ಬೆಂಗಳೂರು: ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಗಿದೆ. ಅದೇ ದೇವದಾಸಿ ಮಕ್ಕಳಿಗೆ ಪಿತೃತ್ವ ಹಕ್ಕು ನೀಡುವುದಾಗಿದೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ದೇವದಾಸಿ ಮಹಿಳೆಯರಿಗೆ ಶೋಷಣೆಯಿಂದ ವಿಮೋಚನೆ, ಅವರ ಮಕ್ಕಳಿಗೆ ಸಬಲೀಕರಣ ಹಾಗೂ ಸಾಮಾಜಿಕ ಗೌರವ ತರುವ ನಿಟ್ಟಿನಲ್ಲಿ ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ – 2025 ಅಂಗೀಕಾರವಾಗಿದೆ.
ಸರ್ಕಾರದ ಮಹತ್ವದ ನಿರ್ಧಾರ, ದೇವದಾಸಿ ಮಕ್ಕಳಿಗೆ ಪಿತೃತ್ವ ಹಕ್ಕು!
ದೇವದಾಸಿ ಮಹಿಳೆಯರಿಗೆ ಶೋಷಣೆಯಿಂದ ವಿಮೋಚನೆ, ಅವರ ಮಕ್ಕಳಿಗೆ ಸಬಲೀಕರಣ ಹಾಗೂ ಸಾಮಾಜಿಕ ಗೌರವ ತರುವ ನಿಟ್ಟಿನಲ್ಲಿ ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ – 2025 ಅಂಗೀಕಾರವಾಗಿದೆ. #SocialWelfare_Karnataka… pic.twitter.com/h002KqjXTw
— ಸಮಾಜ ಕಲ್ಯಾಣ ಇಲಾಖೆ (@SWDGoK) August 22, 2025