ಬೆಂಗಳೂರು : ದತ್ತಾತ್ರೇಯ ಹೊಸ ಬಾಳೆಯ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡಿರುವ ವಿಚಾರವಾಗಿ ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನಾಯಕರು ಆಕಾಶ ಉದುರಿ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಮನಸ್ಮೃತಿ ಹೇರಲು ಸಿದ್ಧತೆಯೆಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಅವನ್ಯಾವನು ಮನು ನನಗೆ ಗೊತ್ತಿಲ್ಲ. ಆ ಮನಸ್ಮೃತಿಯನ್ನು ಓದಿಲ್ಲ ನನಗೆ RSS ಮಾತ್ರ ಗೊತ್ತು ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಬೇಳೆ ಬೇಯಿಸಿಕೊಳ್ಳೋಕೆ ಮನು ಅಂತ ಹೇಳುತ್ತಿದ್ದಾರೆ. ಖಾಲಿ ಸಂವಿಧಾನ ಇಟ್ಟುಕೊಂಡಿದ್ದಾರಾ? ಅಥವಾ ಅದನ್ನು ಓದಿದ್ದಾರಾ? ಜಾತ್ಯತೀತ ಪದ ತೆಗೆಯಬೇಕು ಬೇಕು ಎಂದು ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದಾರೆ. ಅಂಬೇಡ್ಕರ್ ಬರೆದ ಪುಸ್ತಕದಲ್ಲಿ ಜಾತ್ಯಾತೀತ ಮತ್ತು ಸಮಾಜವಾದ ಎಲ್ಲಿದೆ? ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆಯವರು ಮೂಲ ಸಂವಿಧಾನದಲ್ಲಿ ಜಾತ್ಯಾತೀತ ಮತ್ತು ಸಮಾಜವಾದ ಎಲ್ಲಿದೆ ಅಂತ ತೋರಿಸಲಿ ಎಂದು ಸವಾಲು ಹಾಕಿದರು.
ಜಾತ್ಯತೀತ ಪದ ಸಂವಿಧಾನದ ಯಾವ ಪೇಜ್ ನಲ್ಲಿದೆ ಹುಡುಕಿ ಕೊಡಿ. ನಾನು ಒಬ್ಬ ಒಕ್ಕಲಿಗ ಹಿಂದೂ ಧರ್ಮದವನು ಜಾತಿ ಸಮೀಕ್ಷೆ ನಡೆಸಿ ಎನ್ನುವ ಕಾಂಗ್ರೆಸ್ನವರು ನೀವೇ ಕಳ್ಳರು. ಜಾತಿ ಸಮೀಕ್ಷೆ ಬೇಕು ಎನ್ನುವವರು ನೀವೇ, ಜಾತ್ಯತೀತಪದ ಸಂವಿಧಾನದಲ್ಲಿ ಸೇರಿಸಿದವರು ನೀವೇ. ಇಂದಿರಾಗಾಂಧಿ ತಿದ್ದುಪಡಿ ಮಾಡಿ ಈ ಪದಗಳನ್ನು ಸೇರಿಸಿದ್ದಾರೆ. ಅಂಬೇಡ್ಕರ್ ಮೂಲ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ನವರು 68 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದಾರೆ. ಬಿಜೆಪಿಯವರು ಕೇವಲ 14 ಬಾರಿ ಸಂವಿದಾನ ತಿದ್ದುಪಡಿ ಮಾಡಿದೆ ಎಂದು ಆರ್ ಅಶೋಕ್ ಹೇಳಿಕೆ ನೀಡಿದರು.