ಶಿವಮೊಗ್ಗ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಮತ್ತೊಂದು ಮರ್ಯಾದ ಹತ್ಯೆ ಪ್ರಕರಣ ಎನ್ನುವಂತೆ ಘಟನೆಯೊಂದು ನಡೆದಿದೆ. ತಂದೆಯಿಂದಲೇ ಮಗಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಲು ಯತ್ನಿಸಿದಂತ ಯತ್ನ ವಿಫಲವಾದ ನಂತ್ರ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಬಳಿಯ ಮಳವಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಪುತ್ರಿ ಗರ್ಭವತಿಯಾಗಿರುವಂತ ವಿಚಾರ ತಿಳಿದಂತ ತಂದೆ ಧರ್ಮಪ್ಪ ನಾಯಕ್ ಸಿಟ್ಟುಗೊಂಡಿದ್ದರು. ಹೀಗಾಗಿ ಮರ್ಯಾದೆಗೆ ಅಂಜಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಬಾ ಎಂಬುದಾಗಿ ತಂದೆ-ತಾಯಿ ಜೊತೆಗೂಡಿ ಸೊರಬದ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರಿಗೆ ಕರೆದುಕೊಂಡು ಬಂದಿದ್ದಾರೆ.
ಕಣ್ಣೂರಿನ ಕಾಡಿನಲ್ಲಿ ಧರ್ಮಪ್ಪ ನಾಯಕ್ ತನ್ನ ಪುತ್ರಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ನನ್ನ ಮರ್ಯಾದೆ ಹಾಳು ಮಾಡಿದೆ ಎಂಬುದಾಗಿ ಉಸಿರುಗಟ್ಟಿಸಿ ಸಾಯಿಸೋದಕ್ಕೆ ಯತ್ನಿಸುತ್ತಾರೆ. ಮಗಳನ್ನು ಸಾಯಿಸಬೇಡಿ ಅಂತ ಆಕೆಯ ಹೆಂಡತಿ ಕಾಲಿಗೆ ಬಿದ್ದು ಕೇಳಿಕೊಂಡರು ಧರ್ಮಪ್ಪ ನಾಯಕ್ ಬಿಟ್ಟಿಲ್ಲ.
ಮರ್ಯಾದೆ ಹಾಳು ಮಾಡಿದಂತ ಪುತ್ರಿಯನ್ನು ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಸಾಯಿಸೋದಕ್ಕೆ ಯತ್ನಿಸಿದಂತ ಸಂದರ್ಭದಲ್ಲಿ ಯುವತಿ ಪ್ರಜ್ಞೆ ತಪ್ಪಿದ್ದಾಳೆ. ಆಕೆ ಸಾವನ್ನಪ್ಪಿದ್ದಾಳೆ ಎಂಬುದಾಗಿ ಭಾವಿಸಿದಂತ ತಂದೆ ಧರ್ಮಪ್ಪ ನಾಯಕ್ ಹಾಗೂ ಅವರ ಪತ್ನಿ ಸ್ಥಳದಿಂದ ತೆರಳುತ್ತಾರೆ. ಆದರೇ ಪ್ರಜ್ಞೆ ಬಂದಂತ ಯುವತಿ ದಾರಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾಗ ದಾರಿ ಹೋಕರೊಬ್ಬರು ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಸೊರಬ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗದೆ. ಆ ನಂತ್ರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿದೆ.
ಈ ಸಂಬಂಧ ಯುವತಿ ನೀಡಿದಂತ ಹೇಳಿಕೆಯನ್ನು ಆಧರಿಸಿ, ಧರ್ಮಪ್ಪ ನಾಯಕ್ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಮರ್ಯಾದ ಹತ್ಯೆಗೆ ಯತ್ನಿಸಿದಂತ ಧರ್ಮಪ್ಪ ನಾಯಕ್ ಬಂಧಿಸಿರುವಂತ ಸೊರಬ ಠಾಣೆಯ ಪೊಲೀಸರು ಸ್ಥಳ ಮಹಜರು ನಡೆಸಿ, ತನಿಖೆಯನ್ನು ಮುಂದುವರೆಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ., ಸಂಪಾದಕರು
ಸರ್ಕಾರಿ ಶಾಲೆಗಳು ವ್ಯಕ್ತಿತ್ವ ರೂಪಿಸುತ್ತವೆ : ಸೊರಬ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ನವೀನ್ ಅಭಿಪ್ರಾಯ
ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: ಹಲವರು ಸಾವು, ಪ್ರವಾಹದಲ್ಲಿ ಕೊಚ್ಚಿಹೋದ ಕುಟುಂಬ
BIG NEWS: ಬೆಂಗಳೂರಲ್ಲಿ ಆಟೋ ಚಾಲಕರ ‘ದುಬಾರಿ ದರ ವಸೂಲಿ’ ವಿರುದ್ಧ ಕ್ರಮಕ್ಕೆ ‘ಸಚಿವ ರಾಮಲಿಂಗಾರೆಡ್ಡಿ’ ಆದೇಶ
BREAKING : ಸೆ.22ಕ್ಕೆ ಮೈಸೂರು ದಸರಾಗೆ ಚಾಲನೆ, ಅ.2 ರಂದು ಜಂಬೂ ಸವಾರಿ : ಸಿಎಂ ಸಿದ್ದರಾಮಯ್ಯ ಹೇಳಿಕೆ