Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ನೇಪಾಳದ ಹಂಗಾಮಿ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣವಚನ ಸ್ವೀಕಾರ

12/09/2025 9:44 PM

BREAKING : ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾ. ‘ಸುಶೀಲ್ ಕರ್ಕಿ’ ಪ್ರಮಾಣ ವಚನ ಸ್ವೀಕಾರ

12/09/2025 9:43 PM

BREAKING: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು ನಾಲ್ವರು ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

12/09/2025 9:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಬೇಸಿಗೆ ರಜೆಯಲ್ಲೂ ಬಿಸಿಯೂಟಕ್ಕೆ ಅನುದಾನ ಬಿಡುಗಡೆ
KARNATAKA

GOOD NEWS: ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಬೇಸಿಗೆ ರಜೆಯಲ್ಲೂ ಬಿಸಿಯೂಟಕ್ಕೆ ಅನುದಾನ ಬಿಡುಗಡೆ

By kannadanewsnow0907/03/2025 5:35 AM

ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಈ ಬಾರಿ ಬೇಸಿಗೆ ರಜೆಯಲ್ಲೂ ಬಿಸಿಯೂಟ ನೀಡುವುದಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು,  2024-25 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಪಿ.ಎಂ.ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆಯಡಿ PAB ಅನುಮೋದನೆಯಂತೆ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8 ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸಂಬಂಧಿಸಿದಂತೆ ಕೇಂದ್ರದ ಪಾಲಿನ ಅನುದಾನ ರೂ.2958.87 ಲಕ್ಷಗಳು ಸಂವಾದಿ ರಾಜ್ಯದ ಪಾಲಿನ ಅನುದಾನ ರೂ 1742.74 ಲಕ್ಷಗಳು ಹಾಗೂ ರಾಜ್ಯದ ಹೆಚ್ಚುವರಿ ಅನುದಾನ (Top-up) ರೂ.2692.17 ಲಕ್ಷಗಳು ಸೇರಿ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.

ಉಲ್ಲೇಖಿತ (3) ರ ಆದೇಶದಂತೆ ಜಿಲ್ಲಾ ಮತ್ತು ತಾಲ್ಲೂಕುವಾರು ಈಗಾಗಲೇ ಸಲ್ಲಿಸಿರುವ ಅನುದಾನ ಬೇಡಿಕೆ ಮತ್ತು ಹಂಚಿಕೆ ಪಟ್ಟಿಯಂತೆ ಲೆಕ್ಕ ಶೀರ್ಷಿಕವಾರು ಈ ಕೆಳಂಕಂಡಂತೆ ಅನುದಾನ ನಿಗದಿಪಡಿಸಿದ್ದು ಬಿಡುಗಡೆಗೊಳಿಸಿ ಬಳಸುವಂತೆ ಸೂಚಿಸಿದ್ದಾರೆ.

2. ಕ್ರಮ ಸಂಖ್ಯೆ:01ರ (ಅ) (ಆ) (ಇ) ರಲ್ಲಿ ಬಿಡುಗಡೆ ಮಾಡಿರುವ ಅನುದಾನವನ್ನು ಯೋಜನೆಯ SNA ಖಾತೆಯಡಿಯಲ್ಲಿ PFMS ಮೂಲಕ ನಿರ್ವಹಿಸುವಂತೆ ಉಲ್ಲೇಖಿತ ಆದೇಶದಲ್ಲಿ ಸೂಚನೆ ಇರುವುದರಿಂದ ಕೆಳಕಂಡ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿರುತ್ತದೆ.

(ಅ) ಪಿಎಂ ಪೋಷಣ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಹಂತದ ಅನುಷ್ಠಾನಾಧಿಕಾರಿಗಳ DDO ಕೋಡ್’ಗೆ ಬೇಡಿಕೆಯನ್ನು ಆಧರಿಸಿ Drawing Limits ನ್ನು SNA PEMS ಖಾತೆಯಲ್ಲಿ ನಿಗದಿಪಡಿಸುವ ಪ್ರಕ್ರಿಯೆಯನ್ನು ರಾಜ್ಯ ಹಂತದಲ್ಲಿ ಕೈಗೊಂಡಿರುತ್ತದೆ.

(ಆ) ಸದರಿ ಅನುದಾನದಡಿ ಪ್ರಸ್ತುತ ಸಾಲಿನಲ್ಲಿ ಬಿಡುಗಡೆಗೊಳಿಸಿರುವ ಮೊದಲನೇ, ಎರಡನೇ ತ್ರೈಮಾಸಿಕ ಅವಧಿಗೆ ಮತ್ತು ಬಿಡುಗಡೆಗೊಳಿಸುವ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಅನುದಾನದಲ್ಲಿ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬಿಸಿಯೂಟ ವಿತರಣೆ ಮಾಡಿರುವ ಕೇಂದ್ರ ಶಾಲೆಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಮಾನದಂಡಗಳಂತೆ ವೆಚ್ಚ ಭರಿಸಲು ಸೂಚಿಸಿದೆ.

1) 1ರಿಂದ 8ನೇ ತರಗತಿ ಮಕ್ಕಳ ಆಹಾರ ಧಾನ್ಯಗಳ ವೆಚ್ಚ
2) 1ರಿಂದ 8ನೇ ತರಗತಿ ಮಕ್ಕಳ ಆಹಾರ ಧಾನ್ಯಗಳ ಸಾಗಾಣಿಕಾ ವೆಚ್ಚ

3) 1ರಿಂದ 8ನೇ ತರಗತಿ ಮಕ್ಕಳ ಪರಿವರ್ತನಾ ವೆಚ್ಚ. (ಹಿಂದೆ ಚಾಲ್ತಿಯಲ್ಲಿದ್ದ ಏಪ್ರಿಲ್ – ಮೇ 2024 ರಲ್ಲಿನ ಅಡುಗೆ ತಯಾರಿಕಾ ವೆಚ್ಚದ ದರಗಳಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನಕ್ಕೆ 1 ರಿಂದ 5 ನೇ ತರಗತಿವರೆಗೆ ರೂ 5.45 ಮತ್ತು 6 ರಿಂದ 8 ನೇ ತರಗತಿವರೆಗೆ ರೂ. 8.17 ರಂತೆ)

4) ಅಡುಗೆ ಸಿಬ್ಬಂದಿ ಸಂಭಾವನೆ ಪಾವತಿ – ಅಡುಗೆ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದ ಅಡುಗೆ ಸಿಬ್ಬಂದಿ ಅವರ ದೃಢೀಕೃತ ಹಾಜರಾತಿ ವಹಿಯನ್ನು ಆಧರಿಸಿ, ಏಪ್ರಿಲ್ 2024 ಮತ್ತು ಮೇ 2024 ತಿಂಗಳ ಅವಧಿಗೆ ಪರಿಶೀಲಿಸಿ ನಿಯಮಾನುಸಾರ ಗೌರವಧನವನ್ನು ತಾಲ್ಲೂಕು ಪಂಚಾಯಿತಿಗಳಿಂದ ಬಿಡುಗಡೆಗೊಳಿಸಿ ಅವರ ಖಾತೆಗೆ ಜಮಾಗೊಳಿಸುವುದು ಮತ್ತು ಲೆಕ್ಕ ವಿವರಗಳನ್ನು ನಿರ್ವಹಿಸುವುದು. ಅಡುಗೆ ಸಿಬ್ಬಂದಿಗಳ ಹಾಜರಾತಿ ವಹಿಯನ್ನು ಬಿಸಿಯೂಟ ವಿತರಿಸಿದ ಕೇಂದ್ರ ಶಾಲೆಯ ಮುಖ್ಯ ಶಿಕ್ಷಕರು / ನೋಡಲ್ ಶಿಕ್ಷಕರು ಹಾಗೂ ಸಂಬಂಧಿಸಿದ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರು ಪರೀಶಿಲಿಸಿ ದೃಢೀಕರಣ ಸಹಿ ಮಾಡಿರಬೇಕು. ಈ ಧೃಢೀಕೃತ ದಾಖಲೆಯನ್ನು ಆಧರಿಸಿ ಗೌರವಧನವನ್ನು ಅರ್ಹರಾದ ಅಡುಗೆ ಸಿಬ್ಬಂದಿಗಳಿಗೆ ಯಾವುದೇ ವಿಳಂಬ ಮಾಡದೇ ಪಾವತಿಸುವುದು.

5) ಸ್ವಯಂ ಸೇವಾ ಸಂಸ್ಥೆಗಳು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಬಿಸಿಯೂಟ ವಿತರಣೆಯ ಶಾಲಾ ಕೇಂದ್ರಗಳಿಗೆ ಬಿಸಿಯೂಟ ವಿತರಿಸಿದ ದಿನಗಳಿಗೆ ಮತ್ತು ಬಿಸಿಯೂಟ ಸ್ವೀಕರಿಸಿದ ಫಲಾನುಭವಿ ಮಕ್ಕಳ ಹಾಜರಾತಿ ಸಂಖ್ಯೆಗೆ ಅನುಗುಣವಾಗಿ ದೃಢೀಕೃತ ದಾಖಲೆಗಳಂತೆ ಸರಬರಾಜುಗೊಳಿಸಿದ ಬಿಸಿಯೂಟಗಳಿಗೆ ಅನುಗುಣವಾಗಿ ಸಿದ್ಧಪಡಿಸಿ ಸಲ್ಲಿಸಿದ ಅಡುಗೆ ತಯಾರಿಕಾ ವೆಚ್ಚದ ಬಿಲ್ಲುಗಳನ್ನು ಆಯಾ ಶಾಲಾ ಕೇಂದ್ರಗಳ ಮುಖ್ಯಸ್ಥರಿಂದ/ನೋಡಲ್ ಶಿಕ್ಷಕರಿಂದ ದೃಢೀಕರಿಸಿಕೊಂಡು ತಾಲ್ಲೂಕು ಪಂಚಾಯಿತಿಗಳಿಗೆ ಸಲ್ಲಿಸಿ ಸದರಿ ವೆಚ್ಚಕ್ಕೆ ಹಣ ಪಾವತಿ ಪಡೆದುಕೊಳ್ಳುವುದು. ಸ್ವಯಂ ಸೇವಾ ಸಂಸ್ಥೆಯವರು ಸಲ್ಲಿಸುವ ಬಿಲ್ಲುಗಳು ಆಯಾ ಶಾಲಾ ಅಡುಗೆ ಕೇಂದ್ರಗಳ ಮುಖ್ಯ ಶಿಕ್ಷಕರು/ನೋಡಲ್ ಶಿಕ್ಷಕರು ಅಲ್ಲದೆ ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯತ್ ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಹಾಗೂ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರ ದೃಢೀಕರಣದೊಂದಿಗೆ ಬಿಲ್ಲು ಪಾವತಿಗಾಗಿ ಸಲ್ಲಿಸಬೇಕು. ಈ ಬಿಲ್ಲುಗಳಲ್ಲಿ ಹಿಂದೆ ಚಾಲ್ತಿಯಲ್ಲಿದ್ದ (ಏಪ್ರಿಲ್ – ಮೇ 2024 ರ ಅವಧಿಯಲ್ಲಿ) ಅಡುಗೆ ತಯಾರಿಕಾ ವೆಚ್ಚದ ದರಗಳಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನಕ್ಕೆ 1 ರಿಂದ 5 ನೇ ತರಗತಿವರೆಗೆ ರೂ 5.45 ಮತ್ತು 6 ರಿಂದ 8 ನೇ ತರಗತಿವರೆಗೆ ರೂ. 8.17 ರಂತೆ)

6) 2024 ರ ಏಪ್ರಿಲ್ – ಮೇ ತಿಂಗಳ ಬೇಸಿಗೆ ಅವಧಿಯ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶಾಲಾ ಕೇಂದ್ರಗಳಲ್ಲಿ 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿತರಿಸಿದ ಬಿಸಿಯೂಟಕ್ಕಾಗಿ ಬಳಸಲಾದ 1 ರಿಂದ 8 ನೇ ತರಗತಿವರೆಗಿನ ಆಹಾರ ಧಾನ್ಯಗಳನ್ನು ಭಾರತ ಆಹಾರ ನಿಗಮದಿಂದ ಸ್ವೀಕರಿಸಿದಲ್ಲಿ ಮೊದಲ ತ್ರೈಮಾಸಿಕ ಅವಧಿಯ FCI ಬಿಲ್ಲುಗಳು ಬಾಕಿ ಇದ್ದಲ್ಲಿ (Outstanding Bills) ಬಿಡುಗಡೆಗೊಳಿಸಲಾದ ಈ ಅನುದಾನದಲ್ಲಿ ವೆಚ್ಚ ಭರಿಸುವಂತೆ ಸೂಚಿಸಿರುತ್ತದೆ.

7) ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಏಪ್ರಿಲ್ ಮತ್ತು ಮೇ 2024 ರಲ್ಲಿ ತೆರೆಯಲಾಗಿದ್ದ ಬಿಸಿಯೂಟ ವಿತರಣಾ ಶಾಲಾ ಕೇಂದ್ರಗಳು ಎಷ್ಟು ದಿನ ನಡೆದಿರುತ್ತವೆ ಹಾಗೂ ಎಷ್ಟು ಫಲಾನುಭವಿ ಮಕ್ಕಳು 1 ರಿಂದ 8 ನೇ ತರಗತಿ ಬಿಸಿಯೂಟವನ್ನು ಸ್ವೀಕರಿಸಿರುತ್ತಾರೆ ಹಾಗೂ ಹಾಜರಾದ ಶಾಲಾ ಮುಖ್ಯ ಶಿಕ್ಷಕರು / ನೋಡಲ್ ಶಿಕ್ಷಕರು ಹಾಗೂ ಹಾಜರಾಗಿ ಕೆಲಸ ನಿರ್ವಹಿಸಿದ ಅಡುಗೆ ಸಿಬ್ಬಂದಿಗಳ ಸಂಖ್ಯೆ ಮತ್ತು ವಿವರಗಳ ಸಂಖ್ಯೆ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಜಂಟಿಯಾಗಿ ಪರಿಶೀಲಿಸಿ ಸಂಬಂಧಿಸಿದ ಕ್ಲಸ್ಟರ್ ಹಂತದಲ್ಲಿ CRP/ECO ರವರಿಂದ ದೃಢೀಕೃತ ಮಾಹಿತಿ ಪಡೆದು ದಾಖಲೆಗಳನ್ನು ಹೊಂದಿರಬೇಕು ಹಾಗೂ ಈ ದಾಖಲೆಗಳನ್ನು ಆಧರಿಸಿ, ಖಾತ್ರಿಪಡಿಸಿಕೊಂಡು ಬಿಡುಗಡೆ ಮಾಡಿರುವ ಅನುದಾನದ ವೆಚ್ಚ ಭರಿಸತಕ್ಕದ್ದು ಹಾಗೂ ತಾಲ್ಲೂಕು ಪಂಚಾಯಿತಿ ಹಂತದಲ್ಲಿ ಪಿಎಂ ಪೋಷಣ್ ಸಹಾಯಕ ನಿರ್ದೇಶಕರು ಸೂಕ್ತ ದಾಖಲೆಗಳೊಂದಿಗೆ ಅನುದಾನದ ವೆಚ್ಚ ವಿವರಗಳನ್ನು ನಿರ್ವಹಿಸುವುದು.

8) ಬರಗಾಲ ಪೀಡಿತ 223 ತಾಲ್ಲೂಕುಗಳ ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಇವರು ಖುದ್ದಾಗಿ ಬರಗಾಲ ಪೀಡಿತ ತಾಲ್ಲೂಕುಗಳಲ್ಲಿ ಅನುದಾನ ಬಿಡುಗಡೆ, ಬಳಕೆ ಮತ್ತು ಸಂಬಂಧಿಸಿದ ಲೆಕ್ಕ ವಿವರಗಳ ಬಗ್ಗೆ ಸೂಕ್ತ ಮೇಲ್ವಿಚಾರಣೆ ಕೈಗೊಂಡು ಯಾವುದೇ ತಕರಾರು ಬರದಂತೆ ಅಗತ್ಯ ಕ್ರಮವಹಿಸಿ ಅನುದಾನ ಪೂರ್ಣ ಬಳಕೆಯ ವರದಿಯನ್ನು ರಾಜ್ಯ ಕಛೇರಿಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಿದೆ.

9) ತಾಲ್ಲೂಕು ಪಂಚಾಯತ್ ಹಂತದಲ್ಲಿ ಸದರಿ ಅನುದಾನವನ್ನು ವಿವಿಧ ಬಾಬುಗಳಿಗೆ ವೆಚ್ಚ ಭರಿಸಿರುವ ಲೆಕ್ಕ ವಿವರಗಳು ಮತ್ತು ಸೂಕ್ತ ದಾಖಲೆಗಳೊಂದಿಗೆ ವರದಿಯನ್ನು ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿ ನಂತರ ಈ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಸೂಕ್ತ ಪರಿಶೀಲಿನ ಮತ್ತು ದೃಢೀಕರಣದೊಂದಿಗೆ ರಾಜ್ಯ ಕಛೇರಿಗೆ ಜಿಲ್ಲಾ ಪಂಚಾಯಿತಿಗಳಿಂದ ದಿನಾಂಕ: 31.03.2025 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಶಿಕ್ಷಣಾಧಿಕಾರಿಗಳು ಪಿಎಂ ಪೋಷಣ್ ಇವರಿಗೆ ಕಟ್ಟುನಿಟ್ಟಾಗಿ ಸೂಚಿಸಿದ. ರಾಜ್ಯ ಕಛೇರಿಯಲ್ಲಿ ಜಿಲ್ಲಾವಾರು ಅನುದಾನ ಬಳಕೆಯ ಮಾಹಿತಿಯನ್ನು ಸ್ವೀಕರಿಸಿ ಕ್ರೋಢೀಕರಿಸಿ, ವಿಶ್ಲೇಷಿಸಿ ನಿರ್ದೇಶಕರು, ಪಿಎಂ ಪೋಷಣ್ ಇವರಿಗೆ ವರದಿ ಮಾಡುವ ಜವಾಬ್ದಾರಿಯನ್ನು ನೋಡಲ್ ಅಧಿಕಾರಿಯಾಗಿ ಸಹಾಯಕ ನಿರ್ದೇಶಕರಾದ ಶ್ರೀಮತಿ ಗೀತಾ ರವರು ಇವರೊಂದಿಗೆ ಸಹಾಯಕರಾಗಿ ಶ್ರೀ ಮನೋಜ್ ಪ್ರೈ ಲೆಕ್ಕಾಧೀಕ್ಷಕರು ಇವರನ್ನು ನಿಯೋಜಿಸಿದ್ದು, ಕಾರ್ಯನಿರ್ವಹಿಸುವಂತೆ ಹಾಗೂ ರಾಜ್ಯದ ಅನುದಾನ ಬಳಕೆಯ ಉಪಯೋಗಿತ ಪುಮಾಣ ಪತ್ರವನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.

2024-25 ನೇ ಸಾಲಿನ ಏಪ್ರಿಲ್ – ಮೇ 2024 ರ 223 ತಾಲ್ಲೂಕುಗಳ ಬರಗಾಲ ಪೀಡಿತ ಪ್ರದೇಶದ ವ್ಯಾಪ್ತಿಯ ಬೇಸಿಗೆ ರಜೆ ಅವಧಿಯಲ್ಲಿ ಶಾಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ (1-8) ಬಿಸಿಯೂಟ ವಿತರಣೆ ಮಾಡಿರುವ ವೆಚ್ಚವನ್ನು ಭರಿಸಲು ಬಿಡುಗಡೆ ಮಾಡಲಾದ ಅನುದಾನ ಬಳಕೆ ಕುರಿತಂತೆ SNA ಖಾತೆಯ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ DDO/IA ವಾರು ಜಮೆ ಮಾಡಿರುವ Drawing Limits ಮಾಹಿತಿಯನ್ನು ಅನುಬಂಧ-01 ರಲ್ಲಿ ನಿಗದಿಪಡಿಸಿದ್ದು ಪ್ರತಿ ಲಗತ್ತಿಸಿದೆ. ಅದರಂತೆ ಅನುದಾನ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು ನಾಲ್ವರು ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

12/09/2025 9:32 PM1 Min Read

ಯಾತ್ರಾ ಸ್ಥಳಗಳಿಗೆ ಮೇಕ್‌ ಮೈ ಟ್ರಿಪ್‌ನಲ್ಲಿ ಬುಕ್ಕಿಂಗ್‌ ಪ್ರಮಾಣ ಹೆಚ್ಚಳ

12/09/2025 9:28 PM1 Min Read

BREAKING: ರಾಜ್ಯದಲ್ಲಿ ಗಣೇಶ ಮೆರವಣಿಗೆ ವೇಳೆ ಘೋರ ದುರಂತ: ಹಾಸದನಲ್ಲಿ ಟ್ರಕ್ ಹರಿದು ನಾಲ್ವರು ಸಾವು, ಹಲವರ ಸ್ಥಿತಿ ಗಂಭೀರ

12/09/2025 9:26 PM1 Min Read
Recent News

BREAKING: ನೇಪಾಳದ ಹಂಗಾಮಿ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣವಚನ ಸ್ವೀಕಾರ

12/09/2025 9:44 PM

BREAKING : ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾ. ‘ಸುಶೀಲ್ ಕರ್ಕಿ’ ಪ್ರಮಾಣ ವಚನ ಸ್ವೀಕಾರ

12/09/2025 9:43 PM

BREAKING: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು ನಾಲ್ವರು ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

12/09/2025 9:32 PM

ಯಾತ್ರಾ ಸ್ಥಳಗಳಿಗೆ ಮೇಕ್‌ ಮೈ ಟ್ರಿಪ್‌ನಲ್ಲಿ ಬುಕ್ಕಿಂಗ್‌ ಪ್ರಮಾಣ ಹೆಚ್ಚಳ

12/09/2025 9:28 PM
State News
KARNATAKA

BREAKING: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು ನಾಲ್ವರು ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

By kannadanewsnow0912/09/2025 9:32 PM KARNATAKA 1 Min Read

ಹಾಸನ: ಜಿಲ್ಲೆಯಲ್ಲಿ ಘೋರ ದುರ್ಘಟನೆಯೊಂದು ಸಂಭವಿಸಿದೆ. ಗಣೇಶ ಮೆರವಣಿಗೆ ವೇಳೆ ಟ್ರಕ್ ಹರಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೇ, 20ಕ್ಕೂ ಹೆಚ್ಚು…

ಯಾತ್ರಾ ಸ್ಥಳಗಳಿಗೆ ಮೇಕ್‌ ಮೈ ಟ್ರಿಪ್‌ನಲ್ಲಿ ಬುಕ್ಕಿಂಗ್‌ ಪ್ರಮಾಣ ಹೆಚ್ಚಳ

12/09/2025 9:28 PM

BREAKING: ರಾಜ್ಯದಲ್ಲಿ ಗಣೇಶ ಮೆರವಣಿಗೆ ವೇಳೆ ಘೋರ ದುರಂತ: ಹಾಸದನಲ್ಲಿ ಟ್ರಕ್ ಹರಿದು ನಾಲ್ವರು ಸಾವು, ಹಲವರ ಸ್ಥಿತಿ ಗಂಭೀರ

12/09/2025 9:26 PM

ಸೆ.15ಕ್ಕೆ ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಿಗದಿ

12/09/2025 9:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.