ಬೆಂಗಳೂರು : ಬೆಂಗಳೂರಿನಲ್ಲಿ ಆನ್ಲೈನ್ನಲ್ಲಿ ಆಸ್ತಿ ನೋಂದಣಿ ಸಂಬಂಧ ಅಭಿವೃದ್ಧಿಪಡಿಸಿರುವ ಕಾವೇರಿ 2.0 ತಂತ್ರಾಂಶದ ಮೇಲೆ ಹ್ಯಾಕರ್ ಗಳು ಸೈಬರ್ ದಾಳಿ ನಡೆಸಿದ್ದು, ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪನೋಂದಣಿ ಕಚೇರಿಗಳಲ್ಲಿ ಈ 5 ಕಾವೇರಿ 2.0ತ್ರಾಂಶದ ಮುಖಾಂತರ ಸ್ಥಿರಾಸ್ತಿಗಳ ದಸ್ತಾವೇಜು ನೋಂದಣಿ, ಋಣಭಾರ ಪ್ರಮಾಣ ಪತ್ರ (ಇಸಿ), ಸರ್ಟಿಫಿಕೇಟ್ ಕಾಪಿ (ಸಿಸಿ) ಮತ್ತು ಇತರ ಸೇವೆಗಳನ್ನು ನೀಡಲಾಗುತ್ತಿದೆ. ಸೈಬರ್ ವಂಚಕರು ದಾಳಿ ನಡೆಸಿದ್ದು, ಸ್ವಯಂಚಾಲಿತ ಟೂಲ್ಮ ಳನ್ನು ಬಳಸಿ ನಕಲಿ ಖಾತೆಗಳನ್ನು ತೆರೆದು ತಂತ್ರಾಂಶಕ್ಕೆ 7. ಪ್ರವೇಶ ಪಡೆದಿದ್ದರು. ಹೀಗಾಗಿ ಸರ್ವರ್ ಡೌನ್ ಆಗಿತ್ತು. ಸಿಎಂಜಿ ತಜ್ಞರ ತಂಡವು ಪರಿಶೀಲಿಸಿ ದಾಗ ಡಿಡಿಒಎಸ್ ಸೈ ಬರ್ ದಾಳಿ ನಡೆದಿರುವುದು ಗೊತ್ತಾಗಿತ್ತು.
ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ದಯಾನಂದ್ ನೀಡಿದ ದೂರಿನ ಮೇರೆಗೆ ಎಫ್ ಐಆರ್ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.