ಮೈಸೂರು : ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಮೈಸೂರಲ್ಲಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಜಿಲೇಟಿನ್ ಕಡ್ಡಿ ಬಾಯಿಯ ಒಳಗೆ ಹಾಕಿ ಸ್ಪೋಟಿಸಿ ಮಹಿಳೆಯ ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ಕಿರಾತಕ ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದಾನೆ.
ಹೌದು ಮೈಸೂರಿನ ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಈ ಒಂದು ಭೀಕರವಾದ ಕೊಲೆ ನಡೆದಿದೆ. ಸಿದ್ದರಾಜು ಎಂಬಾತನಿಂದ ರಕ್ಷಿತಾ (20) ಎನ್ನುವ ಯುವತಿಯ ಭೀಕರ ಕೊಲೆಯಾಗಿದೆ. ರಕ್ಷಿತಾ ಹುಣಸೂರು ತಾಲೂಕಿನ ಗೆರಸನಹಳ್ಳಿ ಗ್ರಾಮದ ನಿವಾಸಿ ಆಗಿದ್ದು, ಇನ್ನು ಸಿದ್ದರಾಜು ಪಿರಿಯಾಪಟ್ಟಣ ಬಿಳಿಕೆರೆ ಗ್ರಾಮದ ನಿವಾಸಿಯಾಗಿದ್ದಾನೇ ಎಂದು ತಿಳಿದು ಬಂದಿದೆ.
ಹತ್ಯೆಯಾದ ರಕ್ಷಿತಾ ಕೇರಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದಳು. ಮದುವೆಯಾದರು ಸಹ ಸಿದ್ದರಾಜು ಜೊತೆಗೆ ರಕ್ಷಿತಾ ಆನಂತಿಕ ಸಂಬಂಧ ಇಟ್ಟುಕೊಂಡಿದ್ದಳು. ಅನೈತಿಕ ಸಂಬಂಧದಿಂದ ಇದೀಗ ರಕ್ಷಿತಾಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.