ಬೆಂಗಳೂರು : ಹಾಸನದಲ್ಲಿ ಕಳೆದ 40 ದಿನಗಳಲ್ಲಿ ಇವತ್ತಿನವರೆಗೆ ಒಟ್ಟು 22 ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ ಯಾವ ಕಾರಣಕ್ಕಾಗಿ 22 ಜನ ಸಾವನ್ನಪ್ಪಿದ್ದಾರೆ? ಇದಕ್ಕೆ ಏನು ಕಾರಣ ಜೀವನ ಶೈಲಿಯ ಅಥವಾ ಆಹಾರವಾ ಏನು ಕಾರಣ ಎಂಬುವುದರ ಕುರಿತು ತಿಳಿಯಲು ಆರೋಗ್ಯ ಇಲಾಖೆಯು ಇದೀಗ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಜಯದೇವ ಸಂಸ್ಥೆಯ ಒಟ್ಟು 10 ಜನರ ಟೆಕ್ನಿಕಲ್ ಕಮಿಟಿ ರಚನೆ ಮಾಡಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಹೌದು ಹಾಸನ ಜಿಲ್ಲೆಯಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಟೆಕ್ನಿಕಲ್ ಕಮಿಟಿ ರಚನೆ ಮಾಡಲಾಗಿದೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹರ್ಷ ಗುಪ್ತ ನೇತ್ರತ್ವದಲ್ಲಿ ಕಮಿಟಿ ರಚನೆಯಾಗಿದ್ದು ಹತ್ತು ಜನರ ತಜ್ಞರ ತಂಡ ರಚನೆ ಮಾಡುವಂತೆ ಸಂಜೆ ಒಳಗೆ ಕಮಿಟಿ ರಚಿಸಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು ಹಾಗೂ ಜಯದೇವ ಸಂಸ್ಥೆಯ ತಜ್ಞರು ಸೇರಿ 10 ಜನರ ತಂಡ ರಚನೆ ಮಾಡಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.