ಕೊಪ್ಪಳ : ಕಾಂಗ್ರೆಸ್ನ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಬೆಳಿಗ್ಗೆ ತಾನೇ ನಿಮಗೆ ಅಕ್ಕಿ ಬ್ಯಾಡ, ಇನ್ನೊಂದು ಬ್ಯಾಡ ಅಂದ್ರ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ರಸ್ತೆ ಬೇಕು ಅಂದ್ರೆ ಅಕ್ಕಿ ಸೇರಿದಂತೆ ಎಲ್ಲವೂ ಬಂದ್ ಆಗತಾವ ಎಂದು ಹೇಳಿಕೆ ನೀಡಿದ್ದರು. ಇದೀಗ ನಾವು ಇಷ್ಟೆಲ್ಲ ಮಾಡಿದ್ದೀವಿ, ಅಕ್ಕಿ ಕೊಡಲ್ಲ ಅಂತ ನಾನು ಹೇಳೇ ಇಲ್ಲ ಎಂದು ತಮ್ಮ ಹೇಳಿಕೆ ಕುರಿತು ಉಲ್ಟಾ ಹೊಡೆದಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಒಬಿಸಿ ಸಲಹಾ ಮಂಡಳಿಗೆ ಸಿಎಂ ಸಿದ್ದರಾಮಯ್ಯ ನೇಮಕ ಮಾಡಿದ ವಿಚಾರವಾಗಿ ಹೈಕಮಾಂಡ್ ನಿರ್ಧಾರವನ್ನು ಬಸವರಾಜ ರಾಯರೆಡ್ಡಿ ಸ್ವಾಗತಿಸಿದರು. ಕೊಪ್ಪಳದಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ ನಿರ್ಧಾರ ನಾನು ಸ್ವಾಗತಿಸುತ್ತೇನೆ ಎಂದರು.
ಇದೆ ವೇಳೆ ರಸ್ತೆ ಬೇಕೆಂದ್ರೆ ಗ್ಯಾರಂಟಿ ಬಂದ್ ಆಗುತ್ತೆ ಎಂಬ ತಮ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಹಾಗೆ ಹೇಳಿಲ್ಲ. ನಾವು ಇಷ್ಟೆಲ್ಲಾ ಮಾಡಿದ್ದೇವೆ ಅಕ್ಕಿ ಕೊಡಲ್ಲ ಅಂತ ನಾನು ಹೇಳಿಲ್ಲ.ಈ ವರ್ಷ ರಸ್ತೆ ಕಾಮಗಾರಿಗೆ 100 ಕೋಟಿ ಅನುದಾನ ಕೊಟ್ಟಿದ್ದೀವಿ. ಇನ್ನು ಹೆಚ್ಚು ಗ್ಯಾರಂಟಿಗಳನ್ನು ಕೊಡ್ತೀವಿ ಎಂದು ಬಸವರಾಜ ರಾಯರೆಡ್ಡಿ ಹೇಳಿದರು ನನ್ನ ಹಣಕಾಸು ಮಂತ್ರಿ ಮಾಡಿದರೆ ಇನ್ನು ಹೆಚ್ಚು ಗ್ಯಾರೆಂಟಿ ಕೊಡ್ತೀನಿ ಅಂತ ಪರೋಕ್ಷವಾಗಿ ಮುಖ್ಯಮಂತ್ರಿ ಆಗೋ ಕನಸು ಬಿಚ್ಚಿಟ್ಟರು.
ಇನ್ನು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಪ್ರಕಾರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲ್ಲ.ನಾವೆಲ್ಲ ಅವರನ್ನು 5 ವರ್ಷಕ್ಕೆ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ಅದನ್ನು ಪಕ್ಷವು ಒಪ್ಪಿಕೊಂಡಿರುತ್ತದೆ ಹೀಗಾಗಿ ಬದಲಾವಣೆ ಪ್ರಶ್ನೆಯೇ ಇಲ್ಲ ಮುಖ್ಯಮಂತ್ರಿಯನ್ನು ಸಡನ್ ಆಗಿ ಬದಲಾವಣೆ ಮಾಡಲು ಆಗಲ್ಲ. ಸಿಎಂ ಬದಲಾವಣೆಗಾಗಿ ಶಾಸಕ ಪಕ್ಷದ ಸಭೆ ಕರೆಯಬೇಕು ಎಂದು ಅವರು ತಿಳಿಸಿದರು.