ಮಂಡ್ಯ : ಮದ್ದೂರು ನಗರದ ಚನ್ನೆಗೌಡನದೊಡ್ಡಿಯಲ್ಲಿ ಮೂವರು ಮುಸ್ಲಿಂ ಯುವಕರು ರೈಲ್ವೆ ಗೇಟ್ ಮೆನ್ ಗೆ ಚಾಕು ಇರಿದಿರುವ ಘಟನೆ ಬುಧವಾರ ಸಂಜೆ ಜರುಗಿದೆ.
ಕುಮಾರ್ (36) ಗಾಯಗೊಂಡ ನೌಕರ ನಾಗಿದ್ದು, ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ರಾಜ್ಯ ರಾಣಿ (20659) ರೈಲಿನಲ್ಲಿ ನಾಲ್ವರು ಮುಸ್ಲಿಂ ಯುವಕರು ಪ್ರಯಾಣಿಸುವ ವೇಳೆ ಪ್ರಯಾಣಿಕರ ನಡುವೆ ಜಗಳ ಉಂಟಾಗಿದೆ. ಇದೇ ವೇಳೆ ಮುಸ್ಲಿಂ ಯುವಕರು ಚೈನ್ ಎಳೆದು ರೈಲಿನಿಂದ ಇಳಿದು ಪರಾರಿಯಾಗುವ ವೇಳೆ ರೈಲ್ವೆ ಗೆಟ್ ಮೆನ್ ಕುಮಾರ್ ಯುವಕರನ್ನು ಪ್ರಶ್ನೆ ಮಾಡಲು ಹೋದಾಗ ಏಕಾಏಕಿ ಕುಮಾರ್ ಅವರ ಮೇಲೆ ಚಾಕಗಳಿಂದ ನಾಲ್ಕೈದು ಕಡೆಗೆ ಹಲ್ಲೆ ಮಾಡಿದ್ದಾರೆ.
ತಕ್ಷಣವೇ ಸ್ಥಳೀಯರು ಆರೋಪಿಗಳಾದ ಶೋಯಿಬ್, ವಾಸೀಂ, ಸೌಬಾನ್ ಕರೋಶಿ ಹಿಡಿದು ಹಲ್ಲೆ ನಡೆಸಿ ಪೋಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಮಾಧ್ಯಮ ಲೋಕದ ದಿಗ್ಗಜ, CNN ಸಂಸ್ಥಾಪಕ ಟೆಡ್ ಟರ್ನರ್ ಇನ್ನಿಲ್ಲ | Ted Turner No More
ತಮಿಳುನಾಡಲ್ಲಿ ಟಿವಿಕೆ ಜತೆ ಕೈಜೋಡಿಸಿದ ಕಾಂಗ್ರೆಸ್ ವಿರುದ್ಧ ಡಿಎಂಕೆ ಆಕ್ರೋಶ, ‘ದ್ರೋಹ’ ಎಂದು ಆರೋಪ








