ಬೆಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡರು ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. “ಮಂಜುನಾಥ ಮಹಾಶಕ್ತ ದೇವರು. ಅವರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಇಂತಹ ಅಪಪ್ರಚಾರ ಮಾಡುವವರೇ ಮುಂದೆ ಅದರ ಪ್ರತಿಫಲ ಅನುಭವಿಸುತ್ತಾರೆ. ಅಂತಿಮ ತೀರ್ಪು ಮಂಜುನಾಥನ ಅನುಗ್ರಹದಿಂದಲೇ ಒಳ್ಳೆಯದಾಗುತ್ತದೆ” ಎಂದು ದೇವೇಗೌಡರು ಹೇಳಿದ್ದಾರೆ.
ಏನೇ ಏರುಪೇರು ಆದರೂ ಎಲ್ಲವೂ ತಾತ್ಕಾಲಿಕ ಅಂತಿಮ ಫಲಿತಾಂಶ ಇದೆಯಲ್ಲವೇ ಅದು ಅವನ ಅನುಗ್ರಹ ದಿಂದ ಒಳ್ಳೆಯದೇ ಆಗಲಿದೆ. ಮಂಜುನಾಥ ನ ಶಕ್ತಿ ಯನ್ನು ಯಾರೂ ಕಡಿಮೆ ಮಾಡಲು ಆಗಲ್ಲ.ಅಪ ಪ್ರಚಾರ ಮಾಡುವವರೇ ಮುಂದೆ ಕಷ್ಟ ಕ್ಕೆ ಸಿಲುಕುತ್ತಾರೆ ಕಾದು ನೋಡಿ ಇವತ್ತು ಅಪ ಪ್ರಚಾರ ಮಾಡುತ್ತಿರುವ ವರು ಮುಂದೆ ಪ್ರತಿಫಲ ಅನುಭವಿಸುತ್ತಾರೆ ಸಮಾಜದಲ್ಲಿ ಎಲ್ಲ ರೀತಿಯ ಜನ ಇದ್ದಾರೆ. ನಾವು ಗಂಭೀರ ವಾಗಿ ಪ್ರಾರ್ಥನೆ ಮಾಡಬೇಕು ಅಷ್ಟೇ ಅಂತಿಮ ತೀರ್ಮಾನ ನೀನೇ ಕೊಡಪ್ಪಾ ಅಂತಾ ಕೇಳಬೇಕು ಅಷ್ಟೇ ಎಂದರು.
ಈಗ ನಡೆಯುತ್ತಿರುವ ಎಲ್ಲ ಘಟನೆಗಳಿಗೆ ಮಂಜುನಾಥನೇ ಉತ್ತರ ಕೊಡುತ್ತಾರೆ. ಏನೇ ಏರುಪೇರುಗಳಾದರೂ ಅವು ತಾತ್ಕಾಲಿಕ. ಮಂಜುನಾಥನ ಶಕ್ತಿಯನ್ನು ಯಾರೂ ಕಡಿಮೆ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಎಲ್ಲ ರೀತಿಯ ಜನರಿರುತ್ತಾರೆ. ಆದ್ದರಿಂದ ನಾವು ಗಂಭೀರವಾಗಿ ಪ್ರಾರ್ಥನೆ ಮಾಡಬೇಕು. ಅಂತಿಮ ನಿರ್ಣಯ ದೇವರ ಕೈಯಲ್ಲಿದೆ ಎಂದರು.