Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೋದಿ ಸರ್ಕಾರದ 12 ವರ್ಷ: ಕೋಟ್ಯಂತರ ಭಾರತೀಯರ ಬದುಕನ್ನೇ ಬದಲಿಸಿದ 10 ಪ್ರಮುಖ ಯೋಜನೆಗಳು | 12 Years Of Modi Government

ಚುನಾವಣಾ ಆಯೋಗ, ಬಿಜೆಪಿ ನಡುವಿನ ಒಳಸಂಚಿನಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: MLC ರಮೇಶ್ ಬಾಬು ಗಂಭೀರ ಆರೋಪ

ಕಲಬುರ್ಗಿ ಜನತೆಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ಕಲ್ಬುರ್ಗಿ ನಡುವೆ ಸ್ಟಾರ್ ಏರ್ ವಿಮಾನ ಸೇವೆ ಪುನಾರಂಭ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಒಳ ಮೀಸಲಾತಿ ಜಾರಿ : ಅಲೆಮಾರಿ ಸಮುದಾಯಕ್ಕೆ ತೀವ್ರ ಅನ್ಯಾಯ: ಎನ್.ಆರ್.ಚಂದ್ರಶೇಖರ್
KARNATAKA

ಒಳ ಮೀಸಲಾತಿ ಜಾರಿ : ಅಲೆಮಾರಿ ಸಮುದಾಯಕ್ಕೆ ತೀವ್ರ ಅನ್ಯಾಯ: ಎನ್.ಆರ್.ಚಂದ್ರಶೇಖರ್

By ವಸಂತ ಬಿ ಈಶ್ವರಗೆರೆ

ಮಂಡ್ಯ: ಒಳ ಮೀಸಲಾತಿ ಜಾರಿ ಮಾಡುವಲ್ಲಿ ಬಲಾಡ್ಯ ಪರಿಶಿಷ್ಟ ಸಮುದಾಯಗಳನ್ನು ಓಲೈಸುವ ಭರದಲ್ಲಿ ದುರ್ಬಲ ಅಲೆಮಾರಿ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಿದೆ ಎಂದು ಅಖಿಲ ಕರ್ನಾಟಕ ಡಾ|| ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ಗಂಭೀರ ಆರೋಪ ಮಾಡಿದರು.

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತಾನೇ ರಚನೆ ಮಾಡಿದ್ದ ನ್ಯಾ|| ನಾಗಮೋಹನ್ ದಾಸ್ ವರದಿಯ ಅಂಶಗಳಿಗೆ ತಿಲಾಂಜಲಿ ನೀಡಿದೆ. ಈಗಾಗಲೇ ಇರುವ ವರದಿಗಳನ್ನು ಅಲ್ಲಗಳೆದು ತಾನಾಗಿಯೇ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿ ವರದಿ ನೀಡಲು ಹೇಳಿತ್ತು. ಆಯೋಗವು ಒಳ ಮೀಸಲಾತಿಗೆ ಸಂಬಂಧಿಸಿದ ವರದಿ ನೀಡುವಾಗ 59 ಅಲೆಮಾರಿ ಸಮುದಾಯ ಗಳನ್ನು ಒಂದು ಗುಂಪು ಮಾಡಿ ಶೇ 1 ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಈ ಗುಂಪನ್ನೇ ರದ್ದು ಮಾಡಿ ಬಲಿಷ್ಠ ಅಸ್ಪೃಶ್ಯ ಜಾತಿಗಳೊಂದಿಗೆ ದುರ್ಬಲ ಅಲೆಮಾರಿಗಳನ್ನು ಸೇರ್ಪಡೆ ಮಾಡಿ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.

ಒಳ ಮೀಸಲಾತಿಯ ಮೂಲ ಉದ್ದೇಶವೇ ಸೌಲಭ್ಯ, ವಿದ್ಯೆ, ಸಂಪತ್ತು ಮತ್ತು ನೌಕರಿಯಿಂದ ವಂಚಿತರಾದ ಜನಾಂಗಕ್ಕೆ ಅವಕಾಶ ನೀಡುವುದು.
ಆದರೆ, ಸರ್ಕಾರವು ಬಲಾಢ್ಯ ಸಮುದಾಯಗಳ ಜೊತೆ ಅಲೆಮಾರಿಗಳನ್ನು ಸೇರಿಸುವ ಮೂಲಕ ಸಾಮಾಜಿಕ ಅನ್ಯಾಯ ಮಾಡಿದೆ ಎಂದು ದೂರಿದರು.

ಅಲೆಮಾರಿ ಜನಾಂಗಕ್ಕೆ ಆದಷ್ಟು ಬೇಗ ಸರ್ಕಾರ ಶೇಕಡಾ 1 ರಷ್ಟು ಮೀಸಲಾತಿ ನೀಡಬೇಕು ಇಲ್ಲದಿದ್ದರೆ ನಿರಂತರವಾಗಿ ಈ ಹೋರಾಟ ಮುಂದುವರೆಸಲಾಗುವುದು ಎಂದು ಚಂದ್ರಶೇಖರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದಾಗಲೇ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹೋರಾಟ ಆರಂಭವಾಗಿ ಕಾಂಗ್ರೆಸ್ ಪಕ್ಷದಿಂದಲೇ ಅಂತ್ಯ ಕಂಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ಹೆಚ್.ಆಂಜನೇಯ ಅವರುಗಳಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಅಭಿನಂದನೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಚೇಲ, ಆದೀಶ್, ಚಾಮನಹಳ್ಳಿ ಮಂಜು, ಸೋಮಶೇಖರ್, ಕುಮಾರ್, ಅಶೋಕ್, ನಿಂಗರಾಜು, ಲೋಕೇಶ್, ಹನುಮಂತು, ಮುರಳಿ, ಭಾನುಪ್ರಕಾಶ್, ಮಂಜುನಾಥ್, ಅಪ್ಪಾಜಿ, ಆನಂದ್ ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

ಮೋದಿ ಸರ್ಕಾರದ 12 ವರ್ಷ: ಕೋಟ್ಯಂತರ ಭಾರತೀಯರ ಬದುಕನ್ನೇ ಬದಲಿಸಿದ 10 ಪ್ರಮುಖ ಯೋಜನೆಗಳು | 12 Years Of Modi Government

4 Mins Read

ಚುನಾವಣಾ ಆಯೋಗ, ಬಿಜೆಪಿ ನಡುವಿನ ಒಳಸಂಚಿನಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: MLC ರಮೇಶ್ ಬಾಬು ಗಂಭೀರ ಆರೋಪ

1 Min Read

ಕಲಬುರ್ಗಿ ಜನತೆಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ಕಲ್ಬುರ್ಗಿ ನಡುವೆ ಸ್ಟಾರ್ ಏರ್ ವಿಮಾನ ಸೇವೆ ಪುನಾರಂಭ

1 Min Read
Recent News

ಮೋದಿ ಸರ್ಕಾರದ 12 ವರ್ಷ: ಕೋಟ್ಯಂತರ ಭಾರತೀಯರ ಬದುಕನ್ನೇ ಬದಲಿಸಿದ 10 ಪ್ರಮುಖ ಯೋಜನೆಗಳು | 12 Years Of Modi Government

ಚುನಾವಣಾ ಆಯೋಗ, ಬಿಜೆಪಿ ನಡುವಿನ ಒಳಸಂಚಿನಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: MLC ರಮೇಶ್ ಬಾಬು ಗಂಭೀರ ಆರೋಪ

ಕಲಬುರ್ಗಿ ಜನತೆಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ಕಲ್ಬುರ್ಗಿ ನಡುವೆ ಸ್ಟಾರ್ ಏರ್ ವಿಮಾನ ಸೇವೆ ಪುನಾರಂಭ

ಬಸ್ ಇದ್ದರೂ ನಿಲ್ಲಲ್ಲ! ಶಾಲಾ ಮಕ್ಕಳು, ಗ್ರಾಮಸ್ಥರ ಪರದಾಟ: ಸಾಗರದ ಉಳ್ಳೂರಲ್ಲಿ KSRTC ಬಸ್ ನಿಲ್ಲಿಸಲು ಒತ್ತಾಯ

State News
KARNATAKA

ಮೋದಿ ಸರ್ಕಾರದ 12 ವರ್ಷ: ಕೋಟ್ಯಂತರ ಭಾರತೀಯರ ಬದುಕನ್ನೇ ಬದಲಿಸಿದ 10 ಪ್ರಮುಖ ಯೋಜನೆಗಳು | 12 Years Of Modi Government

By kannadanewsnow57 KARNATAKA 4 Mins Read

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರದಂದು ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿಯವರೆಗೆ ಸತತವಾಗಿ ಸೇವೆ ಸಲ್ಲಿಸಿದ ಜನಪ್ರತಿನಿಧಿ ಪ್ರಧಾನಿ…

ಚುನಾವಣಾ ಆಯೋಗ, ಬಿಜೆಪಿ ನಡುವಿನ ಒಳಸಂಚಿನಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: MLC ರಮೇಶ್ ಬಾಬು ಗಂಭೀರ ಆರೋಪ

ಕಲಬುರ್ಗಿ ಜನತೆಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ಕಲ್ಬುರ್ಗಿ ನಡುವೆ ಸ್ಟಾರ್ ಏರ್ ವಿಮಾನ ಸೇವೆ ಪುನಾರಂಭ

ಬಸ್ ಇದ್ದರೂ ನಿಲ್ಲಲ್ಲ! ಶಾಲಾ ಮಕ್ಕಳು, ಗ್ರಾಮಸ್ಥರ ಪರದಾಟ: ಸಾಗರದ ಉಳ್ಳೂರಲ್ಲಿ KSRTC ಬಸ್ ನಿಲ್ಲಿಸಲು ಒತ್ತಾಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.