ಗದಗ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವರು ಆತ್ಮಹತ್ಯೆಗೆ ಕೂಡ ಯತ್ನಿಸಿರುವ ಘಟನೆಗಳು ವರದಿಯಾಗಿವೆ. ಇದೀಗ ಗದಗ ಮತ್ತು ಬೆಟಗೇರಿಯಲ್ಲಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿದ್ದು, ಬಡ್ಡಿ ದಂಧೆಕೊರರ ಮನೆಯ ಮೇಲೆ ದಾಳಿ ಮಾಡಿ ನಗದು ಹಣ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಹೌದು ಗದಗ ಬೆಟಗೇರಿ ಅವಳಿ ನಗರದಲ್ಲಿ ಪೊಲೀಸರಿಂದ ಧಿಡೀರ್ ದಾಳಿ ನಡೆದಿದ್ದು, ಬಡ್ಡಿ ದಂಧೆಕೋರರ ಮನೆಗಳಲ್ಲಿ ನಗದು, ಬಾಂಡ್ ಮತ್ತು ಖಾಲಿ ಚೆಕ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇದೆ ವೇಳೆ ನಗರದ ಸಂಗಮೇಶ್ ದೊಡ್ಡಣ್ಣನವರ ಮನೆಯಲ್ಲಿ 26 ಲಕ್ಷ ರೂಪಾಯಿ ನಗದು, ಖಾಲಿಬಾಂಡ್ ಚೆಕ್ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ರವಿ ಗೌಡ ಮನೆಯಲ್ಲಿ ಚೆಕ್ಬಾಂಡ್ ಹಣ ಎಣಿಸುವ ಮಷೀನ್ ಪತ್ತೆಯಾಗಿದೆ.
ಕೆಲವರು ನೋಂದಣಿ ಮಾಡಿಸಿ ಅವ್ಯವಹಾರ ನಡೆಸುತ್ತಿದ್ದರೆ, ಇನ್ನು ಕೆಲವರು ಅನಧಿಕೃತವಾಗಿ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಧಮ್ಕಿ ಮತ್ತು ಬೆದರಿಕೆ ಹಾಕಿ ಸಾಲ ನೀಡಿದ ಜನರಿಂದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಗದಗ ಹಾಗೂ ಬೆಟಗೇರಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.