ಚಾಮರಾಜನಗರ : ನಿನ್ನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ಹೂತು ಹಾಕಿದ್ದ ಶವದ ಮುಂಗೈ ಹೊರಬಂದ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಳೆ ಹಂಪಾಪುರ ಬಳಿ ಹೂತಿದ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಬ್ಬರು ಮಕ್ಕಳ ತಾಯಿಯನ್ನು ಪ್ರಿಯಕರ ಮಾದೇಶ ಕೊಂದುಹಾಕಿ ಹೂತು ಹಾಕಿದ್ದ ಎನ್ನಲಾಗಿದೆ.
ಹೌದು ಪ್ರಿಯಕರ ಮಾದೇಶ ಮಹಿಳೆಯನ್ನು ಕೊಂದು 2 ಅಡಿ ಮಣ್ಣಲ್ಲಿ ಹೂತಿದ್ದ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೆ ಹಂಪಾಪುರ ಗ್ರಾಮದಲ್ಲಿ ಮೊಳೆ ನಿವಾಸಿ ಸೋನಾಕ್ಷಿ ತಲೆಗೆ ಹೊಡೆದು ಪ್ರಿಯಕರ ಮಾದೇಶ ಕೊಂದಿದ್ದ. ಪ್ರೇಯಸಿ ಸೋನಾಕ್ಷಿ ಕೊಂದು ಪ್ರಿಯಕರ ಮಾದೇಶ ಶವವನ್ನು 2 ಅಡಿ ಗುಂಡಿ ತೋಡಿ ಹೂತಿದ್ದ ಎನ್ನಲಾದೆ. ಎರಡು ಮಕ್ಕಳನ್ನು ಬಿಟ್ಟು ಸೋನಾಕ್ಷಿ ಮಾದೇಶನ ಜೊತೆಗೆ ಬಂದಿದ್ದಳು.
ಕೆಲ ದಿನಗಳ ಕಾಲ ಮಾದೇಶನ ಜೊತೆಗೆ ನಂತರ ಮಾದೇಶನಿಗೆ ಕೈಕೊಟ್ಟು ಮತ್ತೊಬ್ಬನ ಜೊತೆಗೆ ಓಡಿಹೋಗಿದ್ದಳು. ಬಳಿಕ ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಸೋನಾಕ್ಷಿ ವಾಸವಿದ್ದಳು. ಈ ಬಗ್ಗೆ ಸೋನಾಕ್ಷಿ ಕುಟುಂಬಸ್ಥರಿಗೆ ಮಾದೇಶ ಮಾಹಿತಿ ನೀಡಿದ್ದ. ಇದೇ ವಿಚಾರವಾಗಿ ಮಾದೇಶ ಮತ್ತು ಸೋನಾಕ್ಷಿಯ ನಡುವೆ ಕಿರಿಕ್ ಆಗಿತ್ತು. ನಾಲ್ಕು ದಿನದ ಹಿಂದೆ ಸೋನಾಕ್ಷಿಯನ್ನು ಮಾದೇಶ ಮನೆಗೆ ಕರೆಸಿಕೊಂಡಿದ್ದ. ಮಾತುಕತೆಯ ವೇಳೆ ಪರಸ್ಪರ ವಾಗ್ದ ವಾಗ್ವಾದವಾಗಿ ಸೋನಾಕ್ಷಿ ಮೇಲೆ ಹಲ್ಲೆ ಮಾಡಿದ್ದಾನೆ.
ಕೋಪದಲ್ಲಿ ಮಾದೇಶ ಸೋನಾಕ್ಷಿ ತಲೆಗೆ ಹೊಡೆದಿದ್ದಾನೆ. ಮಾದೇಶ ಹೊಡೆದ ಏಟಿಗೆ ಸೋನಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸುವರ್ಣಾವತಿ ನದಿ ದಡಕ್ಕೆ ಮಾದೇಶ ಸೋನಾಕ್ಷಿಯ ಮೃತ ದೇಹ ಸಾಗಿಸಿ ಅಲ್ಲಿಯೇ ಹೂತು ಹಾಕಿದ್ದಾನೆ. ಬಳಿಕ ನಾಯಿ ಕೆದಕುತ್ತಿದ್ದನ್ನು ಕಂಡು ಅನುಮಾನದಿಂದ ಪೊಲೀಸರಿಗೆ ದನಗಾಹಿಯೊಬ್ಬ ಮಾಹಿತಿ ನೀಡಿದ್ದಾನೆ. ನಾಯಿ ಕೆದಕುತ್ತಿದ್ದ ಸ್ಥಳದಲ್ಲೇ ಮಣ್ಣಿನ ದೀಪ ಮತ್ತು ನೀರಿನ ಬಾಟಲಿ ಪತ್ತೆಯಾಗಿದೆ. ಕೊಳ್ಳೇಗಾಲ ಟೌನ್ ಠಾಣೆ ಪೋಲಿಸರಿಗೆ ದನಗಾಹಿ ಮಾಹಿತಿ ನೀಡಿದ್ದಾನೆ. ಸೋನಾಕ್ಷಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮಾದೇಶನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಮಾದೇಶ ಎಲ್ಲ ಮಾಹಿತಿಯನ್ನು ನೀಡಿದ್ದಾನೆ. ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.