ಚಿತ್ರದುರ್ಗ : ಮಹಿಳೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಇದೀಗ ಹನಿ ಟ್ರ್ಯಾಪ್ಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹಿರೇಗುಂಟನೂರು ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಹನಿ ಟ್ರ್ಯಾಪ್ಗೆ ಒಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಮಂಜುನಾಥ್ ಮಹಿಳೆಯೊಂದಿಗೆ ಕಳೆದ 9 ವರ್ಷಗಳಿಂದ ಸಂಬಂಧ ಹೊಂದಿದ್ದ ಈ ವೇಳೆ ಮಹಿಳೆ 35 ಲಕ್ಷ ಹಣ ಮಂಜುನಾಥ್ ನಿಂದ ಪೀಕಿದ್ದಾಳೆ.ಅಲ್ಲದೇ ಕಾಗದದಲ್ಲೂ ನಿನಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬರೆಸಿಕೊಂಡಿದ್ದಾಳೆ. ಹಾಗಾಗಿ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಹಿಳೆ ಮೂರು ಮೊಬೈಲ್ ಫೋನ್ ಬಳಸುತ್ತಿದ್ದಳು. ಇದನ್ನು ಗಮನಿಸಿದ ಮಂಜುನಾಥ್, ಮಹಿಳೆಯ ಫೋನ್ ಪರಿಶೀಲಿಸಿದ್ದಾರೆ. ಆಗ ಕಾಂಟ್ಯಾಕ್ಟ್ ಲೀಸ್ಟ್ನಲ್ಲಿ ಹಲವು ಪುರುಷರ ನಂಬರ್ ಕಂಡು ಅನುಮಾನದಿಂದ ಪ್ರಶ್ನಿಸಿದ್ದಾರೆ. ಈ ವೇಳೆ ಮಂಜುನಾಥ್ ಈ ಹಿಂದೆ ನೀಡಿದ್ದ ಹಣವನ್ನು ವಾಪಾಸ್ ಕೇಳಿದ್ದಾರೆ. ಆಗ ಮಹಿಳೆ ವಿಡಿಯೋ ಮುಂದಿಟ್ಟು ಬೆದರಿಕೆ ಹಾಕಿದ್ದಾಳೆ. ಮರ್ಯಾದೆಗೆ ಅಂಜಿಕೊಂಡು ಮಂಜುನಾಥ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.