Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರ ಜಿಲ್ಲಾ ಹೋರಾಟಕ್ಕೆ ಬೆಂಬಲ ಘೋಷಿಸಿದ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್

13/09/2025 10:08 PM

ಸಿದ್ಧತೆ ಆರಂಭಿಸಿ, ವಿಶ್ವ ಶಕ್ತಿಗಳು ಪಾಕ್’ನಲ್ಲಿ ಒಟ್ಟುಗೂಡಲಿವೆ ; 2027ರ ‘SCO ಶೃಂಗಸಭೆ’ ಆಯೋಜಿಸುವುದಾಗಿ ‘ಷರೀಫ್’ ಘೋಷಣೆ

13/09/2025 9:41 PM

VIDEO : ‘ಕೆಲವ್ರು ಹಸುವನ್ನ ಪ್ರಾಣಿ ಎಂದು ಪರಿಗಣಿಸೋಲ್ಲ’ ; ಪ್ರಾಣಿ ಪ್ರಿಯರ ಕುರಿತು ‘ಪ್ರಧಾನಿ ಮೋದಿ’ ಹಾಸ್ಯಮಯ ಹೇಳಿಕೆ ವೈರಲ್

13/09/2025 9:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Health Tips: ಅತಿಯಾದ ‘ಉಪ್ಪು ಸೇವನೆ’ಯಿಂದ ಮಕ್ಕಳಲ್ಲೂ ‘ಹೈಪರ್‌ ಟೆನ್ಷನ್‌’!
KARNATAKA

Health Tips: ಅತಿಯಾದ ‘ಉಪ್ಪು ಸೇವನೆ’ಯಿಂದ ಮಕ್ಕಳಲ್ಲೂ ‘ಹೈಪರ್‌ ಟೆನ್ಷನ್‌’!

By kannadanewsnow0914/03/2025 5:10 AM

ಬೆಂಗಳೂರು : ಅಗತ್ಯಕ್ಕಿಂತಲೂ ಹೆಚ್ಚು ಪ್ರಮಾಣ ಉಪ್ಪು ಸೇವನೆಯಿಂದ ಭಾರತಲ್ಲಿ ಮಕ್ಕಳು ಸಹ ಸಾಂಕ್ರಾಮಿಕೇತರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಧಿಕ ಉಪ್ಪು ಸೇವನೆಯಿಂದ ಭಾರತದಲ್ಲಿ ಮಕ್ಕಳು ಸೇರಿದಂತೆ ಜನರು ನಾನಾ ರೋಗಗಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅದಿಕ ಉಪ್ಪು ಸೇವನೆಯಿಂದ ರಕ್ತದೊತ್ತಡಕ್ಕೆ ಒಳಗಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಬದಲಾದ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಅಹಾರ ಪದಾರ್ಥಗಳಲ್ಲಿನ ಅತಿಯಾದ ಕೊಬ್ಬು, ಉಪ್ಪು ಮತ್ತು ಸಕ್ಕರೆ ಸೇವನೆ ಹೆಚ್ಚಾಗಿ ಜನರ ಅರೋಗ್ಯವಂತ ಬದುಕಿನ್ನೇ ಕಸಿದುಕೊಳ್ಳುತ್ತಿವೆ.  ಗ್ಲೋಬಲ್‌ ಬರ್ಡನ್‌ ಆಫ್‌ ಡಿಸೀಸ್‌ ಸಮೀಕ್ಷೆ ಪ್ರಕಾರ ಭಾರತದಲ್ಲಿ ಅಧಿಕ ಉಪ್ಪು ಸೇವನೆಯಿಂದ ಪ್ರತಿ ವರ್ಷ 1.75 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ.  ಅನಾರೋಗ್ಯಕರ ಆಹಾರ ಪದ್ಧತಿಯಿಂದ ಜನರಲ್ಲಿ ಸಾಂಕ್ರಾಮಿಕೇತರ ರೋಗಗಳು ಹೆಚ್ಚಾಗಿ ಜೀವ ಹಿಂಡುತ್ತಿವೆ.

 ಆರೋಗ್ಯವಂತ ಬದುಕಿಗಾಗಿ ಯಾವುದೇ ವ್ಯಕ್ತಿ ಪ್ರತಿ ನಿತ್ಯ ಐದು ಗ್ರಾಂಗಿಂತಲೂ ಹೆಚ್ಚು ಉಪ್ಪು ಸೇವನೆ ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ನಿಗದಿ ಪಡಿಸಿದೆ. ಈ ಮಾನದಂಡದ ಪ್ರಕಾರ ಮಕ್ಕಳು ಐದು ಗ್ರಾಂ. ಗಿಂತಲೂ ಕಡಿಮೆ ಉಪ್ಪು ಮಾತ್ರ ಪ್ರತಿ ದಿನ ಸೇವಿಸಬೇಕು. ವಾಸ್ತವದಲ್ಲಿ ಭಾರತೀಯರು  ಅಹಾರ ಪದಾರ್ಥಗಳ ಮೂಲಕ ಕನಿಷ್ಠ 8 ರಿಂದ 11 ಗ್ರಾಂ ಉಪ್ಪುನ್ನು ಸೇವಿಸುತ್ತಿದ್ದಾರೆ.  ಅತಿಯಾದ ಉಪ್ಪು ಸೇವನೆಯಿಂದ ರಕ್ತದ ಒತ್ತಡ ಹೆಚ್ಚಾಗಿ, ಹೃದಯ ಸಂಬಂಧಿ ಕಾಯಿಲೆಗಳಾದ ಹೃದಯಘಾತ, ಲಕ್ವ, ಕಿಡ್ನಿ ವೈಫಲ್ಯದಂತಹ ಕಾಯಲೆಗಳಿಗೆ ತುತ್ತಾಗಿ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ.

ನ್ಯಾಷನಲ್‌ ನಾನ್‌ ಕಮ್ಯೂನಿಕೇಬಲ್‌ ಡಿಸೀಸಸ್‌ ಮಾನಿಟರಿಂಗ್ ಸರ್ವೆ  2017-18 ರ ಪ್ರಕಾರ ಭಾರತದಲ್ಲಿ 18 ರಿಂದ 69 ವಯೋಮಾನದ 28.5 ರಷ್ಟು ಮಂದಿ ರಕ್ತದ ಒತ್ತಡದಿಂದ ಬಳಲುತ್ತಿದ್ದಾರೆ. ರಾಷ್ಟ್ರೀಯ ಸಮಗ್ರ ಪೌಷ್ಠಿಕ ಸರ್ವೆ ಪ್ರಕಾರ ಭಾರತದಲ್ಲಿ ಶೇ. 05 ರಷ್ಟು ಮಕ್ಕಳು ರಕ್ತದ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿತ್ತು. ಭಾರತದಲ್ಲಿ ಮಕ್ಕಳು ಸೇರಿದಂತೆ ಜನರು ಉಪ್ಪು ಸೇವನೆ ಪ್ರಮಾಣ ಕಡಿಮೆ ಮಾಡುವ ಅಗತ್ಯತೆಯನ್ನು ಈ ಅಂಕಿ ಅಂಶಗಳು ಬಹಿರಂಗಪಡಿಸಿವೆ.

 ಭಾರತದಲ್ಲಿ 2025 ರ ಅಂತ್ಯದ ವೇಳೆಗೆ ಉಪ್ಪು ಸೇವನೆ ಪ್ರಮಾಣ  ಶೇ. 30 ರಷ್ಟು ಕಡಿಮೆ ಮಾಡುವ ಗುರಿ ವಿಶ್ವ ಅರೋಗ್ಯ ಸಂಸ್ಥೆ ನೀಡಿದೆ.  ಈ ಗುರಿ ಸಾಧಿಸಲು ಅಹಾರ ಪದಾರ್ಥ ಸೇವನೆ ಸೇರಿದಂತೆ ಎಲ್ಲಾ ಮೂಲಗಳಿಂದ ಉಪ್ಪು ಸೇವನೆ ನಿಯಂತ್ರಿಸುವ ಕಾರ್ಯಕ್ರಮಗಳನ್ನು ರಾಷ್ಟ್ರದಲ್ಲಿ ಕಾರ್ಯಗತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ  ಪಿಎಂ ಪೋಷಣ್‌  ಬಿಸಿಯೂಟ ಕಾರ್ಯಕ್ರಮದಲ್ಲಿ  ಉಪ್ಪಿನ ಬಳಕೆ ಕಡಿಮೆ ಮಾಡಲು  ಬಿಸಿಯೂಟ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ನಿರಂತರ ಕಾರ್ಯಗಾರ ಆಯೋಜಿಸಿ  ಜಾಗೃತಿ ಮೂಡಿಸಲಾಗುತ್ತಿದೆ.

ಅತಿಯಾದ ಉಪ್ಪು ಸೇವನೆ ಭಾರತೀಯರ ಅರೋಗ್ಯವಂತ ಬದುಕನ್ನೇ ಕಸಿದುಕೊಳ್ಳುತ್ತಿದೆ. ಇದರಿಂದ ಚಿಕ್ಕಂದಿನಿಂದಲೇ ಮಕ್ಕಳಿಗೆ ಆರೋಗ್ಯಕರ ಆಹಾರದ ಅರಿವು ನೀಡುವುದು ಹಾಗು ಸರಿಯಾದ ಪೌಷ್ಠಿಕ ಮಾಹಿತಿಯೊಂದಿಗೆ ಮಕ್ಕಳಲ್ಲಿ ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡುವ ಸಾಮರ್ಥ್ಯವನ್ನು ಬೆಳೆಸುವುದು ಅವಶ್ಯಕವಾಗಿದೆ  ಎಂದು ಇನ್‌ಷ್ಟಿಟ್ಯೂಟ್‌ ಆಫ್‌ ಪಾಲಿಸಿ ರಿಸರ್ಚ್‌ ನಿರ್ದೇಶಕ ಅಮಿತ್‌ ಕರ್ಣಿಕ ಅವರು ತಿಳಿಸಿದ್ದಾರೆ.

ಉಪ್ಪು ಬಳಕೆ ನಿಯಂತ್ರಣ ಸಲಹೆ:  ಉಪ್ಪಿಗಿಂತ ರುಚಿ ಬೇರೆ ಇಲ್ಲ. ಹಾಗಂತ ಅಧಿಕ ಉಪ್ಪು ಸೇವನೆ ಮಾಡುವುದು ಬುದ್ಧಿವಂತಿಕೆಯಲ್ಲ. ನಮ್ಮ ಜನ ಉಪ್ಪಿನ ಕಾಯಿ ಇಲ್ಲದೇ ಊಟವನ್ನು ಮುಟ್ಟುವುದಿಲ್ಲ. ಇವತ್ತಿನ ದಿನ ಮಾನದಲ್ಲಿ ಅತಿಯಾದ ಉಪ್ಪು ಸೇವನೆಯಿಂದ ಸಾಂಕ್ರಾಮಿಕೇತರ ನಾನಾ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.  ವಿಶ್ವ ಅರೋಗ್ಯ ಸಂಸ್ಥೆ ಮಾನದಂಡ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ದಿನಕ್ಕೆ ಐದು ಗ್ರಾಂಗಿಂತಲೂ ಹೆಚ್ಚು ಉಪ್ಪು ಸೇವನೆ ಮಾಡಬಾರದು. ಅಂದರೆ ಒಂದು ಟೀ ಸ್ಪೂನ್‌ ನಷ್ಟು ಉಪ್ಪು ದೇಹಕ್ಕೆ ಸಾಕು. ಆಹಾರ ತಯಾರಿಸುವಾಗ  ಉಪ್ಪನ್ನು ಕಡ್ಡಾಯವಾಗಿ ಅಳತೆ ಮಾಡಿ ( ಒಬ್ಬರಿಗೆ ಐದು ಗ್ರಾಂ) ಬಳಸಬೇಕು. ಶುಂಠಿ, ನಿಂಬೆ, ಜೀರಿಗೆ, ಕಾಳು ಮೆಣಸು, ಇತ್ಯಾದಿ ಗಿಡಮೂಲಿಕೆ ಬಳಸುವ ಮೂಲಕ ಉಪ್ಪಿನ ಬಳಕೆ ಕಡಿಮೆ ಮಾಡಬೇಕು ಎಂದು ಡಾ. ವೈಷ್ಣವಿ ಸಿ.ಜಿ. ಸಲಹೆ ಮಾಡಿದ್ದಾರೆ. ಊಟವನ್ನು ಮಾಡುವಾಗ ಹೆಚ್ಚುವರಿ ಉಪ್ಪು ಹಾಕಿಕೊಂಡು ಬಳಸುವ ಸಂಪ್ರದಾಯವನ್ನು ಕೈ ಬಿಡಬೇಕು ಎಂದು ಇದೇ ವೇಳೆ ತಿಳಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ :ರೈಲ್ವೆಯಲ್ಲಿ 1,003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Jobs Alert

Share. Facebook Twitter LinkedIn WhatsApp Email

Related Posts

ಸಾಗರ ಜಿಲ್ಲಾ ಹೋರಾಟಕ್ಕೆ ಬೆಂಬಲ ಘೋಷಿಸಿದ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್

13/09/2025 10:08 PM2 Mins Read

ರಾಜ್ಯದ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಸಚಿವ ಈಶ್ವರ್ ಖಂಡ್ರೆ ಗುಡ್ ನ್ಯೂಸ್

13/09/2025 8:52 PM1 Min Read

ಸ್ಥಳೀಯರೊಂದಿಗೆ ಚರ್ಚಿಸಿ ಆನೆ ವಿಹಾರಧಾಮ ಸ್ಥಾಪನೆ: ಅರಣ್ಯ ಸಚಿವ ಈಶ್ವರ ಖಂಡ್ರೆ

13/09/2025 8:45 PM2 Mins Read
Recent News

ಸಾಗರ ಜಿಲ್ಲಾ ಹೋರಾಟಕ್ಕೆ ಬೆಂಬಲ ಘೋಷಿಸಿದ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್

13/09/2025 10:08 PM

ಸಿದ್ಧತೆ ಆರಂಭಿಸಿ, ವಿಶ್ವ ಶಕ್ತಿಗಳು ಪಾಕ್’ನಲ್ಲಿ ಒಟ್ಟುಗೂಡಲಿವೆ ; 2027ರ ‘SCO ಶೃಂಗಸಭೆ’ ಆಯೋಜಿಸುವುದಾಗಿ ‘ಷರೀಫ್’ ಘೋಷಣೆ

13/09/2025 9:41 PM

VIDEO : ‘ಕೆಲವ್ರು ಹಸುವನ್ನ ಪ್ರಾಣಿ ಎಂದು ಪರಿಗಣಿಸೋಲ್ಲ’ ; ಪ್ರಾಣಿ ಪ್ರಿಯರ ಕುರಿತು ‘ಪ್ರಧಾನಿ ಮೋದಿ’ ಹಾಸ್ಯಮಯ ಹೇಳಿಕೆ ವೈರಲ್

13/09/2025 9:25 PM

BREAKING: ವೈಷ್ಣೋದೇವಿ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತ | Vaishno Devi Yatra

13/09/2025 9:15 PM
State News
KARNATAKA

ಸಾಗರ ಜಿಲ್ಲಾ ಹೋರಾಟಕ್ಕೆ ಬೆಂಬಲ ಘೋಷಿಸಿದ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಯಾಸ್ ಅಹಮದ್

By kannadanewsnow0913/09/2025 10:08 PM KARNATAKA 2 Mins Read

ಶಿವಮೊಗ್ಗ: ಸಾಗರ ತಾಲ್ಲೂಕನ್ನು ಜಿಲ್ಲೆಯಾಗಿ ಮಾಡಬೇಕು ಎನ್ನುವ ಹೋರಾಟ ತೀವ್ರಗೊಂಡಿದೆ. ಈ ಸಾಗರ ಜಿಲ್ಲಾ ಹೋರಾಟಕ್ಕೆ ಸೊರಬ ತಾಲ್ಲೂಕಿನ ದೂಗೂರು…

ರಾಜ್ಯದ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಸಚಿವ ಈಶ್ವರ್ ಖಂಡ್ರೆ ಗುಡ್ ನ್ಯೂಸ್

13/09/2025 8:52 PM

ಸ್ಥಳೀಯರೊಂದಿಗೆ ಚರ್ಚಿಸಿ ಆನೆ ವಿಹಾರಧಾಮ ಸ್ಥಾಪನೆ: ಅರಣ್ಯ ಸಚಿವ ಈಶ್ವರ ಖಂಡ್ರೆ

13/09/2025 8:45 PM

ಧರ್ಮಸ್ಥಳ ಪ್ರಕರಣದ ಹಿಂದೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಕೈವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ

13/09/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.