ಬೆಂಗಳೂರು : ತನ್ನ ಪತ್ನಿಯ ಮೇಲೆ ಕಣ್ಣು ಹಾಕಿದಕ್ಕೆ ವ್ಯಕ್ತಿಯೊಬ್ಬ ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಹಲ್ಲೆಗೋಳಗಾದ ವ್ಯಕ್ತಿಯನ್ನು ಕಿರಣ್ ಎಂದು ತಿಳಿದುಬಂದಿದ್ದು, ಆರೋಪಿ ಅರ್ಜುನ್ ನನ್ನು ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಸದ್ಯ ಕಿರಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ?
ಹಲ್ಲೆಗೊಳಗಾದ ಕಿರಣ್, ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದ. ಆರೋಪಿ ಅರ್ಜುನ್ ಕಾರು ಚಾಲಕನಾಗಿದ್ದ. ಕಳೆದೊಂದು ವರ್ಷದಿಂದ ಇಬ್ಬರು ಸ್ನೇಹಿತರಾಗಿದ್ದಾರೆ. ಆಗಾಗ ಅರ್ಜುನ್ ಮನೆಗೆ ಕಿರಣ್ ಬಂದು ಹೋಗುತ್ತಿದ್ದ. ಈ ಮಧ್ಯೆ ಸ್ನೇಹಿತನ ಪತ್ನಿಯನ್ನ ಸಂಪರ್ಕಿಸಲು ಹವಣಿಸುತ್ತಿದ್ದ. ನಿರಂತರವಾಗಿ ಕರೆ ಹಾಗೂ ವಾಟ್ಸ್ಆ್ಯಪ್ ಸಂದೇಶ ಕಳುಹಿಸುತ್ತಿದ್ದ. ಈ ವಿಷಯ ಅರಿತ ಆರೋಪಿ ಅರ್ಜುನ್ ಕೋಪಗೊಂಡಿದ್ದ.ತನ್ನ ಪತ್ನಿಗೆ ನಿರಂತರ ಕರೆಗೆ ಮಾಡುವುದನ್ನ ಮುಂದುವರಿಸಿದ್ದ ಸ್ನೇಹಿತನಿಗೆ ಬುದ್ಧಿ ಕಲಿಸಲು ಅರ್ಜುನ್ ಸಂಚು ರೂಪಿಸಿದ್ದ
ಫೆ.4 ರಾತ್ರಿ ಕಿರಣ್ನನ್ನು ಬಾರ್ಗೆ ಕರೆದೊಯ್ದು ಚೆನ್ನಾಗಿ ಕುಡಿಸಿದ್ದ. ಮನೆಯಿಂದ ಹೊರಡುವಾಗಲೇ ಲಾಂಗ್ ತೆಗೆದುಕೊಂಡು ಹೋಗಿದ್ದ ಅರ್ಜುನ್, ಮದ್ಯ ಸೇವನೆ ಬಳಿಕ ಗಾಣಿಗಾರ ಸರ್ಕಲ್ ಬಳಿ ಕಿರಣ್ ಮೇಲೆ ಅಟ್ಯಾಕ್ ಮಾಡಿದ್ದಾನೆ. ಲಾಂಗ್ನಿಂದ ಸ್ನೇಹಿತನ ಕುತ್ತಿಗೆ ಮೇಲೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದ. ಬಳಿಕ ಸ್ಥಳೀಯರ ನೆರವಿನಿಂದ ಕಿರಣ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.ಘಟನೆ ಕುರಿತು ಪೊಲೀಸರು ಅರ್ಜುನ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.