Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೆನಡಾದಲ್ಲಿ ವಾಸಿಸುವ ಕನಸು ಕಾಣುತ್ತಿದ್ದೀರಾ.? ಶಾಶ್ವತ ನಿವಾಸಕ್ಕೆ ಅರ್ಜಿ ಸಲ್ಲಿಸಲು 6,000 ವಿದೇಶಿಯರಿಗೆ ಆಹ್ವಾನ!

12/12/2025 10:05 PM

ಮದ್ಯಕ್ಕಿಂತ ಅಪಾಯಕಾರಿ ಈ ‘ಪಾನೀಯ’, ಕುಡಿದ್ರೆ ನಿಮ್ಮ ಕಿಡ್ನಿ ಹಾಳಾಗುತ್ವೆ!

12/12/2025 9:50 PM

ನಿಮ್ಮ ಹಳೆ ಫೋನ್ ಅದ್ಭುತ ಮಾಡುತ್ತೆ! ನಿಮಿಷದಲ್ಲೇ ಮನೆಯ ‘ಸೆಕ್ಯೂರಿಟಿ ಕ್ಯಾಮೆರಾ’ವನ್ನಾಗಿ ಪರಿವರ್ತಿಸ್ಬೋದು!

12/12/2025 9:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಲಿದ್ದೇವೆ: ಬಿವೈ ವಿಜಯೇಂದ್ರ
KARNATAKA

ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಲಿದ್ದೇವೆ: ಬಿವೈ ವಿಜಯೇಂದ್ರ

By kannadanewsnow0908/12/2024 7:38 PM

ದಾವಣಗೆರೆ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ರಾಜ್ಯ ಸರಕಾರದ ಭ್ರಷ್ಟಾಚಾರದ ಬಂಡವಾಳವನ್ನು ಬಯಲಿಗೆ ಎಳೆಯುತ್ತೇವೆ; ಉತ್ತರ ಕರ್ನಾಟಕ ಸೇರಿ ರಾಜ್ಯದ ವಿಚಾರದಲ್ಲಿ ಅಭಿವೃದ್ಧಿಶೂನ್ಯ ಸರಕಾರದ ಕಿವಿಹಿಂಡುವ ಕೆಲಸವನ್ನು ವಿರೋಧ ಪಕ್ಷವಾಗಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗಳಿಗೆ ಉತ್ತರಿಸಿದರು. ರೈತರು, ಬಡವರಿಗೆ ನ್ಯಾಯ ಸಿಗುತ್ತಿಲ್ಲ; ಮನೆಗಳನ್ನು ಕೊಡುತ್ತಿಲ್ಲ. ರೈತರು ಬೆಳೆದ ಬೆಳೆ ನಾಶವಾದರೆ ಪರಿಹಾರ ಕೊಡುತ್ತಿಲ್ಲ. ಎಲ್ಲ ವರ್ಗದ ಜನರು ಇವತ್ತು ಸಂಕಷ್ಟದಲ್ಲಿದ್ದಾರೆ. ಇವರು ಭ್ರಷ್ಟಾಚಾರದಲ್ಲಿ ಮುಳುಗಿ, ಅಭಿವೃದ್ಧಿ ಮಾಡದ ಕಾರಣ ಜನರಿಗೆ ಕಾಂಗ್ರೆಸ್ ಪಕ್ಷದ ಸರಕಾರ ಶಾಪವಾಗಿ ಪರಿಣಮಿಸಿದೆ ಎಂದು ಟೀಕಿಸಿದರು.

ವಕ್ಫ್ ಸಮಸ್ಯೆ ಸಂಬಂಧ ಪ್ರವಾಸ ಸಂಪೂರ್ಣ ಮುಗಿದಿಲ್ಲ; ಅಧಿವೇಶನ ಮುಗಿದ ಬಳಿಕ ಪ್ರವಾಸವನ್ನು ಮುಂದುವರೆಸುತ್ತೇವೆ. ಅಂತಿಮವಾಗಿ ನಾವು ವರದಿಯನ್ನು ಕೇಂದ್ರದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷರಿಗೆ ನೀಡುತ್ತೇವೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

ಗ್ಯಾರಂಟಿ ಹೆಸರಿನಲ್ಲಿ ಬಡವರಿಗೆ ಅವಮಾನ

ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಾಗದೆ, ಹಣ ಕ್ರೋಡೀಕರಿಸಲು ಸಾಧ್ಯವಾಗದೆ ಸರಕಾರ ಪರದಾಡುತ್ತಿದೆ. ಲೋಕಸಭೆ ಚುನಾವಣೆಗೆ 3 ದಿನ ಇದ್ದಾಗ ಗ್ಯಾರಂಟಿಗಳ ಹಣವನ್ನು ಖಾತೆಗೆ ಹಾಕಿದ್ದರು. ಚುನಾವಣೆ ಬಳಿಕ ಮರೆತಿದ್ದರು. ಮೊನ್ನೆ ಉಪ ಚುನಾವಣೆ ಬಂದಾಗ ಮತ್ತೆ ರಿಲೀಸ್ ಮಾಡಿದ್ದು, ಬಡವರಿಗೆ ಅವಮಾನ ಮಾಡುತ್ತಿದ್ದಾರೆ. ಗ್ಯಾರಂಟಿ ಕೊಡಲು ಯಾರೂ ಕೇಳಿರಲಿಲ್ಲ. ಗ್ಯಾರಂಟಿಗಳೂ ಮನೆ ತಲುಪುತ್ತಿಲ್ಲ. ಅಭಿವೃದ್ಧಿಯೂ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಇದರಿಂದ ಆಡಳಿತ ಪಕ್ಷದ ಶಾಸಕರೇ ತಲೆ ಎತ್ತಿ ಓಡಾಡಲು ಆಗುತ್ತಿಲ್ಲ ಎಂದು ವಿವರಿಸಿದರು.

ಬಾಣಂತಿಯರು, ಗರ್ಭಿಣಿಯರು, ನವಜಾತ ಶಿಶುಗಳ ಸಾವು ಸಂಬಂಧ ನಮ್ಮ ಮಹಿಳಾ ಮೋರ್ಚಾದ ತಂಡವು ನಿನ್ನೆ ಭೇಟಿ ಕೊಟ್ಟಿದೆ. ವರದಿ ಪಡೆದು ರಾಜ್ಯ ಸರಕಾರಕ್ಕೆ ಚಾಟಿ ಬೀಸಲಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಯತ್ನಾಳ್ ಅವರು ವಕ್ಫ್ ನೀತಿ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಹೇಳಿದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಮಾಡಲಿ; ಅವರದು ದೀರ್ಘಾವಧಿಯ ಕಾರ್ಯತಂತ್ರ ಇದೆ. ರಾಷ್ಟ್ರೀಯ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು. ಅವರ ಎಲ್ಲ ಅನುಮಾನ, ಪ್ರಶ್ನೆ, ಆಸೆಗಳಿಗೆ ಕಾಲವೇ ಉತ್ತರ ಕೊಡಲಿದೆ; ಅವರಿಗೆ ಒಳ್ಳೆಯದಾಗಲಿ, ನಾನೇನೂ ಕೆಟ್ಟದು ಬಯಸುವುದಿಲ್ಲ ಎಂದು ತಿಳಿಸಿದರು.

ಪಕ್ಷದ ಸಂಘಟನೆಗಾಗಿ ನನಗೆ ಈ ಹುದ್ದೆ ಕೊಟ್ಟಿದ್ದಾರೆ; ಮುಖ್ಯಮಂತ್ರಿ ಆಗಲಿ ಎಂದಲ್ಲ; ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

Share. Facebook Twitter LinkedIn WhatsApp Email

Related Posts

BREAKING: ರಾಜ್ಯಾದ್ಯಂತ ‘ಸರ್ಕಾರಿ ಶಾಲೆ’ಗಳಲ್ಲಿ ‘2,200 ಕೊಠಡಿ’ಗಳ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ

12/12/2025 8:56 PM5 Mins Read

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಕರ್ನಾಟಕ ಸರ್ಕಾರ ಆದೇಶ

12/12/2025 8:53 PM2 Mins Read

ಇಂದು ಶಿಗ್ಗಾಂವಿ ಕ್ಷೇತ್ರದ ಜನತೆಯ ಬಹುದಿನದ ಕನಸು ನನಸು: ಸಂಸದ ಬಸವರಾಜ ಬೊಮ್ಮಾಯಿ

12/12/2025 8:22 PM1 Min Read
Recent News

ಕೆನಡಾದಲ್ಲಿ ವಾಸಿಸುವ ಕನಸು ಕಾಣುತ್ತಿದ್ದೀರಾ.? ಶಾಶ್ವತ ನಿವಾಸಕ್ಕೆ ಅರ್ಜಿ ಸಲ್ಲಿಸಲು 6,000 ವಿದೇಶಿಯರಿಗೆ ಆಹ್ವಾನ!

12/12/2025 10:05 PM

ಮದ್ಯಕ್ಕಿಂತ ಅಪಾಯಕಾರಿ ಈ ‘ಪಾನೀಯ’, ಕುಡಿದ್ರೆ ನಿಮ್ಮ ಕಿಡ್ನಿ ಹಾಳಾಗುತ್ವೆ!

12/12/2025 9:50 PM

ನಿಮ್ಮ ಹಳೆ ಫೋನ್ ಅದ್ಭುತ ಮಾಡುತ್ತೆ! ನಿಮಿಷದಲ್ಲೇ ಮನೆಯ ‘ಸೆಕ್ಯೂರಿಟಿ ಕ್ಯಾಮೆರಾ’ವನ್ನಾಗಿ ಪರಿವರ್ತಿಸ್ಬೋದು!

12/12/2025 9:10 PM

BREAKING: ರಾಜ್ಯಾದ್ಯಂತ ‘ಸರ್ಕಾರಿ ಶಾಲೆ’ಗಳಲ್ಲಿ ‘2,200 ಕೊಠಡಿ’ಗಳ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ

12/12/2025 8:56 PM
State News
KARNATAKA

BREAKING: ರಾಜ್ಯಾದ್ಯಂತ ‘ಸರ್ಕಾರಿ ಶಾಲೆ’ಗಳಲ್ಲಿ ‘2,200 ಕೊಠಡಿ’ಗಳ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ

By kannadanewsnow0912/12/2025 8:56 PM KARNATAKA 5 Mins Read

ಬೆಂಗಳೂರು: ರಾಜ್ಯ ಸರ್ಕಾರವು 2025-26ನೇ ಸಾಲಿನಲ್ಲಿ ಹೊಸ ಶಆಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.…

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಕರ್ನಾಟಕ ಸರ್ಕಾರ ಆದೇಶ

12/12/2025 8:53 PM

ಇಂದು ಶಿಗ್ಗಾಂವಿ ಕ್ಷೇತ್ರದ ಜನತೆಯ ಬಹುದಿನದ ಕನಸು ನನಸು: ಸಂಸದ ಬಸವರಾಜ ಬೊಮ್ಮಾಯಿ

12/12/2025 8:22 PM

ಚಿಕ್ಕಮಗಳೂರಿನಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ‘ಸ್ಪೈಸ್ ಪಾರ್ಕ್’ ಅಭಿವೃದ್ಧಿ: ಸಚಿವ ರಾಮಲಿಂಗಾರೆಡ್ಡಿ

12/12/2025 8:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.