ಹೈದರಾಬಾದ್ : ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ತಲ್ಲಪುಡಿ ಮಂಡಲದ ತಡಿಪುಡಿಯಲ್ಲಿ ಈ ದುರಂತ ಸಂಭವಿಸಿದೆ. ಮಹಾಶಿವರಾತ್ರಿಯಂದು ಗೋದಾವರಿ ನದಿಯಲ್ಲಿ ಸ್ನಾನ ಮಾಡಲು ಹೋದ ಐವರು ಯುವಕರು ನಾಪತ್ತೆಯಾಗಿದ್ದು, ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತೀರ ಈಜುಗಾರರ ಸಹಾಯದಿಂದ ಯುವಕರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.ಸ್ಥಳಕ್ಕೆ ಡಿಎಸ್ಪಿ ದೇವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಬ್ಬ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
ತಿರುಮಲ ಶೆಟ್ಟಿ ಪವನ್ (20),ಪಡಾಲ ಸಾಯಿ (19), ಗರೆ ಆಕಾಶ್ (19), ಪಡಲ ದುರ್ಗಾ ಪ್ರಸಾದ್ (19) ಅನಿಸೆಟ್ಟಿ ಪವನ್ (19) ನಾಪತ್ತೆಯಾಗಿದ್ದು,ಶೋಧ ಕಾರ್ಯಾಚರಣೆ ನಡೆಯುತ್ತಿದೆ.