ಬೆಂಗಳೂರು : ವಸತಿ ಯೋಜನೆಯಡಿಯಲ್ಲಿ ಮನೆ ಹಂಚಿಕೆ ವೇಳೆ ಲಂಚ ಪಡೆದಿರುವ ಬಿ.ಆರ್.ಪಾಟೀಲ್ ಆಡಿಯೋ ವೈರಲ್ ವಿಚಾರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಜನರಲ್ ಆಗಿ ಗ್ರಾಮಪಂಚಾಯ್ತಿಗೆ ಕಳಿಸ್ತೇವೆ ಮುನ್ಸಿಪಾಲಿಟಿಗೆ ಬಂದ್ರೆ ಮನೆ ಕೊಡ್ತಾರೆ ಇಷ್ಟು ಮಾತ್ರ ನನಗೆ ಗೊತ್ತಿರೋದು.ಬಿ.ಆರ್.ಪಾಟೀಲರು ಸೋಶಿಯಲ್ ಮೂವ್ ಮೆಂಟ್ ನಿಂದ ಬಂದವರು ಹಾಗಾಗಿ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದು ತಿಳಿಸಿದರು.
ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆಗಳನ್ನ ಆಯ್ಕೆ ಮಾಡೋದು ಪಂಚಾಯ್ತಿಗೆ ಇರುತ್ತೆ ಆದರೆ ವಕ್ಯಾನ್ಸಲ್ ಮಾಡೋದು ನಮಗಿರುತ್ತೆ. ಶಾಸಕರು ವಸತಿ ಹಂಚಿಕೆ ಅಧ್ಯಕ್ಷರಿರ್ತಾರೆ. ಗ್ರಾಮಪಂಚಾಯ್ತಿಯವರೇ ಮನೆ ಅಲಾಟ್ ಮಾಡೋದು. ಭ್ರಷ್ಟಾಚಾರದ ಬಗ್ಗೆ ನಾವು ಹೇಳ್ತೇವೆ. ನಾಗೇಂದ್ರ ಮೇಲೂ ಆರೋಪವಿತ್ತು. ಅವರು ಏನು ಡಿಸೈಡ್ ಮಾಡಿದ್ರು ಗೊತ್ತಲ್ಲ. ಜಮೀರ್ ಮೇಲೂ ಆರೋಪ ಬಂದಿದೆ.ಆದರೆ ಇದರಲ್ಲಿ ಜಮೀರ್ ಪಾತ್ರ ಏನು? ಪಂಚಾಯ್ತಿಯಲ್ಲಿ ನಡೆಯೋದು ಇವರೇಗೆ ಜವಾಬ್ದಾರಿ ಆಗ್ತಾರೆ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರ ಅಸಮಾಧಾನ ಹಾಗು ಸರ್ಕಾರದ ನಡೆಗೆ ರಾಜುಕಾಗೆ ಬೇಸರ ವಿಚಾರವಾಗಿ, ರಾಜು ಕಾಗೆಯವರು ಹಿರಿಯರು ಅವರ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ. ನೀವು ಅವರನ್ನೇ ಕೇಳಬೇಕು. ಇಲಾಖೆ ಬಗ್ಗೆ ಕೇಳಿದ್ರೆ ಹೇಳಬಹುದು. ಶಾಸಕಾಂಗ ಪಕ್ಷದ ಸಭೆ ಕರೆಯುತ್ತೇವೆ. ಅಲ್ಲಿ ಅವರು ಹೇಳಬಹುದು. ಸಿಎಂ ಭೇಟಿಯಾಗಿ ತಮ್ಮ ಸಮಸ್ಯೆ ಬಗ್ಗೆ ಹೇಳಬಹುದು.
ಅನುದಾನ ಎಲ್ಲರಿಗೂ ಬೇಕು. ನಮ್ಮ ಪಕ್ಷದಲ್ಲಿ ಹೇಳಿಕೆ ನೀಡಲು ಅವಕಾಶ ಇದೆ. ಬಿಜೆಪಿಯಲ್ಲಿ ಮಾತನಾಡಲು ಅವಕಾಶ ಇಲ್ಲ. ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು. ಇವರಿಗೆ ಭ್ರಷ್ಟಾಚಾರದ ಆರೋಪ ಮಾಡುವ ನೈತಿಕತೆ ಇಲ್ಲ. ಮನೆಗಳು ಗ್ರಾಮ ಪಂಚಾಯತ್ ಗೆ ಹೋಗಬೇಕು. 1 ಸಾವಿರ ಮನೆ ನೀಡಲು ಸಾಧ್ಯವಿಲ್ಲ.ಈ ಬಗ್ಗೆ ಬಿ. ಆರ್. ಪಾಟೀಲರನ್ನ ಕೇಳಬೇಕು ಬಿ. ಆರ್. ಪಾಟೀಲ್ ರ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದರು.