ಉತ್ತರಕನ್ನಡ : ಹೆಸ್ಕಾಂ ಸಿಬ್ಬಂದಿಯ ನಿರ್ಲಕ್ಷಕ್ಕೆ ವಿದ್ಯುತ್ ಪ್ರವಹಿಸಿ ಕಾರ್ಮಿಕ ಒಬ್ಬ ಸಾವನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅಣಲೇಸರ ಗ್ರಾಮದಲ್ಲಿ ನಡೆದಿದೆ.ಮೃತ ಕಾರ್ಮಿಕನನ್ನು ಆನಂದ್ ಸಿದ್ದಿ (25) ಎಂದು ತಿಳಿದುಬಂದಿದೆ.
ಹೆಸ್ಕಾಮ ಅಧಿಕಾರಿ ಮತ್ತು ಲೈನ್ ಮ್ಯಾನ್ ಎಡವಟ್ಟಿಗೆ ಅಮಾಯಕ ಕಾರ್ಮಿಕ ಬಲಿಯಾಗಿದ್ದಾನೆ. ಮಳೆಯ ನಡುವೆ ಕಂಬ ಹತ್ತಿದ್ದಾಗ, ವಿದ್ಯುತ್ ಪ್ರವಹಸಿ ಆನಂದ್ ಸಿದ್ದಿ ಸಾವನ್ನಪ್ಪಿದ್ದಾನೆ. ಮಳೆ ನಡುವೆ ಅಧಿಕಾರಿ ನಾಗರಾಜ್ ವಿದ್ಯುತ್ ಕಂಬವನ್ನು ಹತ್ತಿಸಿದ್ದಾನೆ. ವಿದ್ಯುತ್ ಕಂಬ ಹತ್ತಿದಾಗ ಕರೆಂಟ್ ಶಾಕ್ ನಿಂದ ಈ ಒಂದು ದುರ್ಘಟನೆ ನಡೆದಿದೆ.