ಬೆಂಗಳೂರು : ಲೋಕಾಯುಕ್ತ ಕಚೇರಿ ಬಳಿ ಕೆಆರ್ಎಸ್ ಪಕ್ಷದಿಂದ ಪ್ರತಿಭಟನೆ ವಿಚಾರವಾಗಿ ಇದೀಗ ಪ್ರತಿಭಟನೆ ನಡೆಸಿದ್ದ 15 ಕಾರ್ಯಕರ್ತರ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಹೌದು ಅನುಮತಿ ಪಡೆಯದೆ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ. ಪ್ರತಿಭಟನೆ ನಡೆಸಿದ 15 ಕಾರ್ಯಕರ್ತರ ವಿರುದ್ಧ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.ಲೋಕಾಯುಕ್ತರು ಆಸ್ತಿ ಘೋಷಿಸಬೇಕು ಎಂದು KRS ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.