Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ‘ರಾಗಿ ಮಾಲ್ಟ್’ ಕುಡಿಯುತ್ತೀರಾ.? ಹಾಗಿದ್ರೆ, ಈ ವಿಷಯಗಳನ್ನ ತಿಳಿದಿರಲೇಬೇಕು

14/06/2025 9:28 PM

‘ನಾನೆಂದಿಗೂ ವಿಮಾನದಲ್ಲಿ ಕುಳಿತುಕೊಳ್ಳೋದಿಲ್ಲ’ : ವಿಮಾನ ಅಪಘಾತದ ವೈರಲ್ ವಿಡಿಯೋ ಮಾಡಿದ ಬಾಲಕನ ಭಯದ ಮಾತು

14/06/2025 9:16 PM

BIG NEWS : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ : ಜೂ.16 & 17 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

14/06/2025 9:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ನಾನೆಂದಿಗೂ ವಿಮಾನದಲ್ಲಿ ಕುಳಿತುಕೊಳ್ಳೋದಿಲ್ಲ’ : ವಿಮಾನ ಅಪಘಾತದ ವೈರಲ್ ವಿಡಿಯೋ ಮಾಡಿದ ಬಾಲಕನ ಭಯದ ಮಾತು
INDIA

‘ನಾನೆಂದಿಗೂ ವಿಮಾನದಲ್ಲಿ ಕುಳಿತುಕೊಳ್ಳೋದಿಲ್ಲ’ : ವಿಮಾನ ಅಪಘಾತದ ವೈರಲ್ ವಿಡಿಯೋ ಮಾಡಿದ ಬಾಲಕನ ಭಯದ ಮಾತು

By KannadaNewsNow14/06/2025 9:16 PM

ಅಹಮದಾಬಾದ್‌ : ಗುರುವಾರ ಗುಜರಾತ್‌’ನ ಅಹಮದಾಬಾದ್‌’ನಲ್ಲಿ ಏರ್ ಇಂಡಿಯಾದ AI-171 ವಿಮಾನ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 242 ಜನರಿದ್ದರು, ಅದರಲ್ಲಿ 241 ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತದ ಲೈವ್ ವಿಡಿಯೋವನ್ನ 17 ವರ್ಷದ ಆರ್ಯನ್ ರೆಕಾರ್ಡ್ ಮಾಡಿದ್ದಾನೆ. ಆರ್ಯನ್ ಮೇಘನಿನಗರದಲ್ಲಿ ತನ್ನ ಸಹೋದರಿಯ ಮನೆಗೆ ಬಂದಿದ್ದು, ಈ ವಿಡಿಯೋವನ್ನು ತನ್ನ ಮೊಬೈಲ್’ನಲ್ಲಿ ಸೆರೆಹಿಡಿದಿದ್ದಾನೆ. 17 ವರ್ಷದ ಆರ್ಯನ್ 12ನೇ ತರಗತಿಯಲ್ಲಿ ಓದುತ್ತಿದ್ದು, ಈ ಅಪಘಾತವನ್ನ ನೋಡಿ ತುಂಬಾ ಭಯಭೀತನಾಗಿದ್ದೇನೆ ಮತ್ತು ಎಂದಿಗೂ ವಿಮಾನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದನು.

ಗುರುವಾರ ಮಧ್ಯಾಹ್ನ 1:39ಕ್ಕೆ ಆರ್ಯನ್ ಅಪಘಾತದ ವಿಡಿಯೋ ಮಾಡಿದ್ದಾನೆ. ಯಾಕಂದ್ರೆ, ಇದು ಅವನ ಮೊಬೈಲ್‌ನಲ್ಲಿ ತೋರಿಸಿರುವ ವಿಡಿಯೋದ ಸಮಯವಾಗಿದೆ.

ಹಳ್ಳಿಯಲ್ಲಿರುವ ಆರ್ಯನ್ ತನ್ನ ಸಹೋದರಿಯ ಮನೆಗೆ ಬಂದಿದ್ದು, ವಿಮಾನವು ತುಂಬಾ ಕೆಳಮಟ್ಟದಲ್ಲಿ ಹಾರುವುದನ್ನ ನೋಡಿ ಖುಷಿಪಟ್ಟಿದ್ದಾನೆ. ಅದ್ರಂತೆ, ಹಳ್ಳಿಯಲ್ಲಿರುವ ತನ್ನ ಸ್ನೇಹಿತರಿಗೆ ತೋರಿಸಿಲು ವಿಡಿಯೋ ಸೆರೆ ಹಿಡಿಯಲು ಶುರು ಮಾಡಿದ್ದಾನೆ. ವಿಮಾನ ಲ್ಯಾಂಡ್ ಆಗುತ್ತಿರಬಹುದು ಎಂದು ಬಾವಿಸಿದ್ದ ಆರ್ಯನ್,  ಬ್ಲಾಸ್ಟ್ ಆಗಿದ್ದನ್ನ ನೋಡಿ ಭಯಗೊಂಡಿದ್ದಾನೆ. ಭೀತಿಯಿಂದ ಮನೆಯೊಳಗೆ ಓಡಿ ಹೋಗಿ ಅಪ್ಪ, ಅಕ್ಕನಿಗೆ ವಿಷ್ಯ ತಿಳಿಸಿದ್ದಾನೆ.

ಆರ್ಯನ್’ನ ಸಹೋದರಿ, ನನ್ನ ಸಹೋದರ ಎಂದಿನಂತೆ ವೀಡಿಯೊ ಮಾಡುತ್ತಿದ್ದ, ಆದರೆ ದುರದೃಷ್ಟವಶಾತ್ ಅದು ಅಪಘಾತಕ್ಕೀಡಾಯಿತು. ಅವನು ಎಂದಿಗೂ ವಿಮಾನ ಇಷ್ಟು ಹತ್ತಿರದಿಂದ ನೋಡಿರಲಿಲ್ಲ ಎಂದಿದ್ದಾರೆ.

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ತುಂಬಾ ಕೆಳಮಟ್ಟದಲ್ಲಿ ಹಾರುತ್ತಿತ್ತು ಎಂದು ಆರ್ಯನ್ ಅವರ ನೆರೆಯ ಶುಭಂ ಗುಪ್ತಾ ಹೇಳಿದ್ದಾರೆ. ಆ ವಿಮಾನ ಸಾಮಾನ್ಯವಾಗಿ ಹಾರುತ್ತಿರಲಿಲ್ಲ. ಅದರ ಚಲನೆಯನ್ನ ನೋಡಿದಾಗ, ಅದು ಅಪಘಾತಕ್ಕೀಡಾಗಬಹುದು ಎಂದು ಭಾವಿಸಿದೆ. ವೀಡಿಯೊ ತೆಗೆದ ಸ್ಥಳ ಮೇಘಾನಿ ನಗರದ ಓಂಕಾರ್ ನಗರ ಮೂಲೆಯಲ್ಲಿದೆ, ಆದರೆ ವಿಮಾನ ಅಪಘಾತಕ್ಕೀಡಾದ ಸ್ಥಳ ಮೇಘಾನಿ ನಗರದ ಐಜಿಪಿ ಕಾಂಪೌಂಡ್ ಎಂದು ಅವರು ಹೇಳಿದರು. ವಿಮಾನ ಅಪಘಾತಕ್ಕೀಡಾದ ತಕ್ಷಣ, ತುಂಬಾ ದೊಡ್ಡ ಶಬ್ದ ಕೇಳಿಸಿತು, ನಾವು ಛಾವಣಿಗೆ ಬಂದು ನೋಡಿದಾಗ, ಆಕಾಶದಾದ್ಯಂತ ಹೊಗೆ ಇತ್ತು ಎಂದರು.

ಅಹಮದಾಬಾದ್ ಪೊಲೀಸರು ಬಾಲಕ ಆರ್ಯನ್’ನನ್ನ ವಿಡಿಯೋ ಬಗ್ಗೆ ಪ್ರಶ್ನಿಸಿದ್ದಾರೆ. ಇನ್ನು ವಿಡಿಯೋ ಮಾಡಿದ್ದಕ್ಕಾಗಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್ ವಿಡಿಯೋದ ಸ್ಕ್ರೀನ್ ರೆಕಾರ್ಡಿಂಗ್ ವೈರಲ್ ಆಗಿದೆ. ವಿಡಿಯೋ ಮಾಡಿದ ವ್ಯಕ್ತಿ ಪೊಲೀಸರಿಗೆ ವಿಡಿಯೋದ ವಿವರಗಳನ್ನ ನೀಡಿದ್ದಾರೆ. ಸಾಕ್ಷಿಯಾಗಿ ಹೇಳಿಕೆ ನೀಡಲು ಬಾಲಕ ತನ್ನ ತಂದೆಯೊಂದಿಗೆ ಬಂದಿದ್ದ, ನಂತರ ಕಳುಹಿಸಲಾಯಿತು. ಯಾವುದೇ ಬಂಧನವನ್ನು ಮಾಡಲಾಗಿಲ್ಲ ಎಂದು ಸ್ಪಷ್ಟ ಪಡೆಸಿದರು.

https://kannadanewsnow.com/kannada/these-are-the-foods-that-thyroid-patients-must-eat/
https://kannadanewsnow.com/kannada/breaking-horrific-tragedy-in-mandya-youth-commits-suicide-by-stepping-in-front-of-a-train/
https://kannadanewsnow.com/kannada/breaking-us-lawmaker-shot-another-injured-suspect-disguised-as-police-officer-flees/
Share. Facebook Twitter LinkedIn WhatsApp Email

Related Posts

ನೀವು ‘ರಾಗಿ ಮಾಲ್ಟ್’ ಕುಡಿಯುತ್ತೀರಾ.? ಹಾಗಿದ್ರೆ, ಈ ವಿಷಯಗಳನ್ನ ತಿಳಿದಿರಲೇಬೇಕು

14/06/2025 9:28 PM2 Mins Read

‘ಥೈರಾಯ್ಡ್’ ರೋಗಿಗಳು ತಿನ್ನಲೇಬೇಕಾದ ಆಹಾರಗಳಿವು.!

14/06/2025 8:36 PM1 Min Read

Shubhanshu’s Space Mission : ‘ಶುಭಾಂಶು ಶುಕ್ಲಾ’ ಬಾಹ್ಯಾಕಾಶ ಯಾನ ಶುರು ; ಜೂ.19ಕ್ಕೆ ‘ರಾಕೆಟ್’ ಉಡಾವಣೆ

14/06/2025 7:59 PM1 Min Read
Recent News

ನೀವು ‘ರಾಗಿ ಮಾಲ್ಟ್’ ಕುಡಿಯುತ್ತೀರಾ.? ಹಾಗಿದ್ರೆ, ಈ ವಿಷಯಗಳನ್ನ ತಿಳಿದಿರಲೇಬೇಕು

14/06/2025 9:28 PM

‘ನಾನೆಂದಿಗೂ ವಿಮಾನದಲ್ಲಿ ಕುಳಿತುಕೊಳ್ಳೋದಿಲ್ಲ’ : ವಿಮಾನ ಅಪಘಾತದ ವೈರಲ್ ವಿಡಿಯೋ ಮಾಡಿದ ಬಾಲಕನ ಭಯದ ಮಾತು

14/06/2025 9:16 PM

BIG NEWS : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ : ಜೂ.16 & 17 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

14/06/2025 9:15 PM

NEET UG ಪರೀಕ್ಷೆಯಲ್ಲಿ ‘ಕೇಂದ್ರ ಸಚಿವ HDK ಗನ್ ಮ್ಯಾನ್’ ಪುತ್ರಿಗೆ 444 ಶ್ರೇಣಿ | NEET UG Exam 2025

14/06/2025 9:01 PM
State News
KARNATAKA

BIG NEWS : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ : ಜೂ.16 & 17 ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

By kannadanewsnow0514/06/2025 9:15 PM KARNATAKA 1 Min Read

ಬೆಂಗಳೂರು : ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್…

NEET UG ಪರೀಕ್ಷೆಯಲ್ಲಿ ‘ಕೇಂದ್ರ ಸಚಿವ HDK ಗನ್ ಮ್ಯಾನ್’ ಪುತ್ರಿಗೆ 444 ಶ್ರೇಣಿ | NEET UG Exam 2025

14/06/2025 9:01 PM

BREAKING : ಮಂಡ್ಯದಲ್ಲಿ ಘೋರ ದುರಂತ : ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆಗೆ ಶರಣು!

14/06/2025 8:15 PM

BREAKING : ಬಾಗಲಕೋಟೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಶಿಕ್ಷಕ ಅರೆಸ್ಟ್

14/06/2025 8:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.