ವಿಜಯಪುರ : ಮುಂದಿನ ತಿಂಗಳಲ್ಲಿ ವಿಜಯಪುರದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ. ಬೆಳಗಾವಿ ಕಂದಾಯ ವಿಭಾಗದ ಅಭಿವೃದ್ಧಿ ಯೋಜನೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಕಲಬುರಗಿ ವಿಭಾಗದ್ದ ಕಲಬುರಗಿಯಲ್ಲಿ, ಮೈಸೂರು ವಿಭಾಗದ ಸಭೆ ಮಹದೇಶ್ವರ ಬೆಟ್ಟದಲ್ಲಿ ನಡೆದಿತ್ತು. ಗುರುವಾರ ನಂದಿಬೆಟ್ಟದಲ್ಲಿ ಬೆಂಗಳೂರು ವಿಭಾಗದ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಪುಟ ಸಭೆ ನಡೆಯಲಿದೆ. ಮುಂದುವರೆದು, ಮುಂದಿನ ಸಚಿವ ಸಂಪುಟದ ಸಭೆ ವಿಜಯಪುರದಲ್ಲಿ ನಡೆಯುವ ಸಾಧ್ಯತೆ ಇದೆ.