Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಳ್ಳಂಬೆಳಿಗ್ಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಭೂಕಂಪ | Earthquake

21/11/2025 7:45 AM

ರೈತರೇ ನಿಮ್ಮ ಖಾತೆಗೆ `PM ಕಿಸಾನ್’ ಯೋಜನೆ ಹಣ ಬಂದಿಲ್ವಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ.!

21/11/2025 7:44 AM

BREAKING : ಚಿಕ್ಕಮಗಳೂರಿನಲ್ಲಿ 5 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ : ಮೃತದೇಹ ಪತ್ತೆ.!

21/11/2025 7:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ : ಸರ್ಕಾರದಿಂದ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ : ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow5710/03/2025 8:37 AM

ಬೆಂಗಳೂರು : 2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನಗೊಳಿಸಿ ವಿತರಣೆ ಮಾಡಿರುವ ಸಂಬಂಧ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

2024-25 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಪಿ.ಎಂ.ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆಯಡಿ PAB ಅನುಮೋದನೆಯಂತೆ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8 ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸಂಬಂಧಿಸಿದಂತೆ ಕೇಂದ್ರದ ಪಾಲಿನ ಅನುದಾನ ರೂ.2958.87 ಲಕ್ಷಗಳು ಸಂವಾದಿ ರಾಜ್ಯದ ಪಾಲಿನ ಅನುದಾನ ರೂ 1742.74 ಲಕ್ಷಗಳು ಹಾಗೂ ರಾಜ್ಯದ ಹೆಚ್ಚುವರಿ ಅನುದಾನ (Top-up) ರೂ.2692.17 ಲಕ್ಷಗಳು ಸೇರಿ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿರುತ್ತದೆ.

ಉಲ್ಲೇಖಿತ (3) ರ ಆದೇಶದಂತೆ ಜಿಲ್ಲಾ ಮತ್ತು ತಾಲ್ಲೂಕುವಾರು ಈಗಾಗಲೇ ಸಲ್ಲಿಸಿರುವ ಅನುದಾನ ಬೇಡಿಕೆ ಮತ್ತು ಹಂಚಿಕೆ ಪಟ್ಟಿಯಂತೆ ಲೆಕ್ಕ ಶೀರ್ಷಿಕವಾರು ಈ ಕಳಂಕಂಡಂತೆ ಅನುದಾನ ನಿಗದಿಪಡಿಸಿದ್ದು ಬಿಡುಗಡೆಗೊಳಿಸಿ ಬಳಸುವಂತೆ ಸೂಚಿಸಿದೆ.

2. ಕ್ರಮ ಸಂಖ್ಯೆ:01ರ (ಅ) (ಆ) (ಇ) ರಲ್ಲಿ ಬಿಡುಗಡೆ ಮಾಡಿರುವ ಅನುದಾನವನ್ನು ಯೋಜನೆಯ SNA ಖಾತೆಯಡಿಯಲ್ಲಿ PFMS ಮೂಲಕ ನಿರ್ವಹಿಸುವಂತೆ ಉಲ್ಲೇಖಿತ ಆದೇಶದಲ್ಲಿ ಸೂಚನೆ ಇರುವುದರಿಂದ ಕೆಳಕಂಡ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿರುತ್ತದೆ.

(ಅ) ಪಿಎಂ ಪೋಷಣ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಹಂತದ ಅನುಷ್ಠಾನಾಧಿಕಾರಿಗಳ DDO ಕೋಡ್’ ಗೆ ಬೇಡಿಕೆಯನ್ನು ಆಧರಿಸಿ Drawing Limits ನ್ನು SNA PEMS ಖಾತೆಯಲ್ಲಿ ನಿಗದಿಪಡಿಸುವ ಪ್ರಕ್ರಿಯೆಯನ್ನು ರಾಜ್ಯ ಹಂತದಲ್ಲಿ ಕೈಗೊಂಡಿರುತ್ತದೆ.

(ಆ) ಸದರಿ ಅನುದಾನದಡಿ ಪ್ರಸ್ತುತ ಸಾಲಿನಲ್ಲಿ ಬಿಡುಗಡೆಗೊಳಿಸಿರುವ ಮೊದಲನೇ ಎರಡನೇ ತ್ರೈಮಾಸಿಕ ಅವಧಿಗೆ ಮತ್ತು ಬಿಡುಗಡೆಗೊಳಿಸುವ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಅನುದಾನದಲ್ಲಿ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬಿಸಿಯೂಟ ವಿತರಣೆ ಮಾಡಿರುವ ಕೇಂದ್ರ ಶಾಲೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಮಾನದಂಡಗಳಂತೆ ವೆಚ್ಚ ಭರಿಸಲು ಸೂಚಿಸಿದೆ.

1) 1 ರಿಂದ 8ನೇ ತರಗತಿ ಮಕ್ಕಳ ಆಹಾರ ಧಾನ್ಯಗಳ ವೆಚ್ಚ.

2) 1 ರಿಂದ 8ನೇ ತರಗತಿ ಮಕ್ಕಳ ಆಹಾರ ಧಾನ್ಯಗಳ ಸಾಗಾಣಿಕಾ ವೆಚ್ಚ.

3) 1 ರಿಂದ 8ನೇ ತರಗತಿ ಮಕ್ಕಳ ಪರಿವರ್ತನಾ ವೆಚ್ಚ. (ಹಿಂದೆ ಚಾಲ್ತಿಯಲ್ಲಿದ್ದ ಏಪ್ರಿಲ್ – ಮೇ 2024 ರಲ್ಲಿನ ಅಡುಗೆ ತಯಾರಿಕಾ ವೆಚ್ಚದ ದರಗಳಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನಕ್ಕೆ 1 ರಿಂದ 5 ನೇ ತರಗತಿವರೆಗೆ ರೂ 5.45 ಮತ್ತು 6 ರಿಂದ 8 ನೇ ತರಗತಿವರೆಗೆ ರೂ.8.17 ರಂತೆ)

4) ಅಡುಗೆ ಸಿಬ್ಬಂದಿ ಸಂಭಾವನೆ ಪಾವತಿ – ಅಡುಗೆ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದ ಅಡುಗೆ ಸಿಬ್ಬಂದಿ ಅವರ ದೃಢೀಕೃತ ಹಾಜರಾತಿ ವಹಿಯನ್ನು ಆಧರಿಸಿ, ಏಪ್ರಿಲ್ 2024 ಮತ್ತು ಮೇ 2024 ತಿಂಗಳ ಅವಧಿಗೆ ಪರಿಶೀಲಿಸಿ ನಿಯಮಾನುಸಾರ ಗೌರವಧನವನ್ನು ತಾಲ್ಲೂಕು ಪಂಚಾಯಿತಿಗಳಿಂದ ಬಿಡುಗಡೆಗೊಳಿಸಿ ಅವರ ಖಾತೆಗೆ ಜಮಾಗೊಳಿಸುವುದು ಮತ್ತು ಲೆಕ್ಕ ವಿವರಗಳನ್ನು ನಿರ್ವಹಿಸುವುದು. ಅಡುಗೆ ಸಿಬ್ಬಂದಿಗಳ ಹಾಜರಾತಿ ವಹಿಯನ್ನು ಬಿಸಿಯೂಟ ವಿತರಿಸಿದ ಕೇಂದ್ರ ಶಾಲೆಯ ಮುಖ್ಯ ಶಿಕ್ಷಕರು / ನೋಡಲ್ ಶಿಕ್ಷಕರು ಹಾಗೂ ಸಂಬಂಧಿಸಿದ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು ಪರೀಶಿಲಿಸಿ ದೃಢೀಕರಣ ಸಹಿ ಮಾಡಿರಬೇಕು. ಈ ಧೃಢೀಕೃತ ದಾಖಲೆಯನ್ನು ಆಧರಿಸಿ ಗೌರವಧನವನ್ನು ಅರ್ಹರಾದ ಅಡುಗೆ ಸಿಬ್ಬಂದಿಗಳಿಗೆ ಯಾವುದೇ ವಿಳಂಬ ಮಾಡದೇ ಪಾವತಿಸುವುದು.

5) ಸ್ವಯಂ ಸೇವಾ ಸಂಸ್ಥೆಗಳು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಬಿಸಿಯೂಟ ವಿತರಣೆಯ ಶಾಲಾ ಕೇಂದ್ರಗಳಿಗೆ ಬಿಸಿಯೂಟ ವಿತರಿಸಿದ ದಿನಗಳಿಗೆ ಮತ್ತು ಬಿಸಿಯೂಟ ಸ್ವೀಕರಿಸಿದ ಫಲಾನುಭವಿ ಮಕ್ಕಳ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ದೃಢೀಕೃತ ದಾಖಲೆಗಳಂತೆ ಸರಬರಾಜುಗೊಳಿಸಿದ ಬಿಸಿಯೂಟಗಳಿಗೆ ಅನುಗುಣವಾಗಿ ಸಿದ್ಧಪಡಿಸಿ ಸಲ್ಲಿಸಿದ ಅಡುಗೆ ತಯಾರಿಕಾ ವೆಚ್ಚದ ಬಿಲ್ಲುಗಳನ್ನು ಆಯಾ ಶಾಲಾ ಕೇಂದ್ರಗಳ ಮುಖ್ಯಸ್ಥರಿಂದ/ನೋಡಲ್ ಶಿಕ್ಷಕರಿಂದ ದೃಢೀಕರಿಸಿಕೊಂಡು ತಾಲ್ಲೂಕು ಪಂಚಾಯಿತಿಗಳಿಗೆ ಸಲ್ಲಿಸಿ ಸದರಿ ವೆಚ್ಚಕ್ಕೆ ಹಣ ಪಾವತಿ ಪಡೆದುಕೊಳ್ಳುವುದು. ಸ್ವಯಂ ಸೇವಾ ಸಂಸ್ಥೆಯವರು ಸಲ್ಲಿಸುವ ಬಿಲ್ಲುಗಳು ಆಯಾ ಶಾಲಾ ಅಡುಗೆ ಕೇಂದ್ರಗಳ ಮುಖ್ಯ ಶಿಕ್ಷಕರು/ನೋಡಲ್ ಶಿಕ್ಷಕರು ಅಲ್ಲದೆ ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯತ್ ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಹಾಗೂ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರ ದೃಢೀಕರಣದೊಂದಿಗೆ ಬಿಲ್ಲು ಪಾವತಿಗಾಗಿ ಸಲ್ಲಿಸಬೇಕು. ಈ ಬಿಲ್ಲುಗಳಲ್ಲಿ ಹಿಂದೆ ಚಾಲ್ತಿಯಲ್ಲಿದ್ದ (ಏಪ್ರಿಲ್ – ಮೇ 2024 ರ ಅವಧಿಯಲ್ಲಿ) ಅಡುಗೆ ತಯಾರಿಕಾ ವೆಚ್ಚದ ದರಗಳಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನಕ್ಕೆ 1 ರಿಂದ 5 ನೇ ತರಗತಿವರೆಗೆ ರೂ 5.45 ಮತ್ತು 6 ರಿಂದ 8 ನೇ ತರಗತಿವರೆಗೆ ರೂ. 8.17 ರಂತೆ)

6) 2024 ರ ಏಪ್ರಿಲ್ – ಮೇ ತಿಂಗಳ ಬೇಸಿಗೆ ಅವಧಿಯ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶಾಲಾ ಕೇಂದ್ರಗಳಲ್ಲಿ 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿತರಿಸಿದ ಬಿಸಿಯೂಟಕ್ಕಾಗಿ ಬಳಸಲಾದ 1 ರಿಂದ 8 ನೇ ತರಗತಿವರೆಗಿನ ಆಹಾರ ಧಾನ್ಯಗಳನ್ನು ಭಾರತ ಆಹಾರ ನಿಗಮದಿಂದ ಸ್ವೀಕರಿಸಿದ್ದಲ್ಲಿ ಮೊದಲ ತ್ರೈಮಾಸಿಕ ಅವಧಿಯ FCI ಬಿಲ್ಲುಗಳು ಬಾಕಿ ಇದ್ದಲ್ಲಿ (Outstanding Bills) ಬಿಡುಗಡೆಗೊಳಿಸಲಾದ ಈ ಅನುದಾನದಲ್ಲಿ ವೆಚ್ಚ ಭರಿಸುವಂತೆ ಸೂಚಿಸಿರುತ್ತದೆ.

7) ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಏಪ್ರಿಲ್ ಮತ್ತು ಮೇ 2024 ರಲ್ಲಿ ತೆರೆಯಲಾಗಿದ್ದ ಬಿಸಿಯೂಟ ವಿತರಣಾ ಶಾಲಾ ಕೇಂದ್ರಗಳು ಎಷ್ಟು ದಿನ ನಡೆದಿರುತ್ತವೆ ಹಾಗೂ ಎಷ್ಟು ಫಲಾನುಭವಿ ಮಕ್ಕಳು 1 ರಿಂದ 8 ನೇ ತರಗತಿ ಬಿಸಿಯೂಟವನ್ನು ಸ್ವೀಕರಿಸಿರುತ್ತಾರೆ ಹಾಗೂ ಹಾಜರಾದ ಶಾಲಾ ಮುಖ್ಯ ಶಿಕ್ಷಕರು / ನೋಡಲ್ ಶಿಕ್ಷಕರು ಹಾಗೂ ಹಾಜರಾಗಿ ಕೆಲಸ ನಿರ್ವಹಿಸಿದ ಅಡುಗೆ ಸಿಬ್ಬಂದಿಗಳ ಸಂಖ್ಯೆ ಮತ್ತು ವಿವರಗಳ ಸಂಖ್ಯೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಜಂಟಿಯಾಗಿ ಪರಿಶೀಲಿಸಿ ಸಂಬಂಧಿಸಿದ ಕ್ಲಸ್ಟರ್ ಹಂತದಲ್ಲಿ CRP/ECO ರವರಿಂದ ದೃಢೀಕೃತ ಮಾಹಿತಿ ಪಡೆದು ದಾಖಲೆಗಳನ್ನು ಹೊಂದಿರಬೇಕು ಹಾಗೂ ಈ ದಾಖಲೆಗಳನ್ನು ಆಧರಿಸಿ, ಖಾತ್ರಿಪಡಿಸಿಕೊಂಡು ಬಿಡುಗಡೆ ಮಾಡಿರುವ ಅನುದಾನದ ವೆಚ್ಚ ಭರಿಸತಕ್ಕದ್ದು ಹಾಗೂ ತಾಲ್ಲೂಕು ಪಂಚಾಯಿತಿ ಹಂತದಲ್ಲಿ ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಸೂಕ್ತ ದಾಖಲೆಗಳೊಂದಿಗೆ ಅನುದಾನದ ವೆಚ್ಚ ವಿವರಗಳನ್ನು ನಿರ್ವಹಿಸುವುದು.

8) ಬರಗಾಲ ಪೀಡಿತ 223 ತಾಲ್ಲೂಕುಗಳ ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಇವರು ಖುದ್ದಾಗಿ ಬರಗಾಲ ಪೀಡಿತ ತಾಲ್ಲೂಕುಗಳಲ್ಲಿ ಅನುದಾನ ಬಿಡುಗಡೆ, ಬಳಕೆ ಮತ್ತು ಸಂಬಂಧಿಸಿದ ಲೆಕ್ಕ ವಿವರಗಳ ಬಗ್ಗೆ ಸೂಕ್ತ ಮೇಲ್ಪಚಾರಣೆ ಕೈಗೊಂಡು ಯಾವುದೇ ತಕರಾರು ಬರದಂತೆ ಅಗತ್ಯ ಕ್ರಮವಹಿಸಿ ಅನುದಾನ ಪೂರ್ಣ ಬಳಕೆಯ ವರದಿಯನ್ನು ರಾಜ್ಯ ಕಛೇರಿಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಿದೆ.

BIG NEWS: Hot meals for school children in the state even during summer vacation: Important order from the government!
Share. Facebook Twitter LinkedIn WhatsApp Email

Related Posts

ರೈತರೇ ನಿಮ್ಮ ಖಾತೆಗೆ `PM ಕಿಸಾನ್’ ಯೋಜನೆ ಹಣ ಬಂದಿಲ್ವಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ.!

21/11/2025 7:44 AM2 Mins Read

BREAKING : ಚಿಕ್ಕಮಗಳೂರಿನಲ್ಲಿ 5 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ : ಮೃತದೇಹ ಪತ್ತೆ.!

21/11/2025 7:40 AM1 Min Read

SHOCKING : ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ‘ಹೃದಯಾಘಾತ’ : ಯಕ್ಷಗಾನ ಕಲಾವಿದನ ದುರಂತ ಸಾವು!

21/11/2025 7:28 AM1 Min Read
Recent News

ಬೆಳ್ಳಂಬೆಳಿಗ್ಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಭೂಕಂಪ | Earthquake

21/11/2025 7:45 AM

ರೈತರೇ ನಿಮ್ಮ ಖಾತೆಗೆ `PM ಕಿಸಾನ್’ ಯೋಜನೆ ಹಣ ಬಂದಿಲ್ವಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ.!

21/11/2025 7:44 AM

BREAKING : ಚಿಕ್ಕಮಗಳೂರಿನಲ್ಲಿ 5 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ : ಮೃತದೇಹ ಪತ್ತೆ.!

21/11/2025 7:40 AM

SHOCKING : ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ‘ಹೃದಯಾಘಾತ’ : ಯಕ್ಷಗಾನ ಕಲಾವಿದನ ದುರಂತ ಸಾವು!

21/11/2025 7:28 AM
State News
KARNATAKA

ರೈತರೇ ನಿಮ್ಮ ಖಾತೆಗೆ `PM ಕಿಸಾನ್’ ಯೋಜನೆ ಹಣ ಬಂದಿಲ್ವಾ? ಜಸ್ಟ್ ಹೀಗೆ ಚೆಕ್ ಮಾಡಿಕೊಳ್ಳಿ.!

By kannadanewsnow5721/11/2025 7:44 AM KARNATAKA 2 Mins Read

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ 18,000 ಕೋಟಿ ರೂಪಾಯಿಗಳ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ…

BREAKING : ಚಿಕ್ಕಮಗಳೂರಿನಲ್ಲಿ 5 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ : ಮೃತದೇಹ ಪತ್ತೆ.!

21/11/2025 7:40 AM

SHOCKING : ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ‘ಹೃದಯಾಘಾತ’ : ಯಕ್ಷಗಾನ ಕಲಾವಿದನ ದುರಂತ ಸಾವು!

21/11/2025 7:28 AM

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

21/11/2025 7:18 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.