ನವದೆಹಲಿ : ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಆಡಿಯೋ ವಿಚಾರವಾಗಿ, ಕಾಂಗ್ರೆಸ್, ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಕೆಟ್ಟದಾಗಿ ಮಾಡುತ್ತಿದೆ. ಬಿಜೆಪಿ ಮುಸ್ಲಿಂ ಧರ್ಮಕ್ಕೆ ವಿರೋಧವಿಲ್ಲ ಧರ್ಮ ಬಿಡಿ ಅಂತ ಹೇಳಿಲ್ಲ ಎಂದು ನವದೆಹಲಿಯಲ್ಲಿ ಬಿಜೆಪಿಯ ಸಂಸದ ರಮೇಶ್ ಜಿಗಜಣಗಿ ಹೇಳಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಮುಸ್ಲಿಂ ಧರ್ಮಕ್ಕೆ ವಿರೋಧವಿಲ್ಲ ಧರ್ಮ ಬಿಡಿ ಅಂತಾನು ಹೇಳಿಲ್ಲ. ಕಾಂಗ್ರೆಸ್ ನಾಯಕರು ಮುಸ್ಲಿಮರ ತಲೆ ಕೆಡಿಸುತ್ತಿದ್ದಾರೆ ದಲಿತರ ತಲೆಕೆಡಿಸುವ ರೀತಿ ಅಲ್ಪಸಂಖ್ಯಾತರಿಗೂ ತಲೆ ಕೆಡಿಸುತ್ತಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರ ನೂರಕ್ಕೆ ನೂರರಷ್ಟು ನಡೆಯುತ್ತಿರುವುದು ಸತ್ಯ. ರಾಮಕೃಷ್ಣ ಹೆಗಡೆ, ಬಸವರಾಜ ಬೊಮ್ಮಾಯಿ, ಎಚ್ಡಿ ದೇವೇಗೌಡರ ಜೊತೆ ಕೆಲಸ ಮಾಡಿದ್ದೇನೆ ಆದ್ರೆ ಇಷ್ಟು ಗಲೀಜು ಸರ್ಕಾರ ಎಂದು ನೋಡಿರಲಿಲ್ಲ. ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಸಂಸದ ರಮೇಶ್ ಜಿಗಿಜಣಗಿ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ವಿಜಯಪುರಕ್ಕೆ ಬಂದು ನೋಡಿ ಪ್ರಧಾನಿ ಮೋದಿಯವರು ಎಂತಹ ಕೆಲಸ ಮಾಡಿದ್ದಾರೆ ಅಂತ ಹೇಳುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ನೀಡಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ನಾನು ಇಂತಹ ಸರ್ಕಾರ ಯಾವತ್ತು ನೋಡಿಲ್ಲ ಎಂದು ದೆಹಲಿಯಲ್ಲಿ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.