ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಕೊಲೆಯಾಗಿದ್ದು ತನ್ನ ಅತ್ತಿಗೆ ಜೊತೆಗೆ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧದ ಬಗ್ಗೆ ಹೇಳಿಕೊಂಡು ಓಡಾಡುತ್ತಿದ್ದವನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಮುನಿರೆಡ್ಡಿ ಲೇಔಟ್ ನ ಮನೆಯೊಂದರಲ್ಲಿ ಶೈಲೇಶ್ ಯಾದವ್ ಎನ್ನುವ ವ್ಯಕ್ತಿ ಭೀಕರವಾಗಿ ಕೊಲೆಯಾಗಿದ್ದಾನೆ.
ಉತ್ತರ ಪ್ರದೇಶ ಮೂಲದ ಶೈಲಿಶ್ ಯಾದವ್ ಗೆ ಹಿಗ್ಗಾ ಮುಗ್ಗಾ ಥಳಿಸಿ ಕೊಲೆ ಮಾಡಿದ್ದಾರೆ. ಬಿರೇಂದ್ರ ಯಾದವ್, ಸತೀಶ್ ಹಾಗು ಅರುಣ್ ಯಾದವ್ ಎನ್ನುವರು ಶೈಲೇಶ್ ಯಾದವನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಆರೋಪಿ ಬೀರೇಂದ್ರ ಯಾದವ್ ತನ್ನ ಅತ್ತಿಗೆ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಆತನ ಬಗ್ಗೆ ಸಿಕ್ಕ ಸಿಕ್ಕವರ ಬಳಿ ಶೈಲೇಶ್ ಯಾದವ್ ಹೇಳುತ್ತಿದ್ದ.
ಹಾಗಾಗಿ ಶೈಲೇಶ್ ಯಾದವ್ ನನ್ನು ಸತೀಶ್ ಮನೆಗೆ ಕರೆಸಿಕೊಂಡು ಮೂವರು ಥಳಿಸಿದ್ದಾರೆ. ಜೂನ್ 18 ರಂದು ಹಲ್ಲೆ ನಡೆಸಿ ಶೈಲೇಶ್ ಯಾದವನನ್ನು ಮೂವರು ಕೊಲೆ ಮಾಡಿದ್ದಾರೆ. ಎರಡು ದಿನಗಳ ಕಾಲ ಶೈಲೇಶ್ ಶವವನ್ನು ಸತೀಶ್ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಎರಡು ದಿನದ ನಂತರ ಮರ್ತುಪಟ್ಟಿದ್ದಾನೆ ಎಂದು ಬಂಡೆಪಾಳ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅನುಮಾನಾಸ್ಪದ ಸಾವು ಎಂದು ಪೊಲೀಸರು ಕೇಸ್ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.
ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶೈಲೇಶ್ ಯಾದವ್ ಕೊಲೆಯಾಗಿದ್ದು ದೃಢವಾಗಿದೆ. ಕೊಲೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಮತ್ತೊಬ್ಬ ಆರೋಪಿಗಾಗಿ ಬಂಡೆಪಾಳ್ಯ ಪೊಲೀಸ್ ಸರು ಶೋಧ ಕಾರ್ಯ ನಡೆಸಿದ್ದಾರೆ. ಹತ್ಯೆಯಾದ ಶೈಲೇಶ್ ಮತ್ತು ಆರೋಪಿಗಳು ಉತ್ತರ ಪ್ರದೇಶದ ಮೂಲದವರು ಎಂದು ತಿಳಿದು ಬಂದಿದೆ.