Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಚಾಮರಾಜನಗರದಲ್ಲಿ ಲಾರಿ, ಕಾರು, ಮೊಪೆಡ್ ಮಧ್ಯ ಸರಣಿ ಅಪಘಾತ : ನಾಲ್ವರು ಬಾಲಕರ ದುರ್ಮರಣ!

07/09/2025 7:43 AM

ರಾಹುಲ್ ಗಾಂಧಿ ಯುಕೆ ಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತನಿಗೆ ED ಸಮನ್ಸ್

07/09/2025 7:33 AM

ಪ್ಲಾಸ್ಟಿಕ್ ಭೂಮಿಗೆ ಮಾರಕ: ಮಣ್ಣಿನಲ್ಲಿ ಹಲವು ವರ್ಷಗಳ ಹಳೆಯ ಪ್ಯಾಕೆಟ್ ಸುರಕ್ಷಿತವಾಗಿರುವ ವಿಡಿಯೋ ವೈರಲ್ | Watch video

07/09/2025 7:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೊಟ್ಟ ಮಾತು ಉಳಿಸಿಕೊಳ್ಳಿ ಮದ್ದೂರು ಶಾಸಕ ಉದಯ್ ಗೆ ಪ್ರತಿಭಟನಾಕಾರರ ಆಗ್ರಹ
KARNATAKA

ಕೊಟ್ಟ ಮಾತು ಉಳಿಸಿಕೊಳ್ಳಿ ಮದ್ದೂರು ಶಾಸಕ ಉದಯ್ ಗೆ ಪ್ರತಿಭಟನಾಕಾರರ ಆಗ್ರಹ

By kannadanewsnow0904/09/2025 7:36 PM

ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ, ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭಾ ವ್ಯಾಪ್ತಿಗೆ ವಿಲೀನಗೊಳಿಸಿರುವ ಶಾಸಕ ಕೆ.ಎಂ.ಉದಯ್ ಕ್ರಮ ವಿರೋಧಿಸಿ ಗ್ರಾಪಂಗಳ ವ್ಯಾಪ್ತಿಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ರೈತ ಸಂಘದ ಬೆಂಬಲದೊಂದಿಗೆ ತಾಲೂಕು ಕಛೇರಿ ಎದುರು ಕಪ್ಪು ಬಾವುಟ ಪ್ರದರ್ಶನ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

ರೈತ ನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಗ್ರಾಮಸ್ಥರು ಪುರಸಭೆ ಆವರಣದಲ್ಲಿ ನಡೆಯಲಿದ್ದ ನಗರಸಭಾ ನಾಮಫಲಕ ಅನಾವರಣ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ವಿಫಲಯತ್ನ ನಡೆಸಿದರು.

ಪುರಸಭೆ ಕಛೇರಿ ಸಮೀಪದ ಅನತಿ ದೂರದಲ್ಲಿ ಪ್ರತಿಭಟನೆಗಿಳಿದ ವಿವಿಧ ಗ್ರಾಮಗಳ ಗ್ರಾಮಸ್ಥರು ಪುರಸಭೆ ಕಛೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೋಲೀಸರು ಪ್ರತಿಭಟನಾಕಾರರು ಪುರಸಭೆ ಕಛೇರಿಗೆ ಬಳಿ ಬರದಂತೆ ತಾಲೂಕು ಕಛೇರಿ ಬಳಿಯೇ ದಿಗ್ಬಂಧನ ವಿಧಿಸಿದರು.

ಈಗಾಗಲೇ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿದರೇ ಹಲವಾರು ಸೌಲಭ್ಯಗಳು ಮತ್ತು ಯೋಜನೆಗಳಿಂದ ವಂಚಿತವಾಗುತ್ತವೆ ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿದರೆ ನರೇಗಾ ಯೋಜನೆ, ಬಡ ಮಕ್ಕಳಿಗೆ ಗ್ರಾಮೀಣ ಕೃಪಾಂಕ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಅನುದಾನ, ತೆರಿಗೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಹೀಗಾಗಿ, ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಬಾರದೆಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ಎಚ್ಚರಿಸಲಾಗಿತ್ತು.

ಆದರೆ, ಶಾಸಕ ಉದಯ್ ಅವರು, ನಮ್ಮ ಎಲ್ಲಾ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಏಕ ಪಕ್ಷಿಯ ನಿರ್ಧಾರ ಕೈಗೊಂಡು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಶಾಸಕ ಉದಯ್ ಅವರ ಕ್ರಮ ವಿರೋಧಿಸಿ ನ್ಯಾಯಾಲಯದ ಮೂಲಕ ಕಾನುನಾತ್ಮಕ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಶಾಸಕರು ಎಚ್ಚೆತ್ತುಕೊಂಡು ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಗ್ರಾಮಗಳ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಜೊತೆ ಚರ್ಚಿಸಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಯಿಂದ ಕೈಬಿಡುವಂತೆ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸುನಂದಾ ಜಯರಾಂ ಎಚ್ಚರಿಸಿದರು.

ಗೆಜ್ಜಲಗೆರೆ ಗ್ರಾಪಂ ಅಧ್ಯಕ್ಷೆ ರಾಧಾ, ಉಪಾಧ್ಯಕ್ಷ ದೀಪಕ್, ಚಾಮನಹಳ್ಳಿ ಗ್ರಾಪಂ ಸದಸ್ಯ ಕೃಷ್ಣಪ್ಪ, ತಾಪಂ ಮಾಜಿ ಸದಸ್ಯ ಸತೀಶ್, ರೈತ ಮುಖಂಡರಾದ ಜಿ.ಎ.ಶಂಕರ್, ಲಿಂಗಪ್ಪಾಜಿ, ವೀರಪ್ಪ ಮುಖಂಡರಾದ ಮೋಹನ್, ಮನು, ಭಗವಾನ್, ಗೊವನಹಳ್ಳಿ ಪ್ರಸನ್ನ ಸೇರಿದಂತೆ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

BREAKING : ಚಾಮರಾಜನಗರದಲ್ಲಿ ಲಾರಿ, ಕಾರು, ಮೊಪೆಡ್ ಮಧ್ಯ ಸರಣಿ ಅಪಘಾತ : ನಾಲ್ವರು ಬಾಲಕರ ದುರ್ಮರಣ!

07/09/2025 7:43 AM1 Min Read

BIG NEWS : ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ : ದಿನಕ್ಕೆ 522 ರೂ. ಸಂಬಳ!

07/09/2025 7:00 AM1 Min Read

BREAKING : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಗಣೇಶ ವಿಸರ್ಜನೆ ವೇಳೆ ವ್ಯಕ್ತಿಗೆ ಚಾಕು ಇರಿತ!

07/09/2025 6:56 AM1 Min Read
Recent News

BREAKING : ಚಾಮರಾಜನಗರದಲ್ಲಿ ಲಾರಿ, ಕಾರು, ಮೊಪೆಡ್ ಮಧ್ಯ ಸರಣಿ ಅಪಘಾತ : ನಾಲ್ವರು ಬಾಲಕರ ದುರ್ಮರಣ!

07/09/2025 7:43 AM

ರಾಹುಲ್ ಗಾಂಧಿ ಯುಕೆ ಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತನಿಗೆ ED ಸಮನ್ಸ್

07/09/2025 7:33 AM

ಪ್ಲಾಸ್ಟಿಕ್ ಭೂಮಿಗೆ ಮಾರಕ: ಮಣ್ಣಿನಲ್ಲಿ ಹಲವು ವರ್ಷಗಳ ಹಳೆಯ ಪ್ಯಾಕೆಟ್ ಸುರಕ್ಷಿತವಾಗಿರುವ ವಿಡಿಯೋ ವೈರಲ್ | Watch video

07/09/2025 7:29 AM

ಕಿಸ್ ಕ್ಯಾಮ್ ಹಗರಣದ ನಂತರ, ಮಾಜಿ ಆಸ್ಟ್ರೋನಮರ್ ಹೆಚ್‌ಆರ್ ಹಾಗೂ ಪತಿ ವಿಚ್ಛೇದನಕ್ಕೆ ಅರ್ಜಿ | Kiss Cam Scandal

07/09/2025 7:19 AM
State News
KARNATAKA

BREAKING : ಚಾಮರಾಜನಗರದಲ್ಲಿ ಲಾರಿ, ಕಾರು, ಮೊಪೆಡ್ ಮಧ್ಯ ಸರಣಿ ಅಪಘಾತ : ನಾಲ್ವರು ಬಾಲಕರ ದುರ್ಮರಣ!

By kannadanewsnow0507/09/2025 7:43 AM KARNATAKA 1 Min Read

ಚಾಮರಾಜನಗರ : ಗಾಳೀಪುರ ಸಮೀಪದ ರಿಂಗ್ ರಸ್ತೆಯಲ್ಲಿ ಸಂಭವಿಸಿದ್ದ ಲಾರಿ, ಕಾರು ಹಾಗೂ ಮೊಪೆಡ್ ನಡುವಿನ ಸರಣಿ ಅಪಘಾತದಲ್ಲಿ ಮೃತಪಟ್ಟವರ…

BIG NEWS : ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ : ದಿನಕ್ಕೆ 522 ರೂ. ಸಂಬಳ!

07/09/2025 7:00 AM

BREAKING : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಗಣೇಶ ವಿಸರ್ಜನೆ ವೇಳೆ ವ್ಯಕ್ತಿಗೆ ಚಾಕು ಇರಿತ!

07/09/2025 6:56 AM

ವಾಹನದ ನಂಬರ್ ಪ್ಲೇಟ್ ಮೇಲೆ ಹೀಗೆ ಹಾಕಿದ್ರೆ ಈ ಸಂಖ್ಯೆಗೆ ಜಸ್ಟ್ ವಾಟ್ಸ್ ಆಪ್ ಮಾಡಿ, ದಂಡ ಖಚಿತ

07/09/2025 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.