Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Modi Biopic : ಪ್ರಧಾನಿ ಮೋದಿ ಜೀವನ ಚರಿತ್ರೆ ಆಧಾರಿತ ಸಿನಿಮಾ ಘೋಷಣೆ : ನಮೋ ಪಾತ್ರದಲ್ಲಿ ನಟ ‘ಉನ್ನಿ ಮುಕುಂದನ್’!

17/09/2025 4:32 PM

₹25,000 ಸಂಬಳದಲ್ಲೂ ನೀವು ಐಷಾರಾಮಿ ಕಾರು, ಮನೆ ಖರೀದಿಸ್ಬೋದು! ತಜ್ಞರಿಂದ ಅಚ್ಚರಿಯ ಸೂತ್ರ ಬಹಿರಂಗ

17/09/2025 4:15 PM

BREAKING : ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ 5 ಕಡೆಗಳಲ್ಲಿ, ಮಾನವನ ಅಸ್ತಿಪಂಜರದ ಅವಶೇಷಗಳು ಪತ್ತೆ 

17/09/2025 4:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಯಶವಂತಪುರ-ಯೋಗ ನಗರಿ ರಿಷಿಕೇಶ ನಡುವೆ ವಿಶೇಷ ಎಕ್ಸ್ ಪ್ರೇಸ್ ರೈಲು ಸಂಚಾರ
KARNATAKA

ಬೆಂಗಳೂರಿನ ಯಶವಂತಪುರ-ಯೋಗ ನಗರಿ ರಿಷಿಕೇಶ ನಡುವೆ ವಿಶೇಷ ಎಕ್ಸ್ ಪ್ರೇಸ್ ರೈಲು ಸಂಚಾರ

By kannadanewsnow0911/06/2025 4:00 PM

ಬೆಂಗಳೂರು: ಪ್ರಯಾಣಿಕರ ಹೆಚ್ಚಿದ ಬೇಡಿಕೆ ಮತ್ತು ಮುಂಬರುವ ದಿನಗಳಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ರೈಲ್ವೆ ಮಂಡಳಿಯು ಯಶವಂತಪುರ – ಯೋಗ ನಗರಿ ರಿಷಿಕೇಶ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06597/06598) ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಮತ್ತು ದಕ್ಷಿಣ ಹಾಗೂ ಉತ್ತರ ಭಾರತದ ನಡುವಿನ ದೂರ ಪ್ರಯಾಣದ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಯಶವಂತಪುರ – ಯೋಗ ನಗರಿ ರಿಷಿಕೇಶ ಎಕ್ಸ್‌ಪ್ರೆಸ್ ವಿಶೇಷ ರೈಲು ವಿವರಗಳು:

ರೈಲು ಸಂಖ್ಯೆ 06597 ಯಶವಂತಪುರ – ಯೋಗ ನಗರಿ ರಿಷಿಕೇಶ ವಿಶೇಷ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ಪ್ರತಿ ಗುರುವಾರ ಬೆಳಿಗ್ಗೆ 07:00 ಗಂಟೆಗೆ 19.06.2025, 26.06.2025 ಮತ್ತು 03.07.2025 ರಂದು ಹೊರಟು, ಶನಿವಾರ ಬೆಳಿಗ್ಗೆ 10:20 ಗಂಟೆಗೆ ಯೋಗ ನಗರಿ ರಿಷಿಕೇಶ ತಲುಪಲಿದೆ.

ರೈಲು ಸಂಖ್ಯೆ 06598 ಯೋಗ ನಗರಿ ರಿಷಿಕೇಶ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಯೋಗ ನಗರಿ ರಿಷಿಕೇಶದಿಂದ ಪ್ರತಿ ಶನಿವಾರ ಸಂಜೆ 05:55 ಗಂಟೆಗೆ 21.06.2025, 28.06.2025 ಮತ್ತು 05.07.2025 ರಂದು ಹೊರಟು, ಸೋಮವಾರ ಸಂಜೆ 07:45 ಗಂಟೆಗೆ ಯಶವಂತಪುರ ಆಗಮಿಸಲಿದೆ.

ಈ ರೈಲು ಎರಡೂ ಮಾರ್ಗಗಳಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಧೋಣ, ಕರ್ನೂಲ್ ಸಿಟಿ, ಕಾಚಿಗೂಡ, ಕಾಜಿಪೇಟ್, ಬಲ್ಹರ್ಷಾ, ನಾಗ್ಪುರ, ಭೋಪಾಲ್, ಬೀನಾ, ವೀರಂಗನಾ ಲಕ್ಷ್ಮೀಬಾಯಿ ಝಾನ್ಸಿ ರೈಲು ನಿಲ್ದಾಣ, ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ, ಹಜರತ್ ನಿಜಾಮುದ್ದೀನ್, ಗಾಜಿಯಾಬಾದ್, ಮಿರುತ್ ಸಿಟಿ, ಮುಜಾಫರನಗರ್, ತಾಪರಿ, ರೂರ್ಕಿ ಮತ್ತು ಹರಿದ್ವಾರ ಜಂಕ್ಷನ್‌ಗಳಲ್ಲಿ ನಿಲುಗಡೆಗೊಳ್ಳಲಿದೆ.

ಈ ವಿಶೇಷ ರೈಲು 18 ಬೋಗಿಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ: 1 ಎಸಿ ಫಸ್ಟ್ ಕಮ್ ಎಸಿ ಟು-ಟೈರ್, 1 ಎಸಿ ಟು ಟೈರ್, 3 ಎಸಿ ತ್ರಿ ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ.

ಈ ರೈಲುಗಳ ಸೇವೆಯು ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ ಮತ್ತು ಬೆಂಗಳೂರು ಪ್ರದೇಶ ಹಾಗೂ ಉತ್ತರಾಖಂಡದ ನಡುವೆ ಮೊದಲ ನೇರ ರೈಲು ಸಂಪರ್ಕವನ್ನು ಕಲ್ಪಿಸಿದೆ. ಇದರಿಂದಾಗಿ ಬಹು ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹಿಮಾಲಯದ ತಪ್ಪಲಿನಲ್ಲಿ ಗಂಗಾ ನದಿಯ ದಡದಲ್ಲಿ ನೆಲೆಗೊಂಡಿರುವ ಯೋಗ ನಗರಿ ರಿಷಿಕೇಶ, ಆಧ್ಯಾತ್ಮಿಕ ಮತ್ತು ಯೋಗ ಚಿಕಿತ್ಸೆಯ ತಾಣವಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ‘ಯೋಗದ ವಿಶ್ವ ರಾಜಧಾನಿ’ ಎಂದು ಹೆಸರಾಗಿರುವ ಈ ನಗರವು ಪ್ರಪಂಚದಾದ್ಯಂತ ಯಾತ್ರಾರ್ಥಿಗಳು, ಆಧ್ಯಾತ್ಮಿಕ ಅನ್ವೇಷಕರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಉತ್ತರಾಖಂಡದ ಚಾರ್ ಧಾಮ್ ಯಾತ್ರೆಗೆ ಪ್ರಮುಖ ಹೆಬ್ಬಾಗಿಲು ಕೂಡ ಆಗಿದೆ.

BIG NEWS: ಇಂದಿಗೆ ರಾಜ್ಯದಲ್ಲಿ ‘ಶಕ್ತಿ ಯೋಜನೆ’ ಜಾರಿಯಾಗಿ 2 ವರ್ಷ: ಉಚಿತವಾಗಿ ಸಾರಿಗೆ ಬಸ್ಸಲ್ಲಿ ಪ್ರಯಾಣಿಸಿದ ಮಹಿಳೆಯರೆಷ್ಟು ಗೊತ್ತಾ?

BIG NEWS : ಪ್ರಧಾನಿ ಮೋದಿಯಿಂದ ದೇಶದ ಬಡತನ ಕಡಿಮೆಯಾಗಿಲ್ಲ : CM ಸಿದ್ದರಾಮಯ್ಯ ವಾಗ್ದಾಳಿ

Share. Facebook Twitter LinkedIn WhatsApp Email

Related Posts

BREAKING : ಧರ್ಮಸ್ಥಳ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ಬಂಗ್ಲೆಗುಡ್ಡೆ ಕಾಡಿನಲ್ಲಿ ಮೂಳೆ ತುಂಡುಗಳು ಪತ್ತೆ!

17/09/2025 2:50 PM1 Min Read

ಗಮನಿಸಿ: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ರಾಜ್ಯದಲ್ಲಿ ಜಾತಿಸಮೀಕ್ಷೆ, ಹೀಗಿದೆ ಜಾತಿ-ಉಪಜಾತಿಗಳ ಪಟ್ಟಿ

17/09/2025 1:48 PM2 Mins Read

`BPL ರೇಷನ್ ಕಾರ್ಡ್’ ರದ್ದು ಮಾಡಲ್ಲ : ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ

17/09/2025 1:06 PM1 Min Read
Recent News

Modi Biopic : ಪ್ರಧಾನಿ ಮೋದಿ ಜೀವನ ಚರಿತ್ರೆ ಆಧಾರಿತ ಸಿನಿಮಾ ಘೋಷಣೆ : ನಮೋ ಪಾತ್ರದಲ್ಲಿ ನಟ ‘ಉನ್ನಿ ಮುಕುಂದನ್’!

17/09/2025 4:32 PM

₹25,000 ಸಂಬಳದಲ್ಲೂ ನೀವು ಐಷಾರಾಮಿ ಕಾರು, ಮನೆ ಖರೀದಿಸ್ಬೋದು! ತಜ್ಞರಿಂದ ಅಚ್ಚರಿಯ ಸೂತ್ರ ಬಹಿರಂಗ

17/09/2025 4:15 PM

BREAKING : ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ 5 ಕಡೆಗಳಲ್ಲಿ, ಮಾನವನ ಅಸ್ತಿಪಂಜರದ ಅವಶೇಷಗಳು ಪತ್ತೆ 

17/09/2025 4:13 PM

BREAKING : ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2025 : ಫೈನಲ್’ಗೆ ‘ನೀರಜ್’ ಲಗ್ಗೆ, ಮೊದಲ ಥ್ರೋನಲ್ಲಿ ಅರ್ಹತೆ |World athletics Championship

17/09/2025 4:07 PM
State News
KARNATAKA

BREAKING : ಧರ್ಮಸ್ಥಳ ಕೇಸ್ ಗೆ ಮತ್ತೊಂದು ಟ್ವಿಸ್ಟ್ : ಬಂಗ್ಲೆಗುಡ್ಡೆ ಕಾಡಿನಲ್ಲಿ ಮೂಳೆ ತುಂಡುಗಳು ಪತ್ತೆ!

By kannadanewsnow0717/09/2025 2:50 PM KARNATAKA 1 Min Read

ದಕ್ಷಿಣಕನ್ನಡ : ಧರ್ಮಸ್ಥಳ ಪ್ರಕರಣ ದಿನವೊಂದಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿ ಶೋಧ ನಡೆಸಿದ್ದಾರೆ. ಧರ್ಮಸ್ಥಳ ಸಮೀಪದ…

ಗಮನಿಸಿ: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ರಾಜ್ಯದಲ್ಲಿ ಜಾತಿಸಮೀಕ್ಷೆ, ಹೀಗಿದೆ ಜಾತಿ-ಉಪಜಾತಿಗಳ ಪಟ್ಟಿ

17/09/2025 1:48 PM

`BPL ರೇಷನ್ ಕಾರ್ಡ್’ ರದ್ದು ಮಾಡಲ್ಲ : ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ

17/09/2025 1:06 PM

‘ಕಾಂಗ್ರೆಸ್ ಮಾತ್ರ ಭಾರತವನ್ನು ಒಗ್ಗಟ್ಟಾಗಿ ಹಿಡಿದಿಟ್ಟುಕೊಳ್ಳಬಲ್ಲದು ಎಂಬ ಮಿಥ್ಯೆಯನ್ನು ಮೋದಿ ಒಡೆದು ಹಾಕಿದ್ದಾರೆ’: ದೇವೇಗೌಡ

17/09/2025 1:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.