ಚಾಮರಾಜನಗರ : ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಷ ಪ್ರಾಷನದಿಂದಲೇ 5 ಹುಲಿಗಳು ಸಾವನ್ನಪ್ಪಿವೆ ಎಂದು ಮಲೆ ಮಹದೇಶ್ವರ ವನ್ಯಧಾಮದಲ್ಲಿ ಸಿಸಿಎಫ್ ಹಿರಲಾಲ್ ಹೇಳಿಕೆ ನೀಡಿದ್ದಾರೆ.
ಹೌದು ಹಸುವಿಗೆ ಯಾರು ವಿಷಪ್ರಾಶನ ಮಾಡಿದ್ದಾರೆ. ವಿಷ ಪ್ರಾಶನ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಯಾರೇ ಮಾಡಿದರು ಸ್ಥಳೀಯರು ಮಾಹಿತಿ ನೀಡಿ. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಆಗುತ್ತದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಇರಲಾಲ್ ಹೇಳಿಕೆ ನೀಡಿದ್ದಾರೆ. ಹುಲಿಗಳ ಪೋಸ್ಟ್ ಮಾಟಂ ಎಲ್ಲ ಮಾಡಿದ್ದೇವೆ ಕೆಲವು ಸ್ಯಾಂಪಲ್ಸ್ ಗಳನ್ನು ಪ್ರೊಸೆಸ್ ಪ್ರಕಾರ ಸಂಗ್ರಹ ಮಾಡಲಾಗಿದೆ. ಉಳಿದ ವರದಿಯನ್ನು ಬಂದ ನಂತರ ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಐದು ಹುಲಿಗಳ ಮರಣೋತ್ತರ ಪರೀಕ್ಷೆ ಇದೀಗ ಮುಕ್ತಾಯ ಆಗಿದ್ದು ನಿನ್ನೆ ತಾಯಿ ಹುಲಿ ಮರಣೋತ್ತರ ಪರೀಕ್ಷೆ ಆಗಿತ್ತು ಇಂದು ನಾಲ್ಕು ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ಆಗಿದ್ದು ಹುಲಿಗಳ ದೇಹದ ಪ್ರಮುಖ ಅಂಗಾಂಗ ಸಂಗ್ರಹ ಮಾಡಿಕೊಂಡು ಮೂರು ರೀತಿಯಲ್ಲಿ ವೈದ್ಯರು ಮಾದರಿ ಸಂಗ್ರಹಿಸಿದ್ದರು. ಪ್ರತ್ಯೇಕವಾಗಿ ಮೂರು ಲ್ಯಾಬ್ ಗಳಿಗೆ ಸ್ಯಾಂಪಲ್ ರವಾನಿಸಲಾಗಿತ್ತು ಎಪಿಸಿಸಿಎಫ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಪ್ರಾಣಿ ಶಾಸ್ತ್ರಜ್ಞರು ಪಶು ವೈದ್ಯರಿಂದ ಈ ಒಂದು ಪರೀಕ್ಷೆ ನಡೆಸಲಾಗಿತ್ತು.