ನಿತರರು ಉಪಸ್ಥಿತರಿದ್ದರು.

ಶಿವಮೊಗ್ಗ: ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಪ್ರಗತಿಗೆ ಶ್ರಮಿಸಿ- ಶಾಸಕ ಗೋಪಾಲಕೃಷ್ಣ ಬೇಳೂರು

ವೈದ್ಯಕೀಯ ಕೋರ್ಸ್ ಗಳಿಗೆ 3ನೇ ಸುತ್ತಿನ ಅಂತಿಮ ಫಲಿತಾಂಶ ಪ್ರಕಟ: ಕೆಇಎ

Share. Facebook Twitter LinkedIn WhatsApp Email

Related Posts

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

15/03/2026 7:37 AM2 Mins Read

ಚಿಕನ್ ಲಿವರ್ ತಿಂದ್ರೆ ಸಿಗಲಿವೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು : ಮರೆಯದೇ ಈ ವಿಷಯ ತಿಳಿಯಿರಿ !

15/03/2026 7:15 AM2 Mins Read

ಲಿಂಗ ತಾರತಮ್ಯಕ್ಕೆ ತಿಲಾಂಜಲಿ : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಸಮಾಜಕ್ಕೆ ಮಾದರಿಯಾದ ಅಕ್ಕ-ತಂಗಿಯರು!

15/03/2026 7:05 AM1 Min Read
Recent News

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

15/03/2026 7:37 AM

ಅಡುಗೆ ಮನೆಗೆ ಬಂತು ಸ್ಮಾರ್ಟ್ ಗ್ಯಾಸ್: ಏನಿದು ಪಿಎನ್‌ಜಿ (PNG) ಸಂಪರ್ಕ? ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್!

15/03/2026 7:32 AM

ದಕ್ಷಿಣ ಲೆಬನಾನ್‌ನಲ್ಲಿ ರಣಾಂಗಣ: ಇಸ್ರೇಲಿ ಸೈನಿಕರ ಮೇಲೆ ಹೆಬೊಲ್ಲಾ ಕ್ಷಿಪಣಿ ದಾಳಿ; ಗ್ರಾಮಗಳ ಮೇಲೆ ಮುಂದುವರಿದ ವೈಮಾನಿಕ ಪ್ರಹಾರ!

15/03/2026 7:17 AM

ಚಿಕನ್ ಲಿವರ್ ತಿಂದ್ರೆ ಸಿಗಲಿವೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು : ಮರೆಯದೇ ಈ ವಿಷಯ ತಿಳಿಯಿರಿ !

15/03/2026 7:15 AM
State News
KARNATAKA

ಈ ಟಿಪ್ಸ್ ಫಾಲೋ ಮಾಡಿದ್ರೆ ವರ್ಷಗಳ ಹಳೆಯ `ಮೂಲವ್ಯಾಧಿ’ ಒಂದೇ ವಾರದಲ್ಲಿ ಮಾಯ !

By kannadanewsnow5715/03/2026 7:37 AM KARNATAKA 2 Mins Read

ಮೂಲವ್ಯಾಧಿ (Piles) ಎನ್ನುವುದು ಸಾಮಾನ್ಯವಾದರೂ ಅತ್ಯಂತ ನೋವಿನಿಂದ ಕೂಡಿದ ಆರೋಗ್ಯ ಸಮಸ್ಯೆಯಾಗಿದೆ. ಮಲದ್ವಾರದ ಭಾಗದಲ್ಲಿ ರಕ್ತನಾಳಗಳ ಬಾವು ಮತ್ತು ರಕ್ತಸ್ರಾವ…

ಚಿಕನ್ ಲಿವರ್ ತಿಂದ್ರೆ ಸಿಗಲಿವೆ ಈ ಎಲ್ಲಾ ಆರೋಗ್ಯ ಪ್ರಯೋಜನಗಳು : ಮರೆಯದೇ ಈ ವಿಷಯ ತಿಳಿಯಿರಿ !

15/03/2026 7:15 AM

ಲಿಂಗ ತಾರತಮ್ಯಕ್ಕೆ ತಿಲಾಂಜಲಿ : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಸಮಾಜಕ್ಕೆ ಮಾದರಿಯಾದ ಅಕ್ಕ-ತಂಗಿಯರು!

15/03/2026 7:05 AM

ALERT : ರಾಜ್ಯಾದ್ಯಂತ ಬಿಸಿಲಿನ ತಾಪ ಹೆಚ್ಚಳ : ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ !

15/03/2026 6:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.