Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೆ.10ರಂದು ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

08/09/2025 8:59 PM

SHOCKING : ಜ್ವರದಿಂದ ಆಸ್ಪತ್ರೆಗೆ ಹೋದ 8ನೇ ತರಗತಿ ಬಾಲಕಿ ಹೃದಯಾಘಾತದಿಂದ ಸಾವು

08/09/2025 8:41 PM

2025 ರ CAFA ನೇಷನ್ಸ್ ಕಪ್‌ನಲ್ಲಿ ಓಮನ್ ವಿರುದ್ಧ ಭಾರತ ಭರ್ಜರಿ ಗೆಲುವು | CAFA Nations Cup 2025

08/09/2025 8:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮವೂ, ಹುಬ್ಬಳ್ಳಿ-ಕಟಿಹಾರ್ ನಡುವೆ ಬೇಸಿಗೆ ವಿಶೇಷ ರೈಲುಗಳ ಸಂಚಾರ
KARNATAKA

ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮವೂ, ಹುಬ್ಬಳ್ಳಿ-ಕಟಿಹಾರ್ ನಡುವೆ ಬೇಸಿಗೆ ವಿಶೇಷ ರೈಲುಗಳ ಸಂಚಾರ

By kannadanewsnow0904/04/2025 7:01 PM

ಬೆಂಗಳೂರು: ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಬೆಳಗಾವಿ-ಮವೂ ನಡುವೆ 6 ಟ್ರಿಪ್ ಮತ್ತು ಹುಬ್ಬಳ್ಳಿ-ಕಟಿಹಾರ್ ನಡುವೆ 4 ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ವಿಶೇಷ ರೈಲುಗಳ ಸೇವೆ ಈ ಕೆಳಗಿನಂತಿವೆ:

1. ಬೆಳಗಾವಿ-ಮವೂ ನಡುವೆ 6 ಟ್ರಿಪ್ ವಿಶೇಷ ರೈಲು (07327/07328) ಸಂಚಾರ:

ರೈಲು ಸಂಖ್ಯೆ 07327 ಏಪ್ರಿಲ್ 6 ರಿಂದ ಮೇ 11, 2025 ರವರೆಗೆ ಪ್ರತಿ ಭಾನುವಾರ ಬೆಳಗಾವಿಯಿಂದ ಬೆಳಿಗ್ಗೆ 11:30 ಗಂಟೆಗೆ ಹೊರಟು, ಮಂಗಳವಾರ ಬೆಳಿಗ್ಗೆ10:30 ಗಂಟೆಗೆ ಉತ್ತರ ಪ್ರದೇಶದ ಮವೂ ನಿಲ್ದಾಣ ತಲುಪಲಿದೆ. ಇದೇ ರೈಲು (07328) ಏಪ್ರಿಲ್ 9 ರಿಂದ ಮೇ 14, 2025 ರವರೆಗೆ ಪ್ರತಿ ಬುಧವಾರ ಮವೂ ನಿಲ್ದಾಣದಿಂದ ರಾತ್ರಿ 8:00 ಗಂಟೆಗೆ ಹೊರಟು, ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಎರಡೂ ಮಾರ್ಗಗಳಲ್ಲಿ ಲೋಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಬದಾಮಿ, ಬಾಗಲಕೋಟ, ಆಲಮಟ್ಟಿ, ವಿಜಯಪುರ, ಸೋಲಾಪುರ, ಕುರ್ದುವಾಡಿ, ದೌಂಡ್, ಅಹ್ಮದ್ ನಗರ, ಕೋಪರಗಾಂವ್, ಮನ್ಮಾಡ್, ಜಲಗಾಂವ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ್, ಕಟ್ನಿ, ಸತ್ನಾ, ಪ್ರಯಾಗರಾಜ್ ಚಿಯೋಕಿ, ಮಿರ್ಜಾಪುರ, ವಾರಣಾಸಿ, ಜೌನ್ಪುರ, ಶಹಗಂಜ್ ಮತ್ತು ಅಜಂಗಢ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ರೈಲು 2-ಎಸಿ ಟು ಟೈರ್, 5-ಎಸಿ ತ್ರಿ ಟೈರ್, 10-ಸ್ಲೀಪರ್ ಕ್ಲಾಸ್, 2-ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2-ಎಸ್ಎಲ್ಆರ್ ಡಿ ಸೇರಿದಂತೆ 21 ಬೋಗಿಗಳನ್ನು ಒಳಗೊಂಡಿರುತ್ತದೆ.

2. ಹುಬ್ಬಳ್ಳಿ- ಕಟಿಹಾರ್ ನಡುವೆ 4 ಟ್ರಿಪ್ ವಿಶೇಷ (07325/07326) ರೈಲು ಸಂಚಾರ:

ರೈಲು ಸಂಖ್ಯೆ 07325 ಏಪ್ರಿಲ್ 9 ರಿಂದ 30, 2025 ರವರೆಗೆ ಪ್ರತಿ ಬುಧವಾರ ಹುಬ್ಬಳ್ಳಿಯಿಂದ ಮಧ್ಯಾಹ್ನ 3:15 ಗಂಟೆಗೆ ಹೊರಟು, ಶುಕ್ರವಾರ ಮಧ್ಯಾಹ್ನ 1:00 ಗಂಟೆಗೆ ಬಿಹಾರ ರಾಜ್ಯದ ಕಟಿಹಾರ್ ನಿಲ್ದಾಣ ತಲುಪಲಿದೆ. ಹಿಂದಿರುಗುವಾಗ ಈ ರೈಲು (07326) ಏಪ್ರಿಲ್ 12 ರಿಂದ ಮೇ 3, 2025 ರವರೆಗೆ ಪ್ರತಿ ಶನಿವಾರ ಕಟಿಹಾರ್ನಿಂದ ಮಧ್ಯಾಹ್ನ 2:30 ಗಂಟೆಗೆ ಹೊರಟು, ಸೋಮವಾರ ಬೆಳಿಗ್ಗೆ 10:50 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.

ಮಾರ್ಗದಲ್ಲಿ, ಈ ರೈಲು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಗುಂತಕಲ್, ಧೋಣೆ, ನಂದ್ಯಾಳ, ದಿಗುವಮೆಟ್ಟ, ಗುಂಟೂರು, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸಾ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಾಲಸಾ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಬಾಲೇಶ್ವರ, ಖರಗ್ಪುರ, ಭಟ್ಟನಗರ, ಡನಕುನಿ, ಬೋಲ್ಪುರ್, ರಾಂಪುರ್ ಹಟ ಮತ್ತು ಮಾಲ್ಡಾ ಟೌನ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ರೈಲು 2-ಎಸಿ ಟು ಟೈರ್, 16-ಎಸಿ ತ್ರಿ ಟೈರ್ ಮತ್ತು 2-ಲಗೇಜ್/ಜನರೇಟರ್ ಕಾರ್/ ಬ್ರೆಕ್-ವ್ಯಾನ್ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.

ಆಸನ ಕಾಯ್ದಿರಿಸುವಿಕೆ, ಪ್ರತಿ ನಿಲ್ದಾಣದಲ್ಲಿ ರೈಲುಗಳ ಆಗಮನ ಮತ್ತು ನಿರ್ಗಮನ ಸಮಯದ ಕುರಿತು ಮತ್ತು ಇತರೇ ಮಾಹಿತಿ ತಿಳಿದುಕೊಳ್ಳಲು, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

BREAKING: ನರೇಗಾ ಕಾರ್ಮಿಕರಿಗೆ ಶೇ.30ರಷ್ಟು ಕೆಲಸದ ಪ್ರಮಾಣ ಕಡಿತ: ಸಚಿವ ಪ್ರಿಯಾಂಕ್ ಖರ್ಗೆ

ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ ನೀಡಿದ್ದ ಸಮನ್ಸ್ ರದ್ದತಿಗೆ ಕೋರ್ಟ್ ನಕಾರ

Share. Facebook Twitter LinkedIn WhatsApp Email

Related Posts

ಸೆ.10ರಂದು ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

08/09/2025 8:59 PM1 Min Read

ಮದ್ದೂರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ: ಶಾಸಕ ಉದಯ್ ಹೇಳಿದ್ದೇನು ಗೊತ್ತಾ?

08/09/2025 8:24 PM1 Min Read

ಮೈಸೂರಲ್ಲಿ ಮಾಲ್ ನಲ್ಲಿ ಕೆಲಸ ಮಾಡುವಾಗ ಕೆಳಕ್ಕೆ ಬಿದ್ದು ವ್ಯಕ್ತಿ ಸಾವು

08/09/2025 8:21 PM1 Min Read
Recent News

ಸೆ.10ರಂದು ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

08/09/2025 8:59 PM

SHOCKING : ಜ್ವರದಿಂದ ಆಸ್ಪತ್ರೆಗೆ ಹೋದ 8ನೇ ತರಗತಿ ಬಾಲಕಿ ಹೃದಯಾಘಾತದಿಂದ ಸಾವು

08/09/2025 8:41 PM

2025 ರ CAFA ನೇಷನ್ಸ್ ಕಪ್‌ನಲ್ಲಿ ಓಮನ್ ವಿರುದ್ಧ ಭಾರತ ಭರ್ಜರಿ ಗೆಲುವು | CAFA Nations Cup 2025

08/09/2025 8:31 PM

ಮದ್ದೂರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ: ಶಾಸಕ ಉದಯ್ ಹೇಳಿದ್ದೇನು ಗೊತ್ತಾ?

08/09/2025 8:24 PM
State News
KARNATAKA

ಸೆ.10ರಂದು ಮದ್ದೂರಿಗೆ ಬಿಜೆಪಿ ನಿಯೋಗ ಭೇಟಿ: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

By kannadanewsnow0908/09/2025 8:59 PM KARNATAKA 1 Min Read

ನವದೆಹಲಿ: ಬಿಜೆಪಿ ನಿಯೋಗವು ಇದೇ 10ರಂದು ಮದ್ದೂರಿಗೆ ಭೇಟಿ ಕೊಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ…

ಮದ್ದೂರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ: ಶಾಸಕ ಉದಯ್ ಹೇಳಿದ್ದೇನು ಗೊತ್ತಾ?

08/09/2025 8:24 PM

ಮೈಸೂರಲ್ಲಿ ಮಾಲ್ ನಲ್ಲಿ ಕೆಲಸ ಮಾಡುವಾಗ ಕೆಳಕ್ಕೆ ಬಿದ್ದು ವ್ಯಕ್ತಿ ಸಾವು

08/09/2025 8:21 PM

ಮದ್ದೂರು ಕಲ್ಲು ತೂರಾಟ ಘಟನೆ: ನಾವು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲ್ಲ- ಸಚಿವ ಚಲುವರಾಯಸ್ವಾಮಿ

08/09/2025 8:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.