ತುಮಕೂರು : ಕೆಮ್ಮಿನ ಔಷಧ ಎಂದು ಭಾವಿಸಿ ಕೀಟನಾಶಕ ಸೇವಿಸಿ ರೈತನೊಬ್ಬ ಸಾವಿಗೀಡಾಗಿರುವ ಘಟನೆ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಶುಕ್ರವಾರ ಸಂಭವಿಸಿದೆ.
ಚೊಟ್ನರ್ ನಿಂಗಪ್ಪ (65) ಮೃತಪಟ್ಟವರು. ರಾತ್ರಿ ಕೆಮ್ಮು ಬಂದಿದ್ದು, ಕೆಮ್ಮಿನ ಔಷಧ ಎಂದುಕೊಂಡು ಗಿಡಕ್ಕೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು ಸೇವಿಸಿದರು.
ಬಳಿಕ ಅವರಿಗೆ ಅದು ಔಷಧವಲ್ಲ ಕೀಟನಾಶಕ ಎಂದು ತಿಳಿದಿದೆ ಕೊಡಲೇ ಮಕ್ಕಳಿಗೆ ಕೀಟನಾಶಕ ಸೇವಿಸಿದ್ದರ ಕುರಿತು ತಿಳಿಸಿದ್ದಾರೆ. ತಕ್ಷಣ ಮಕ್ಕಳು ನಿಂಗಪ್ಪ ಅವರು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಿಸಿದೆ ಅವರು ಸಾವನ್ನಪ್ಪಿದ್ದಾರೆ.