ಹಾಸನ: ಕರ್ನಾಟಕದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವದ ಲಕ್ಷಣಗಳು ಗೋಚರಿಸಲಿದ್ದಾವೆ. ಆದರೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದಾಗಿ ಕೋಡಿಮಠ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಇಂದು ಹಾಸನ ಜಿಲ್ಲೆಯ ಅರಸೀಕೆರೆಯ ಹಾರನಹಳ್ಳಿ ಕೋಡಿಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಭಾರತಕ್ಕೆ ನಿರೀಕ್ಷೆಗೂ ಮೀರಿದಂತ ದುಃಖ ಬರಲಿದೆ ಎಂದರು.
ಇನ್ನೂ ಮೇಘ ಸ್ಪೋಟ, ಯುದ್ಧದ ಜೊತೆಗೆ ಅರಸನಾಲಯಕ್ಕೆ ಕಾರ್ಮೋಡವು ಕಾದಿದೆ. ಇದು ರಾಜ್ಯ, ದೇಶಕ್ಕೂ ಕಾಲಿಡುವುದಾಗಿ ಆಘಾತಕಾರಿ ಭವಿಷ್ಯ ನುಡಿದರು.
ಈ ಹಿಂದೆ ಎರಡು ಮೂರು ಪ್ರಧಾನ ಮಂತ್ರಿಗಳ ಕೊಲೆ ಆಗ್ತಾರೆ ಎಂಬುದಾಗಿ ಭವಿಷ್ಯ ನುಡಿದಿದ್ದೆನು. ಅದು ಈಗ ಆಗಿದೆ. ಸಾಗರದಲ್ಲಿ ಒಂದು ಜಲಸ್ಪೋಟ ಎದ್ದಿದೆ. ಅದು ಕೂಡ ಆಗಲಿದೆ ಎಂದು ತಿಳಿಸಿದರು.
ವಿಶ್ವದಲ್ಲಿ ನಡೆಯುತ್ತಿರುವಂತ ಯುದ್ಧ ನಿಲ್ಲೋದು ಸಂವತ್ಸರ ಪರ್ವದಲ್ಲಿ ಕಷ್ಟವಾಗಿದೆ. ಈ ದ್ವೇಷ, ಅಸೂಯೆಗಳ ಮಧ್ಯದಲ್ಲಿ ಒಂದಿಬ್ಬರು ಬಲಿಯಾಗುತ್ತಾರೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದರು.
ಕೊರೋನಾ ವಿಶ್ವದಲ್ಲಿ ಮತ್ತೊಂದು ರೂಪ ತಾಳಲಿದೆ. ಅಕಾಲದಲ್ಲಿ ಮಳೆ ಬಂದರೇ, ಸಕಾಲದಲ್ಲಿ ತೊಂದರೆ ಆಗಲಿದೆ ಎಂದಂತ ಅವರು, ಈ ಬಾರಿ ಮಳೆ ಚೆನ್ನಾಗಿ ಆಗಲಿದೆ. ಆದರೇ ಜಲಸ್ಪೋಟದ ಜೊತೆಗೆ ವಾಯು, ಭೂ ಪ್ರಳಯವಾಗುತ್ತದೆ ಎಂಬುದಾಗಿ ಭವಿಷ್ಯ ನುಡಿದರು.
BREAKING : ಬೆಂಗಳೂರಲ್ಲಿ ಕೃಷಿ ಹೊಂಡದಲ್ಲಿ ತಾಯಿ-ಮಗಳ ಮೃತದೇಹ ಪತ್ತೆ : ಪತಿಯೇ ಹತ್ಯೆಗೈದಿರುವ ಶಂಕೆ!
‘ಪದೇ ಪದೇ ನಿಯಮ ಉಲ್ಲಂಘನೆ’ ಮಾಡಿದರೆ ಏರ್ ಇಂಡಿಯಾ ಪರವಾನಗಿ ರದ್ದು: DGCA ಎಚ್ಚರಿಕೆ | Air India Flight